Actor Sudeep: ಜೈಲಿಗೆ ಹೋಗಿ ದರ್ಶನ್ ನ ಭೇಟಿ ಮಾಡಬೇಕೆನಿಸಿತ್ತಾ? ಪ್ರಶ್ನೆಗೆ ನೇರ ಉತ್ತರ ಕೊಟ್ಟ ಕಿಚ್ಚ ಹೇಳಿದ್ದೇನು

Written by Soma Shekar

Published on:

---Join Our Channel---

Actor Sudeep: ಸ್ಯಾಂಡಲ್ವುಡ್ ನ ಸ್ಟಾರ್ ನಟ ಕಿಚ್ಚ ಸುದೀಪ್ (Actor Sudeep) ಅವರು ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಒಂದಷ್ಟು ವಿಚಾರಗಳನ್ನು ಕುರಿತಾಗಿ ಮಾತನಾಡಿದ್ದಾರೆ. ಅಲ್ಲದೇ ಇದೇ ವೇಳೆ ಅವರು ಕೊ ಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಬಗ್ಗೆ ಸಹಾ ಮತ್ತೊಮ್ಮೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಸುದೀಪ್ ಅವರು ತಮ್ಮ ಹುಟ್ಟು ಹಬ್ಬದ ದಿನ ಅಭಿಮಾನಿಗಳು ಮನೆ ಬಳಿ ಬರಬೇಡಿ,‌ಎಂಜಿಎಸ್ ಗ್ರೌಂಡ್ ಗೆ ಬನ್ನಿ ಅಲ್ಲೇ ಸಿಗ್ತೀನಿ ಎಂದಿದ್ದಾರೆ.‌

ಮಾದ್ಯಮಗಳು ದರ್ಶನ್ (Darshan) ಅವರ ಜೈಲು ಪ್ರಕರಣದ ಬಗ್ಗೆ ಕೇಳಿದಾಗ, ಸುದೀಪ್ ಅವರು, ನಾನು ಹೇಳಬೇಕಾಗಿರೋದು ಈಗಾಗಲೇ ಹೇಳಿದ್ದೇನೆ. ಮತ್ತೆ ಹೇಳಿ ಅವರ ಅಭಿಮಾನಿಗಳಿಗೆ ನೋವಾಗುವುದು ಬೇಡ.‌ ಮತ್ತೊಂದು ಕಡೆ ಇನ್ನೊಂದು ಕುಟುಂಬ ಇದೆ ಅವರಿಗೂ ನೋವು ಬೇಡ. ಕಾನೂನು, ಸರ್ಕಾರ ಇದೆ. ನಂಬಿಕೆ ಇದೆ. ಮಾದ್ಯಮ ನೋಡಿ ನಮಗೂ ಎಲ್ಲಾ ಗೊತ್ತಾಗ್ತಿದೆ ಎಂದಿದ್ದಾರೆ. ‌

ಜೈಲಿಗೆ ಹೋಗಿ ದರ್ಶನ್ ಅವರನ್ನು ನೋಡಬೇಕು ಅನಿಸುತ್ತಾ ಎನ್ನುವ ಪ್ರಶ್ನೆಗೆ ಸುದೀಪ್ ಅವರು, ನಾವಿಬ್ಬರೂ ಒಟ್ಟಿಗೆ ಚೆನ್ನಾಗಿ ಮಾತನಾಡಿಕೊಂಡಿದ್ದರೆ ಖಂಡಿತ ನಾನು ಹೋಗಿ ಭೇಟಿ ಮಾಡ್ತಿದ್ದೆ. ಆದರೆ ನಾವಿಬ್ಬರೂ ಮಾತನಾಡುತ್ತಿಲ್ಲವೇ? ಕೆಲವೊಮ್ಮೆ ಅಂತರ ಯಾಕೆ ಕಾಯ್ದುಕೊಳ್ತೀವಿ ಅಂದ್ರೆ ನಾವು ಸರಿಯಲ್ಲ, ಅವರು ಸರಿಯಲ್ಲ ಅಂತಲ್ಲ. ನಾವಿಬ್ಬರೂ ಒಟ್ಟಿಗೆ ಸರಿಯಲ್ಲ.‌

ಸೂರ್ಯ, ಹಗಲು, ಚಂದ್ರ ರಾತ್ರಿ ಬರಬೇಕು. ಆಗಲೇ ಚೆಂದ, ಎರಡೂ ಒಟ್ಟಿಗೆ ಬಂದರೆ ಸಮಸ್ಯೆ ಆಗುತ್ತದೆ ಎಂದು ಸಹಾ ಸುದೀಪ್ ಅವರು ಹೇಳಿದ್ದಾರೆ. ‌ದರ್ಶನ್ ವ್ಯಕ್ತಿತ್ವದಲ್ಲಿ ತೊಂದರೆ ಇದೆ ಎಂದು ನಾನು ಹೇಳ್ತಿಲ್ಲ. ನಾನು ಬೇರೆ, ಅವರು ಬೇರೆ, ನಮ್ಮಿಬ್ಬರ ಟೇಸ್ಟ್ ಬೇರೆ ಬೇರೆ.‌ ಹಾಗಂತ ನಾವು ಒಟ್ಟಿಗೆ ಇರಲಿಲ್ಲವೇ, ಆದರೆ ಯಾರೋ ಹೇಳ್ತಾರೆ ಅಂತ ಮಾಡೋಕೆ ಆಗಲ್ಲ. ಮನಸ್ಸಿಂದ ಬಂದರೆ ಯಾರು ಏನೇ ಅಂದರೂ ನಾನು ಹೋಗ್ತೀನಿ ಎಂದಿದ್ದಾರೆ.

Pradeep Eshwar: ಮೆಗಾಸ್ಟಾರ್ ಚಿರಂಜೀವಿ ಅವರ ಸಿನಿಮಾದಲ್ಲಿ ಶಾಸಕ ಪ್ರದೀಪ್ ಈಶ್ವರ್ ? ಏನಿದು ಹೊಸ ಸುದ್ದಿ

Leave a Comment