Kodishree : 5 ಕಡೆಗಳಿಂದ ಕಾದಿದೆ ಆಪತ್ತು, ಮಳೆ ಇನ್ನೂ ಮುಗಿದಿಲ್ಲ; ಕೋಡಿಶ್ರೀಗಳು ನುಡಿದ ಸ್ಪೋಟಕ ಭವಿಷ್ಯ

Written by Soma Shekar

Published on:

---Join Our Channel---

Kodishree : ರಾಜ್ಯ ಸರ್ಕಾರದ ಬಗ್ಗೆ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿ (Kodishree) ಅವರು ಮತ್ತೊಂದು ಸ್ಪೋಟಕ ಭವಿಷ್ಯವಾಣಿಯನ್ನು
ಈ ಬಾರಿಯ ಮಳೆ ಇನ್ನು ಮುಗಿದಿಲ್ಲ ಎಂದಿರುವ ಅವರು ಐದು ಕಡೆಯಿಂದಲೂ ಆಪತ್ತಿದೆ. ಇನ್ನೂ ಆಕಾಶದಿಂದ ಒಂದು ದೊಡ್ಡ ವಿಪತ್ತು ಬರುವುದಿದೆ ಎನ್ನುವುದಾಗಿ ಕೋಡಿಮಠದ ಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಮಳೆಯಿಂದ ಜಾಸ್ತಿ ತೊಂದರೆ ಇದೆ. ಪ್ರಾಕೃತಿಕ ದೋಷ ಇದೆ. ಭೂಮಿ, ಜಲ, ಅಗ್ನಿ, ವಾಯು, ಆಕಾಶ ಸೇರಿ ಎಲ್ಲಾ ಕಡೆ ತೊಂದರೆ ಆಗುತ್ತದೆ ಎಂದು ಸ್ವಾಮೀಜಿ ಹೇಳಿದ್ದಾರೆ. ಆಕಾಶದಿಂದ ಆಪತ್ತು ಬರುತ್ತದೆ. ಜನ ಇದ್ದಂಗೆ ಸಾಯುತ್ತಾರೆ. ಭೂಮಿ ಬಿರುಕು ಬಿಡುತ್ತೆ ಎಂದು ಹೇಳಿದ್ದೆ, ಪ್ರವಾಹದಲ್ಲಿ ಜಗತ್ತಿನ ವಿವಿಧ ಕಡೆ ಹಲವು ಪ್ರದೇಶಗಳು ಮುಳುಗುತ್ತವೆಂದು ಹೇಳಿದ್ದೆ.

ಇನ್ನೂ ಮಳೆ ಇದೆ, ಅದರಲ್ಲಿ ಇನ್ನೂ ಅನಾಹುತಗಳಾಗಲಿವೆ ಎಂದಿದ್ದಾರೆ. ಮಹಾಭಾರತದಲ್ಲಿ ಅಭಿಮನ್ಯುವಿನ ಬಿಲ್ಲಿನ ದಾರವನ್ನು ಮೋಸದಿಂದ ಕರ್ಣನ ಕೈಯಲ್ಲಿ ಕತ್ತರಿಸುವಂತೆ ಮಾಡಿಸಿದರು. ಅಲ್ಲಿ ಕೃಷ್ಣ ಇದ್ದ, ಗದಾಯುದ್ಧದಲ್ಲಿ ಭೀಮ ಗೆದ್ದ. ಇದೀಗ ಕೃಷ್ಣನಿಲ್ಲದೇ ದುರ್ಯೋಧನ ಗೆಲ್ಲುತ್ತಾನೆಂದು ಕಳೆದ ತಿಂಗಳೇ ಹೇಳಿದ್ದೆನೆಂದು ನೆನಪಿಸಿದ್ದಾರೆ.

ಸೆಂಟ್ರಲ್, ಸ್ಟೇಟ್‌ಲ್ಲೂ ಸದ್ಯ ಬದಲಾವಣೆ ಇಲ್ಲ. ಸರ್ಕಾರಕ್ಕೆ ಏನು ತೊಂದರೆ ಆಗಲ್ಲ ಅಂತ ಹೇಳಿದ್ದೆ. ಅದೇ ಪರಿಸ್ಥಿತಿ ಮುಂದುವರೆಯುತ್ತದೆ ಎಂದು ಸ್ವಾಮೀಜಿ ಹೇಳಿದರು.‌ ತಿಂಗಳ ಹಿಂದೆ ಸಹಾ ಭವಿಷ್ಯವಾಣಿ ನುಡಿದಿದ್ದ ಶ್ರೀಗಳು ಆಗ ದೇಶಕ್ಕೆ ಗಂಡಾಂತರ ಕಾದಿದೆ ಎನ್ನುವ ಮಾತನ್ನು ಹೇಳಿದ್ದರು.

Karthik Mahesh: ರೂಲ್ಸ್ ಮಾಡೋನು ಅಂತ ಕಿರುತೆರೆಗೆ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಖಡಕ್ ಎಂಟ್ರಿ

Leave a Comment