Puttakkana Makkalu: ರಾಧಾ ಕುತಂತ್ರ ಫ್ಲಾಪ್ ಆಯ್ತಾ? ಬಂಗಾರಮ್ಮನ ಜಾಗಕ್ಕೆ ಬಂದಾಯ್ತು ಸಿಂಗಾರಮ್ಮ

Written by Soma Shekar

Published on:

---Join Our Channel---

Puttakkana Makkalu: ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನಲ್ಲಿ ಬಂಗಾರಮ್ಮ ಮತ್ತು ಫ್ಯಾಮಿಲಿ ಮನೆ ದೇವರ ದರ್ಶನಕ್ಕೆ ಬಂದ ಸಮಯದಲ್ಲೇ ಅವಘಡ ನಡೆದಿದೆ. ಬಂಗಾರಮ್ಮನ (Bangaramma) ಮನೆಯಲ್ಲೇ ಇರೋ ಪಾತಕಿ ರಾಧಾ ಇದನ್ನೇ ಅವಕಾಶ ಮಾಡಿಕೊಂಡು ಮಾವ ಕಂಠಿಯನ್ನು ಬಿಟ್ಟು ಉಳಿದವರನ್ನೆಲ್ಲಾ ಸಾಯಿಸೋ ಕಿರಾತಕವಾದ ಪ್ಲಾನ್ ಮಾಡಿ, ರೌಡಿಗಳನ್ನು ಕಳಿಸಿದ್ದಾಳೆ. ಎಲ್ಲರೂ ಸತ್ತು ಕಂಠಿ ಮಾತ್ರ ಉಳಿದರೆ ಆಗ ಮಾವ ತನಗೇ ಸಿಗ್ತಾನೆ ಅನ್ನೋದು ಅವಳ ನಂಬಿಕೆ.

ರಾಧಾ ಕಳಿಸಿದ ರೌಡಿಗಳು ಬಂಗಾರಮ್ಮ ಮತ್ತು ಕುಟುಂಬದವರ ಮೇಲೆ ನಾಡಿನ ನಡುವೆ ದಾಳಿ ಮಾಡಿ ಅವರ ಪ್ರಜ್ಞೆ ತಪ್ಪಿಸಿದ್ದಾರೆ. ನಂತರ ರಾಧಾಗೆ ಕಾಲ್ ಮಾಡಿ ಎಲ್ಲರೂ ಪ್ರಜ್ಞೆ ತಪ್ಪಿರೋದನ್ನ ತೋರಿಸಿದಾಗ ರಾಧಾ ಸೂಪರ್ ಅಂತ ಹೇಳಿ, ಮೊದಲು ಆ ಸ್ನೇಹಾ ಕಥೆ ಮುಗಿಸಿ ಅಂತ ಅವರಿಗೆ ಹೇಳ್ತಾಳೆ. ಆದರೆ ಇಲ್ಲೇ ನಡೆಯುತ್ತೆ ಟ್ವಿಸ್ಟ್.

ರೌಡಿಗಳು ಪ್ರಜ್ಞೆ ತಪ್ಪಿರುವವರ ಪ್ರಾಣ ತೆಗೆಯೋ ಮೊದಲು ಆ ಜಾಗಕ್ಕೆ ಸಿಂಗಾರಮ್ಮ (Singaramma) ಮತ್ತೆ ಗ್ಯಾಂಗ್ ಬಂದಿದ್ದಾರೆ. ಸಿಂಗಾರಮ್ಮ ರೌಡಿಗಳ ಜೊತೆಗೆ ಭರ್ಜರಿಯಾಗಿ ಫೈಟ್ ಮಾಡಿ ಅವರೆಲ್ಲರನ್ನ ಹೊಡೆದು ಬೀಳಿಸಿದ್ದಾಳೆ. ನಂತರ ಬಂಗಾರಮ್ಮ ಬಿದ್ದಿದ್ದ ಕಡೆಗೆ ಬಂದು ನೋಡ್ತಾಳೆ.

ನೀನು ಈ ಮನೆಯನ್ನ ಕಾಯ್ತಾ ಇದ್ದೆ. ಇನ್ಮೇಲೆ ಈ ಸಿಂಗಾರಮ್ಮನೇ ದರ್ಬಾರು, ನಾನೇ ಎಲ್ಲದನ್ನ ನೋಡಿಕೊಳ್ತೀನಿ. ನಿನ್ನದೆಲ್ಲಾ ವಸ್ತುಗಳು ನಂದೇ ಅಂತ ಡೈಲಾಗ್ ಹೇಳ್ತಾಳೆ. ಅಲ್ಲಿಗೆ ಇನ್ಮುಂದೆ ಬಂಗಾರಮ್ಮನ ಜಾಗಕ್ಕೆ ಸಿಂಗಾರಮ್ಮ ಬರೋದು ಮತ್ತು ದರ್ಬಾರು ಮಾಡೋದು ಪಕ್ಕಾ ಅನ್ನೋದು ಪ್ರೇಕ್ಷಕರಿಗೆ ಗೊತ್ತಾಗಿದೆ.

ಇನ್ಮುಂದೆ ಸಿಂಗಾರಮ್ಮ ಬಂಗಾರಮ್ಮನ ಜಾಗದಲ್ಲಿ ಇದ್ದು ಏನೆಲ್ಲಾ ಅಬ್ಬರ ಮಾಡ್ತಾಳೆ, ರಾಧಾ ಮತ್ತು ನಂಜಮ್ಮನ ಎದುರಿಸ್ತಾಳೋ ಅಥವಾ ತಾನೂ ಅವರ ಜೊತೆಗೆ ಸೇರಿ ಇನ್ನಷ್ಟು ರಾದ್ದಾಂತವನ್ನು ಮಾಡ್ತಾಳಾ ಅನ್ನೋದನ್ನ ಕಾದು ನೋಡಬೇಕಾಗಿದೆ. ಹೊಸ ಟ್ವಿಸ್ಟ್ ಹೇಗಿರುತ್ತೆ ಅನ್ನೋದು ಪ್ರೇಕ್ಷಕರ ನಿರೀಕ್ಷೆಯಾಗಿದೆ.

Leave a Comment