Aishwarya Rai: ಐಶ್ವರ್ಯ ತ್ಯಾಗಕ್ಕೆ ಬೆಲೇನೇ ಇಲ್ವಾ? ಬಚ್ಚನ್ ಫ್ಯಾಮಿಲಿ ಮೇಲೆ ಸಿಟ್ಟಾದ ನೆಟ್ಟಿಗರು

Written by Soma Shekar

Published on:

---Join Our Channel---

Aishwarya Rai: ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ (Anant Radhika Wedding) ವಿವಾಹ ಮಹೋತ್ಸವಕ್ಕೆ ಸಂಪೂರ್ಣ ಬಾಲಿವುಡ್ ಹಾಜರಾಗಿತ್ತು. ಈ ಮದುವೆಯಲ್ಲಿ ಬಾಲಿವುಡ್ ನ ಪ್ರಮುಖ ಹಿರಿಯ ನಟ ಅಮಿತಾಬ್ ಬಚ್ಚನ್ ಕುಟುಂಬ ಸಮೇತರಾಗಿ ಮದುವೆಗೆ ಹಾಜರಾಗಿದ್ದರು. ಆದರೆ ಅವರ ಕುಟುಂಬದಲ್ಲಿ ಐಶ್ವರ್ಯ ರೈ ಇರಲಿಲ್ಲ. ಇದನ್ನ ನೋಡಿ ಬಚ್ಚನ್ ಫ್ಯಾಮಿಲಿಯಲ್ಲಿ ಐಶ್ವರ್ಯ ರೈಗೆ (Aishwarya Rai) ಮೊದಲಿನ ಸ್ಥಾನ ಇದ್ದಂತಿಲ್ಲ ಎನ್ನುವ ಅನುಮಾನ ಮೂಡಿದೆ.

ಅಂಬಾನಿ ಮದುವೆ ಸಮಾರಂಭಕ್ಕೆ ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಅಭಿಷೇಕ್ ಬಚ್ಚನ್, ಅಮಿತಾಬ್ ಅವರ ಹೆಣ್ಣು ಮಕ್ಕಳು, ಅಳಿಯ ಮತ್ತು ಮೊಮ್ಮಕ್ಕಳು ಒಟ್ಟಿಗೆ ಆಗಮಿಸಿದ್ದರು. ಆದರೆ ಐಶ್ವರ್ಯಾ ಹಾಗೂ ಅವರ ಪುತ್ರಿ ಆರಾಧ್ಯ ಮಾತ್ರ ಕುಟುಂಬದ ಜೊತೆಗಲ್ಲ ಬದಲಾಗಿ ಪ್ರತ್ಯೇಕವಾಗಿ ಮದುವೆಗೆ ಆಗಮಿಸಿ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದ್ದರು.

ಕಳೆದ ಕೆಲವು ತಿಂಗಳುಗಳಿಂದಲೂ ಅಭಿಷೇಕ್ ಮತ್ತು ಐಶ್ವರ್ಯ ನಡುವಿನ ದಾಂಪತ್ಯದಲ್ಲಿ ಏನೋ ಸಮಸ್ಯೆ ಇದೆ ಎನ್ನುವ ಸುದ್ದಿಗಳು ಹರಿದಾಡಿವೆ. ಈಗಂತೂ ಅಭಿಷೇಕ್ ಮತ್ತು ಐಶ್ವರ್ಯ ವಿಚ್ಚೇದನ ಪಕ್ಕಾ ಎನ್ನುವ ಮಾತುಗಳನ್ನು ನೆಟ್ಟಿಗರು ಆಡುತ್ತಿದ್ದಾರೆ.‌ ಅಲ್ಲದೇ ಬಹಳಷ್ಟು ಜನರು ಬಚ್ಚನ್ ಕುಟುಂಬ ಐಶ್ವರ್ಯ ಅವರನ್ನು ದೂರ ಇಟ್ಟಿದ್ದಕ್ಕೆ ಬಚ್ಚನ್ ಕುಟುಂಬವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.‌

ಐಶ್ವರ್ಯ ರೈ ದಾಂಪತ್ಯಕ್ಕೆ ಕಾಲಿಡುವ ದಿನಗಳಲ್ಲಿ ಬಾಲಿವುಡ್ ಟಾಪ್ ತಾರೆಯಾಗಿದ್ದವರು. ಅಲ್ಲದೇ ಮಿಸ್ ವರ್ಲ್ಡ್ ಪ್ರಶಸ್ತಿ ಗೆದ್ದಿದ್ದ ಅಂದಗಾತಿ. ಬಯಸಿದ್ದರೆ ಬಾಲಿವುಡ್ ನಲ್ಲಿ ಅಭಿಷೇಕ್ ಬಚ್ಚನ್, ಜಯಾ ಬಚ್ಚನ್ ಅವರಿಗಿಂತ ದೊಡ್ಡ ಹೆಸರನ್ನು ಮಾಡುವ ಅವಕಾಶವಿತ್ತು.‌ ಆದರೆ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾದ ನಂತರ ಐಶ್ವರ್ಯ ಸಿನಿಮಾಕ್ಕಿಂತ ಕುಟುಂಬದ ಕಡೆಗೆ ಹೆಚ್ಚು ಗಮನ ನೀಡಿದರು.

ವೃತ್ತಿಗಿಂತಲೂ ಕುಟುಂಬ ಮುಖ್ಯ ಎಂದೇ ತೀರ್ಮಾನಿಸಿದ ಐಶ್ವರ್ಯ ರೈ ಸಿನಿಮಾ ರಂಗದ ಕಡೆಗೆ ಗಮನ ನೀಡುವುದನ್ನೇ ಬಿಟ್ಟರು.‌ ಹೀಗೆ ಕುಟುಂಬಕ್ಕಾಗಿ ತಮ್ಮ ವೃತ್ತಿ ಹಾಗೂ ಜನಪ್ರಿಯತೆ ತೊರೆದು ಬಂದಂತಹ ನಟಿಯ ತ್ಯಾಗಕ್ಕೆ ಬಚ್ಚನ್ ಪರಿವಾರದಿಂದ (Bachchan Family) ಸಿಕ್ಕಿದ್ದೇನು? ನಟಿಯ ತ್ಯಾಗಕ್ಕೆ ಅವರು ಬೆಲೆ ಕೊಡಲಿಲ್ಲ, ಇಂದು ನಟಿ ಒಂಟಿಯಾಗಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.

Leave a Comment