SeethaRama: ಸಿಹಿನ ಪದೇ ಪದೇ ಕಿಡ್ನಾಪ್ ಮಾಡೋದು ಬಿಟ್ರೆ ಬೇರೆ ಕಥೆ ಇಲ್ವಾ? ಸೀರಿಯಲ್ ಮೇಲೆ ರೊಚ್ಚಿಗೆದ್ದ ಪ್ರೇಕ್ಷಕರು

Written by Soma Shekar

Published on:

---Join Our Channel---

SeethaRama : ಕಿರುತೆರೆಯಲ್ಲಿ ಸಾಮಾನ್ಯವಾಗಿಯೇ ಜನಪ್ರಿಯ ಸೀರಿಯಲ್ ಗಳನ್ನು ಒಂದಷ್ಟು ವರ್ಷ ಎಳೆಯೋಕೆ ಅಂತಾನೇ ಕಥೆಯಲ್ಲಿ ಹೊಸ ಟ್ವಿಸ್ಟ್ ಅಂತ ಹೇಳಿ ಏನಾದ್ರೊಂದು ಮಾಡಿ ಕಥೆಯನ್ನು ರಬ್ಬರ್ ತರ ಎಳೆಯಲಾಗುತ್ತೆ. ಅದರಲ್ಲೂ ಒಳ್ಳೆ ಟಿಆರ್‌ಪಿ ಇರೋ ಸೀರಿಯಲ್ ಗಳಲ್ಲಿ ಹೊಸ ಹೊಸ ಪಾತ್ರಗಳು ಸಹಾ ಎಂಟ್ರಿಯನ್ನು ಕೊಡ್ತಾವೆ. ಇದನ್ನ ನೋಡಿ ಅನೇಕ ಸಲ ಪ್ರೇಕ್ಷಕರು ಸಹಾ ಬೇಸರವನ್ನು ವ್ಯಕ್ತಪಡಿಸುತ್ತಾರೆ ಹಾಗೂ ಅಸಮಾಧಾನ ಹೊರ ಹಾಕ್ತಾರೆ.

ಈಗ ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಸೀತಾ ರಾಮದಲ್ಲಿ (SeethaRama) ಹೊಸ ಟ್ವಿಸ್ಟ್ ನೋಡಿ ಪ್ರೇಕ್ಷಕರು ಮತ್ತು ನೆಟ್ಟಿಗರು ಅಸಮಾಧಾನಗೊಂಡಿದ್ದಾರೆ. ಸೀತಾ ರಾಮ ಇಬ್ಬರನ್ನೂ ದೂರ ಮಾಡಬೇಕೆಂದು ಪ್ರಯತ್ನ ಪಟ್ಟವರು ಭಾರ್ಗವಿ ಮತ್ತು ರುದ್ರ ಪ್ರತಾಪ್. ಅವರ ಮದುವೆಯನ್ನು ತಪ್ಪಿಸಲು ಏನೆಲ್ಲಾ ಪ್ರಯತ್ನ ಮಾಡಿದರೂ ವಿಫಲವಾಗಿ ಸೀತಾರಾಮ ಮದುವೆ ನಡೆದಿದೆ.

ಸೀತಾರಾಮನ ಜೋಡಿಯ ನಡುವಿನ ನವಿರಾದ ಪ್ರೇಮ ಕಥೆಯನ್ನು ನೋಡಲು ಬಯಸಿದ್ದ ಪ್ರೇಕ್ಷಕರಿಗೆ ಈಗ ಬೇಸರವಾದಂತೆ ಕಾಣ್ತಿದೆ. ‌ಸೋಶಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರಂತೂ ಟೀಕೆಗಳ ಕಾಮೆಂಟ್ ಗಳು ಹರಿದು ಬರುತ್ತಿದೆ. ಇದಕ್ಕೆ ಮುಖ್ಯ ಕಾರಣವಾಗಿರೋದು ಕಥೆಯನ್ನು ಮುಂದುವರೆಸೋಕೆ ಸಿಹಿಯನ್ನ ಮುಂದಿಟ್ಟುಕೊಂಡು ಕಥೆಯನ್ನು ಅಡ್ಡಾ ದಿಡ್ಡಿಯಾಗಿ ಓಡಿಸುತ್ತಿರೋದು ಆಗಿದೆ.

ವಿಲನ್ ಗಳ ಸ್ವಾರ್ಥಕ್ಕಾಗಿ ಈಗಾಗಲೇ ಎರಡು ಸಲ ಸಿಹಿಯನ್ನ ಕಿಡ್ನಾಪ್ ಮಾಡಲಾಗಿತ್ತು. ಈಗ ಮತ್ತೊಮ್ಮೆ ಅದೇ ಪ್ಲಾನ್ ಗೆ ರೂಪ ಕೊಡೋಕೆ ಹೊರಟಿದ್ದಾರೆ ಭಾರ್ಗವಿ ಮತ್ತು ಆಕೆಯ ಗಂಡ. ಸಿಹಿಯನ್ನು ದೂರ ಮಾಡಿದರಷ್ಟೇ ಸೀತಾ ಮತ್ತು ರಾಮ ಸಂಕಟ ಪಡೋದು ಅನ್ನೋ ಕಾರಣಕ್ಕೆ ಸಿಹಿಯನ್ನು ಅಪಹರಣ ಮಾಡೋದಕ್ಕೆ ನೋಡಿದ್ದಾರೆ. ಭಾರ್ಗವಿ ಈಗಾಗಲೇ ನಿಮ್ಮ ಅಪ್ಪ ಅಮ್ಮ ಚೆನ್ನಾಗಿರಬೇಕಂದ್ರೆ ನೀನು ದೂರ ಆಗಬೇಕು ಅಂತ ಸಿಹಿ ಬ್ರೈನ್ ವಾಶ್ ಮಾಡಿದ್ದಾಳೆ.

ಭಾರ್ಗವಿ ಮಗ ಕೂಡಾ ಸಿಹಿಗೆ ಟಾರ್ಚರ್ ಕೊಡೋದ್ರಲ್ಲಿ ಅಮ್ಮನ ಪಡಿಯಚ್ಚು. ಈಗ ಇವೆಲ್ಲವುಗಳ ನಡುವೆ ಶಾಲೆಯಿಂದ ಸಿಹಿಯನ್ನು ಕಿಡ್ನಾಪ್ ಮಾಡಲಾಗಿದೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ನೆಟ್ಟಿಗರು ಒಂದೇ ಸಮನೆ ಸೀರಿಯಲ್ ಅನ್ನು ಬೈಯ್ಯಲು ಶುರು ಮಾಡಿದ್ದು, ಎಷ್ಟು ಅಂತ ಹೇಳಿದ್ದನ್ನೇ ಹೇಳ್ತೀರಾ, ಬೇರೆ ಕಥೆ ಇಲ್ವಾ? ಡಬ್ಬಾ ಸೀರಿಯಲ್​ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.

Keerthy Suresh: ಕೀರ್ತಿ ಹೊಸ ಅವತಾರ ಕಂಡು ನಿದ್ದೆಗೆಟ್ಟ ಪಡ್ಡೆಗಳು; ನಟಿಯ ಅಂದಕ್ಕೆ ಮಾರು ಹೋದ ಫ್ಯಾನ್ಸ್

Leave a Comment