Sathya Serial: ಶೀಘ್ರದಲ್ಲೇ ಮುಗೀತಿದೆ ಸತ್ಯ ಸೀರಿಯಲ್; ಅಣ್ಣಯ್ಯನ ಆಗಮನಕ್ಕೆ ಸತ್ಯ ಅಂತ್ಯ?

Written by Soma Shekar

Published on:

---Join Our Channel---

Sathya Serial: ಕನ್ನಡ ಕಿರುತೆರೆಯಲ್ಲಿ ಶೀಘ್ರದಲ್ಲೇ ಅಣ್ಣಯ್ಯ (Annayya) ಸೀರಿಯಲ್ ಬರಲಿದೆ ಅಂತ ಪ್ರೊಮೋ ಬಿಡುಗಡೆಯಾಗಿದ್ದು, ಈಗಾಗಲೇ ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದೆ. ಇದೇ ವೇಳೆ ಅಣ್ಣಯ್ಯ ಧಾರಾವಾಹಿ ಪ್ರಸಾರ ಆರಂಭಿಸೋಕೆ ಯಾವ ಧಾರಾವಾಹಿ ಮುಗಿಯುತ್ತೆ ಅನ್ನೋ ಪ್ರಶ್ನೆ ಪ್ರೇಕ್ಷಕರನ್ನ ಕಾಡುವಾಗಲೇ ಜನಪ್ರಿಯ ಧಾರಾವಾಹಿ ಸತ್ಯ ಮುಗಿಯಲಿದೆ ಎನ್ನುವ ಸುದ್ದಿಗಳು ಹರಿದಾಡಿದೆ.

ಸತ್ಯ ಧಾರಾವಾಹಿ (Sathya Serial) ಮುಗಿಯಲಿದೆ ಎಂದು ಸುದ್ದಿಗಳು ಹರಡಿದೆಯಾದರೂ ವಾಹಿನಿಯಾಗಲೀ, ಸೀರಿಯಲ್ ತಂಡವಾಗಲೀ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿಲ್ಲ. 2020 ರಲ್ಲಿ ಆರಂಭವಾದ ಸತ್ಯ ಸೀರಿಯಲ್ ಆರಂಭದ ವಾರಗಳಲ್ಲಿ ಟಾಪ್ ಐದರಲ್ಲಿ ಸ್ಥಾನವನ್ನು ಪಡೆದುಕೊಂಡಿತ್ತು. ದಿನ ಕಳೆದಂತೆ ಅದರ ಟಿ ಆರ್ ಪಿ ಕಡಿಮೆಯಾಗಿತ್ತಾ ಬಂದಿದೆ.

ಸತ್ಯ ಅತ್ತೆ ಮನೆಗೆ ಬಂದ ಮೇಲೆ ಆರಂಭದಲ್ಲಿ ಕಷ್ಟ ಅನುಭವಿಸಿದ್ರು, ನಂತರ ಮನೆಯವರ ಬೆಂಬಲದಿಂದ ಪೊಲೀಸ್ ಅಧಿಕಾರಿಯಾಗಿದ್ದಾಳೆ. ಇದೆ ವೇಳೆ ಮನೆಯವರ ಸಂತೋಷಕ್ಕಾಗಿ ಗರ್ಭಿಣಿಯಾಗಿದ್ದು, ಕೋಟೆ ಮನೆಗೆ ಪುಟ್ಟ ಮಗು ಬರುತ್ತಿರೋ ವಿಚಾರ ಎಲ್ಲರಿಗೂ ಖುಷಿ ನೀಡಿದೆ. ಮತ್ತೊಂದು ಕಡೆ ಕೀರ್ತನಾ ಮಗುವಿಗೆ ಏನು ಅಪಾಯಮಾಡುತ್ತಾಳೋ ಅನ್ನೋ ಅನುಮಾನಗಳು ಕಾಡುತ್ತಿವೆ.

ಮತ್ತೊಂದು ಕಡೆ ಧಾರಾವಾಹಿಯ ಎಪಿಸೋಡ್ ಗಳು ಬಹಳ ವೇಗವಾಗಿ ಮುಂದೆ ಸಾಗ್ತಿದೆ. ಹೀಗೆ ಸಿರಿಯಲ್ ಕಥೆಯ ವೇಗ ಹೆಚ್ಚಿದ್ದನ್ನ ನೋಡಿದವರು ಬಹುಶಃ ಧಾರಾವಾಹಿಯನ್ನು ಮುಗಿಸೋ ಉದ್ದೇಶದಿಂದ ಈ ರೀತಿ ವೇಗವಾಗಿ ನಡೆಸ್ತಾ ಇರಬೇಕೆಂದು ಅನುಮಾನ ಪಟ್ಟಿದ್ದಾರೆ.

ಸತ್ಯ ಧಾರಾವಾಹಿ ಸಿಂಧೂರ ಹೆಸರಿನ ಸೀರಿಯಲ್ ನ ರಿಮೇಕ್ ಆಗಿದ್ದು, ಈಗಾಗಲೇ ಇದು ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಕೂಡಾ ರಿಮೇಕ್ ಆಗಿ ಜನಪ್ರಿಯತೆ ಪಡೆದುಕೊಂಡಿವೆ. ಕನ್ನಡದಲ್ಲೂ ಸಹಾ ಸತ್ಯ ಸೀರಿಯಲ್ ದೊಡ್ಡ ಪ್ರೇಕ್ಷಕರ ಬಳಗವನ್ನು ಪಡೆದುಕೊಂಡಿದೆ.

Amruthadhaare: ಪ್ಲಾನ್ ನಲ್ಲಿ ಶಕುಂತಲಾ ಸಕ್ಸಸ್, ಅಪ್ಪಿ ಬದುಕಲ್ಲಿ ಭೂಮಿಕಾ ವಿಲನ್, ಶಕುಂತಲಾ ದೇವತೆ

Leave a Comment