ಕಿಪಿ ಕೀರ್ತಿಗಾಗಿ ದನಿ ಎತ್ತಿದ Anchor Anushree, ಕೆಟ್ಟ ಕಾಮೆಂಟ್ ಮಾಡೋರಿಗೆ ಕೊಟ್ರು ವಾರ್ನಿಂಗ್

Written by Soma Shekar

Published on:

---Join Our Channel---

Anchor Anushree : ಹಾಯ್ ಜನರೇ ಅಂತಾ ಹೇಳ್ತಾನೇ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದವರು ಕಿಪಿ ಕೀರ್ತಿ (Kipi Keerthi). ಇನ್ಸ್ಟಾಗ್ರಾಂ ನಲ್ಲಿ ಇವರನ್ನು ಹಿಂಬಾಲಿಸುವವರ ಸಂಖ್ಯೆ ಸಹಾ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದಂತಹ ಕಿಪಿ ಕೀರ್ತಿ ಅಚ್ಚರಿ ಅನ್ನೋ ಹಾಗೆ ಜೀ ಕನ್ನಡ ವಾಹಿನಿಯ ಜನಪ್ರಿಯ ಕಾಮಿಡಿ ಶೋ ಕಾಮಿಡಿ ಕಿಲಾಡಿಗಳು (Comedy Khiladigalu) ವೇದಿಕೆಗೆ ಎಂಟ್ರಿ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸಖತ್ ಟ್ರೋಲ್ ಆಗೋ ಕಿಪಿ ಕೀರ್ತಿ ಕಾಮಿಡಿ ಕಿಲಾಡಿ ವೇದಿಕೆಯಲ್ಲಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ವೇದಿಕೆಗೆ ಬಂದ ಶೋನ ಜಡ್ಜ್ ಗಳು ಕಿಪಿ ಕೀರ್ತಿ ಬಗ್ಗೆ ಮಾತನಾಡಿದ್ದಾರೆ ಹಾಗೂ ಮೆಚ್ಚುಗೆಗಳನ್ನ ಸಹಾ ನೀಡಿದ್ದಾರೆ.

ಅನುಶ್ರೀ (Anchor Anushree) ಅವರು ಈ ವೇಳೆ ಕಿಪಿ ಕೀರ್ತಿ ಬಗ್ಗೆ ಮಾತನಾಡ್ತಾ, ಜನರೇ ಎಂಬ ಪದವನ್ನು ಬಳಸೋ ಮೂಲಕ ಅವರು ಎಲ್ಲರನ್ನು ನಗಿಸಬೇಕು ಅನ್ನು ಪ್ರಯತ್ನ ಮಾಡ್ತಿದ್ದಾರೆ. ಅಂತದ್ರಲ್ಲಿ ಇವರನ್ನು ಯಾಕೆ ಹರ್ಟ್ ಮಾಡಬೇಕು. ಅವರ ನ್ಯೂನ್ಯತೆಯ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಬೇಕು ಎಂದು ಅನುಶ್ರೀ ಪ್ರಶ್ನೆ ಮಾಡಿದ್ದಾರೆ.

ಇದೇ ವೇಳೆ ಅನುಶ್ರೀ ಅವರು, ಕಿಪಿಯನ್ನು ಎಷ್ಟೇ ಟ್ರೋಲ್​ ಮಾಡಿದ್ರೂ, ಅವರನ್ನು ಎಷ್ಟೇ ಕೆಳ ಮಟ್ಟಕ್ಕೆ ತಗೊಂಡು ಹೋದ್ರು ಆಕೆ ಖುಷಿಯಿಂದ ವೀಡಿಯೋ ಮಾಡ್ತಾ ಇದ್ದಾಳೆ. ಅನುಶ್ರೀ ಅವರ ಮಾತನ್ನ ಕೇಳಿದ ಕಿಪಿ ಕೀರ್ತಿ ಅವರು ವೇದಿಕೆಯ ಮೇಲೆ ಭಾವುಕರಾಗಿ ಕಣ್ಣೀರನ್ನು ಹಾಕಿದ್ದಾರೆ.

Bigg Boss Kannada 11 ಹೈಡ್ರಾಮಾ ನಂತರ ಈಗ ನೋ ಎಲಿಮಿನೇಷನ್; ಈ ವಾರ ಯಾರೂ ದೊಡ್ಮನೆಯಿಂದ ಹೊರ ಬರ್ತಿಲ್ಲ

Leave a Comment