Rishab Shetty: ಕಾಂತಾರ (Kantara) ಸಿನಿಮಾದ ಮೂಲಕ ದೇಶದೆಲ್ಲೆಡೆ ಸದ್ದು ಮತ್ತು ಸುದ್ದಿಯನ್ನು ಮಾಡಿದವರು ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು. ಪ್ರಸ್ತುತ ಅವರು ತನ್ನ ಕಾಂತಾರ ಪ್ರೀಕ್ವೆಲ್ ನ ನಿರ್ಮಾಣದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂತಾರ ಪ್ರೀಕ್ವೆಲ್ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಸಹಾ ಹುಟ್ಟು ಹಾಕಿದೆ. ರಿಷಬ್ ಶೆಟ್ಟಿ ಅವರು ಸಿನಿಮಾದ ಕೆಲಸಗಳ ಜೊತೆಗೆ ತಮ್ಮ ಕುಟುಂಬಕ್ಕೆ ಕೂಡಾ ಬಹಳ ಆದ್ಯತೆಯನ್ನು ನೀಡುತ್ತಾರೆ.
![](https://news9kannada.com/wp-content/uploads/2024/05/FB_IMG_1716801965860-1024x768.webp)
ಆಗಾಗ ಕುಟುಂಬದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳು, ಬಿಡುವಿನ ಸಮಯದಲ್ಲಿ ಕುಟುಂಬದ ಜೊತೆಗೆ ಕಳೆದ ಸುಂದರ ಕ್ಷಣಗಳು ಹೀಗೆ ಒಂದಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾರೆ.
![](https://news9kannada.com/wp-content/uploads/2024/05/FB_IMG_1716801968329-1024x772.webp)
ಇತ್ತೀಚಿಗೆ ರಿಷಬ್ ಶೆಟ್ಟಿ ಅವರು ತಮ್ಮ ಮುದ್ದು ಮಗಳ ಅಕ್ಷರಾಭ್ಯಾಸ ಆರಂಭವನ್ನು ಸಾಂಪ್ರದಾಯಿಕ ವಿಧಿ ವಿಧಾನದ ಮೂಲಕ ಆರಂಭಿಸಿದ ಕ್ಷಣಗಳ ಆಕರ್ಷಕ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.
![](https://news9kannada.com/wp-content/uploads/2024/05/FB_IMG_1716801970764-1024x768.webp)
ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಶೇರ್ ಮಾಡಿಕೊಂಡ ನಟ ಶ್ರೀ ಶಾರದಾಂಬೆಯ ಸನ್ನಿಧಾನದಲ್ಲಿ ನಮ್ಮ ಪುಟ್ಟ ರಾಧ್ಯಾಳ ಅಕ್ಷರಾಭ್ಯಾಸದ ಕ್ಷಣ ಎಂದು ಬರೆದುಕೊಂಡು ತಮ್ಮ ಸಂತೋಷವನ್ನು ಎಲ್ಲರ ಜೊತೆಗೆ ಶೇರ್ ಮಾಡಿಕೊಂಡಿದ್ದಾರೆ.
![](https://news9kannada.com/wp-content/uploads/2024/05/FB_IMG_1716801973055-1024x768.webp)
ಹಾಗೇ ಪುಟ್ಟ ಹೆಜ್ಜೆಗಳಿಂದ ಪುಟ್ಟ ಪದಗಳವರೆಗೆ, ಶ್ರೀ ಶಾರದಾಂಬೆಯ ಕೃಪೆಯಿಂದ ನಮ್ಮ ಪುಟ್ಟ ಮಗಳ ‘ಅಕ್ಷರ ಅಭ್ಯಾಸ’ ಸಮಾರಂಭ ನೆರವೇರಿತು ಎಂದು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಪುಣ್ಯವಂತರು ಎಂದು ಸಹಾ ನಟ ಹೇಳಿದ್ದಾರೆ.
![](https://news9kannada.com/wp-content/uploads/2024/05/FB_IMG_1716801975272-1024x768.webp)
ರಿಷಬ್ ಶೆಟ್ಟಿ ಅವರು ಶೇರ್ ಮಾಡಿದ ಫೋಟೋಗಳಿಗೆ ಅವರ ಅಭಿಮಾನಿಗಳು ಮತ್ತು ನೆಟ್ಟಿಗರಿಂದ ಮೆಚ್ಚುಗೆಗಳು ಹರಿದು ಬಂದಿದ್ದು, ತಾಯಿ ಶಾರದಾಂಬೆಯ ಅನುಗ್ರಹ ಸದಾ ನಿಮ್ಮ ಮಗಳ ಮೇಲೆ ಇರಲಿ ಎಂಬುದಾಗಿ ಶುಭವನ್ನು ಹಾರೈಸಿದ್ದಾರೆ.