Actor Darshan: ಅವನೊಬ್ಬ ವಿಕೃತ ಕಾಮಿ, ಈ ಪ್ರಕರಣ ವಿಧಿಯಾಟ ಎಂದು ದರ್ಶನ್ ಪ್ರಕರಣ ಕುರಿತು ವಿ.ಮನೋಹರ್ ಮಾತು

Written by Soma Shekar

Published on:

---Join Our Channel---

Actor Darshan: ಪವಿತ್ರ ಗೌಡಗೆ (Pavithra Gowda) ಅ ಶ್ಲೀ ಲ ಮೆಸೆಜ್ ಗಳನ್ನು ಕಳಿಸಿದ್ದ ಎನ್ನುವ ಕಾರಣಕ್ಕೆ ನಟ ದರ್ಶನ್ (Actor Darshan) ಅವರು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕೊ ಲೆ ಮಾಡಿದ್ದಾರೆ ಎನ್ನುವ ಆರೋಪವನ್ನು ಹೊತ್ತು ನ್ಯಾಯಾಂಗ ಬಂಧನದಲ್ಲಿ ಇದ್ದು, ಇಂದು ಅವರ ಈ ನ್ಯಾಯಾಂಗ ಬಂಧನದ ಕೊನೆಯಾಗುತ್ತಿದೆ. ದರ್ಶನ್ ಅವರ ಬಂಧನವಾದ ಒಂದಷ್ಟು ದಿನಗಳ ನಂತರ ಸೆಲೆಬ್ರಿಟಿಗಳು ಈ ವಿಚಾರವಾಗಿ ತಮ್ಮ ಅನಿಸಿಕೆಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.. ಈಗ ಸಂಗೀತ ನಿರ್ದೇಶಕ ವಿ.ಮನೋಹರ್ ಅವರು ದರ್ಶನ್ ಬಗ್ಗೆ ಮಾತನಾಡಿದ್ದಾರೆ.

ದರ್ಶನ್ ಪ್ರಕರಣವು ಆಕಸ್ಮಿಕ, ಇದು ವಿಧಿಯಾಟ. ಸತ್ತವನು ಖಂಡಿತ ಒಳ್ಳೆಯವನಲ್ಲ, ಅವನು ಅನೇಕ ಹೆಣ್ಣು ಮಕ್ಕಳಿಗೆ ಕೆಟ್ಟದಾಗಿ ಮೆಸೆಜ್ ಗಳನ್ನು ಕಳಿಸಿರುವ ವಿಕೃತ ಕಾಮಿ ಎಂದಿದ್ದಾರೆ ವಿ.ಮನೋಹರ್ (V. Manohar). ಅವನ ಪಾಪದ ಕೊಡ ತುಂಬಿತ್ತು, ಶಿಕ್ಷೆಯಾಯ್ತು. ಆದರೆ ಅದು ಪೋಲಿಸರ ಕಡೆಯಿಂದ ಆಗಬೇಕಿತ್ತು. ಆದರೆ ದರ್ಶನ್ ಸರ್ ಬ್ಯಾಡ್ ಟೈಮ್ ಆಗಿರಬಹುದು. ಅವರು ಈ ಕಳಂಕದಿಂದ ಹೊರ ಬಂದು ಮೊದಲಿನ ಹಾಗೆ ಸಿನಿಮಾದಲ್ಲಿ ನಟಿಸಲಿ ಎಂದಿದ್ದಾರೆ.

ದರ್ಶನ್ ಅವರು ಹೀರೋ ಆಗೋ ಮೊದಲೇ ಜನುಮದ ಜೋಡಿ (Janumada Jodi) ಸಿನಿಮಾಕ್ಕೆ ಕ್ಯಾಮರಾ ಅಸಿಸ್ಟೆಂಟ್ ಆಗಿದ್ದಾಗ ಪರಿಚಯ ಇತ್ತು. ಆಗಾಗ ಮುಹೂರ್ತ ಕಾರ್ಯಕ್ರಮಗಳಲ್ಲಿ ಸಿಗ್ತಾ ಇದ್ವಿ. ದರ್ಶನ್ ಬಹಳ ಸಹೃದಯಿ, ಅನೇಕರಿಗೆ ಕಷ್ಟದ ಸಮಯದಲ್ಲಿ ಸಹಾಯ ಮಾಡಿದ್ರು. ಲಾಲಿಹಾಡು ಸಿನಿಮಾ ಸಮಯದಲ್ಲಿ ನನಗೂ ಸಹಾಯ ಮಾಡಿದ್ರು. ಕೆಲಸ ಮಾಡೋವಾಗ ಡಯಟ್ ಮಾಡೋದು ಹೇಗೆ, ಯಾವ ವ್ಯಾಯಾಮ ಮಾಡಬೇಕು ಎಲ್ಲಾ ಹೇಳ್ತಾ ಇದ್ರು.

ಈ ಘಟನೆ ನಡೆಯೋ ಮೊದಲು ನಾನು ಅವರಿಗೆ ಕರೆ ಮಾಡಿದ್ದೆ. ಲಾಲಿ ಹಾಡು ಸಿನಿಮಾ ನಂತರ ನಾವು ಮತ್ತೆ ಮಾಡಿಲ್ಲ ಅಂದಾಗ ಖಂಡಿತ ಜೊತೆಯಲ್ಲಿ ಕೆಲಸ ಮಾಡೋಣ ಅಂದ್ರು. ಆದರೆ ಅದಾದ ಮೇಲೆ ಮೂರು ದಿನಗಳಲ್ಲಿ ಈ ಪ್ರಕರಣ ಆಯ್ತು. ಈ ಕಳಂಕದಿಂದ ಅವರು ಹೊರಗೆ ಬರಲಿ. ಮತ್ತೆ ಸಿನಿಮಾಗಳನ್ನು ಮಾಡಲಿ, ಇಂತಹ ದುರ್ಘಟನೆಗಳು ಯಾವತ್ತೂ ಆಗದಿರಲೆಂದು ಆಶಿಸುತ್ತೇನೆ ಎಂದಿದ್ದಾರೆ.

Leave a Comment