Lakshmi Nivasa: ಕೊನೆಗೂ ಭಾವನಾ ನೋವಿಗೆ ಉತ್ತರ ಕೊಡಲು ಬಂದೇ ಬಿಟ್ರು ಸಿದ್ಧೇಗೌಡ್ರು; ಕಥೆಯಲ್ಲಿ ಹೊಸ ಟ್ವಿಸ್ಟ್

Written by Soma Shekar

Published on:

---Join Our Channel---

Lakshmi Nivasa: ಕಿರುತೆರೆಯ ನಂಬರ್ ಒನ್ ಸೀರಿಯಲ್ ಲಕ್ಷ್ಮೀ ನಿವಾಸ (Lakshmi Nivasa) ಬಹುತಾರಾಗಣದ ವೈವಿದ್ಯಮಯ ಟ್ವಿಸ್ಟ್ ಗಳ ಕಥಾ ಹಂದರದೊಂದಿಗೆ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದು, ಇದೀಗ ಮತ್ತೊಂದು ಹೊಸ ಟ್ವಿಸ್ಟ್ ಪ್ರೇಕ್ಷಕರ ಮುಂದೆ ಬರುತ್ತಿದ್ದು, ಪ್ರೇಕ್ಷಕರಂತೂ ಮುಂದೆ ಏನಾಗಲಿದೆ ಎನ್ನುವುದನ್ನು ನೋಡುವುದಕ್ಕಾಗಿ ಕಾತರರಾಗಿದ್ದಾರೆ.

ಭಾವನಾ (Bhavana) ಮೇಲಿನ ಪ್ರೀತಿಯನ್ನ ಹೇಳೋಕಾಗದೇ ಸಿದ್ಧೇಗೌಡ್ರು ಉತ್ಸವದ ದಿನ ರಾತ್ರಿ ಭಾವನಾ ಮಲಗಿದ್ದಾಗ ಕೊರಳಿಗೆ ತಾಳಿ ಕಟ್ಟಿದ್ದಾರೆ. ಭಾವನಾ ಅದನ್ನ ಯಾರಿಗೂ ಹೇಳದೇ ತಾನೇ ನೋವನ್ನು ಅನುಭವಿಸ್ತಾ ಇದ್ದಲು. ಆದರೆ ಈಗ ಎಲ್ಲರಿಗೂ ಈ ವಿಷಯ ಗೊತ್ತಾಗಿದೆ.

ಭಾವನಾ ಕೊರಳಲ್ಲಿ ಇರೋ ತಾಳಿ ವಿಚಾರ ಎಲ್ಲರ ಮುಂದೆ ಬಂದ ಮೇಲೆ ಭಾವನಾ ಈ ತಾಳಿಯಿಂದ ಕೇವಲ ನೋವು ಮಾತ್ರವೇ ಸಿಕ್ತಿದೆ ಅಂತ ದೇವಸ್ಥಾನಕ್ಕೆ ಬಂದು ದೇವಿಗೆ ತಾಳಿಯನ್ನು ವಾಪಸ್ಸು ಕೊಡೋದಾಗಿ ತಾಳಿಯನ್ನು ತೆಗೆಯೋ ಟೈಮ್ ಗೆ ಅಲ್ಲಿಗೆ ಸಿದ್ಧೇಗೌಡ್ರು ಬಂದು ಭಾವನಾ ಪ್ರಯತ್ನವನ್ನ ತಡೆದಿದ್ದಾರೆ.

ಭಾವನಾ ತಾಳಿ ತೆಗೆಯೋದನ್ನ ತಡೆದಿರೋ ಸಿದ್ಧೇಗೌಡ್ರು (Siddegowdru) ಅವಳ ನೋವನ್ನ ನೋಡೋಕಾಗದೇ ಧೈರ್ಯ ಮಾಡಿ ಸತ್ಯವನ್ನ ಹೇಳಿ ಬಿಡ್ತಾರಾ? ತಾಳಿ ಕಟ್ಟಿದ್ದು ತಾನೇ ಅನ್ನೋ ವಿಷಯವನ್ನ ಈಗಲಾದರೂ ಬಹಿರಂಗ ಮಾಡಿ ಭಾವನಾ ಪ್ರಶ್ನೆಗಳಿಗೆ ಉತ್ತರವನ್ನು ಕೊಡ್ತಾರಾ? ಕಾದು ನೋಡಬೇಕಾಗಿದೆ.

Leave a Comment