Entertainment

Puttakkana Makkalu: ಮನೆ ಬಿಟ್ಟು ಹೊರಟ ಸಹನಾ; ಮುರುಳಿ ಮೇಷ್ಟ್ರನ್ನ ಮಾತ್ರ ಒಪ್ಕೋಬೇಡ ಎಂದ ನೆಟ್ಟಿಗರು

Puttakkana Makkalu: ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಹಾಗೂ ಸದ್ಯಕ್ಕೆ ನಂಬರ್ ಒನ್ ಸೀರಿಯಲ್ ಸಹಾ ಆಗಿರುವ ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನಲ್ಲಿನ ಹೊಸ ತಿರುವುಗಳು ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಹೊಸ ಹೊಸ ಟ್ವಿಸ್ಟ್ ಗಳು ನೋಡುಗರ ಗಮನ ಸೆಳೆಯೋದು ಮಾತ್ರವೇ ಅಲ್ಲದೇ ಮುಂದಿನ ಎಪಿಸೋಡ್ ಗಾಗಿ ಕಾಯುವಂತೆ ಮಾಡೋದ್ರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ವೈವಿದ್ಯಮಯ ಪ್ರತಿಕ್ರಿಯೆಗಳನ್ನು ಸಹಾ ಪಡೆದುಕೊಳ್ಳುವಲ್ಲಿ ಮುಂದೆ ಇದೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

ಪ್ರಸ್ತುತ ಸೀರಿಯಲ್ ನಲ್ಲಿ ಪುಟ್ಟಕ್ಕನ ಹಿರಿ ಮಗಳು ಸಹನಾ (Sahana) ಬದುಕಿನ ಕಥೆ ಹೈಲೈಟ್ ಆಗಿದೆ. ಗಂಡನ ಮನೆಯಿಂದ ನೋವುಂಡ ಸಹನಾಗೆ ಗಂಡನ ಬೆಂಬಲ ಸಹಾ ಸಿಕ್ಕಿರಲಿಲ್ಲ. ತನ್ನ ಅಮ್ಮನ ಮಾತಿಗೆ ಬೆಲೆ ಕೊಟ್ಟು ಹೆಂಡತಿಯದೇ ತಪ್ಪು ಅಂತ ನಂಬಿ, ಕಡೆಗೆ ಕೋರ್ಟ್ ನಲ್ಲಿ ತನ್ನ ಅಮ್ಮನ ಅಸಲಿ ಮುಖ ಏನಂತ ಅರ್ಥ ಮಾಡಿಕೊಂಡಿದ್ದಾರೆ ಮುರುಳಿ ಮೇಷ್ಟ್ರು. ಸಹನಾಗೆ ಕೋರ್ಟ್ ನಲ್ಲೇನೋ ಗೆಲುವು ಸಿಕ್ತು.

ಕೋರ್ಟ್ ನಲ್ಲಿ ಗೆಲುವನ್ನು ಪಡ್ಕೊಂಡು ಮನೆಗೆ ಬಂದ ಸ್ನೇಹ ಮತ್ತೆ ತಾನು ಮುರುಳಿ (Muruli) ಮೇಷ್ಟ್ರ ಜೊತೆ ಜೀವನ ಮಾಡಲ್ಲ ಅನ್ನೋ ಮಾತನ್ನ ಹೇಳಿದ್ದಾಳೆ. ಇದೇ ವೇಳೆ ಮೆಸ್ ಗೆ ಬಂದ ಜನ ಆಡಿಕೊಳ್ಳೋ ಮಾತುಗಳಿಂದ ಸಹನಾಗೆ ನೋವಾಗಿದೆ. ತನ್ನಿಂದ ತನ್ನ ಅಮ್ಮನಿಗೂ ನೆಮ್ಮದಿ ಇಲ್ಲ, ಅತ್ತೆ ಮನೇಲಿ ಬದುಕೋಕೆ ಆಗಲ್ಲ ಅಂತ ಆಲೋಚನೆ ಮಾಡಿ, ರಾತ್ರಿ ಎಲ್ಲರೂ ಮಲಗಿರೋವಾಗ ಮನೆ ಬಿಟ್ಟು ಹೊರಟಿದ್ದಾಳೆ.

ವಾಹಿನಿ ಶೇರ್ ಮಾಡಿರೋ ಪ್ರೊಮೋ ನೋಡಿ ನೆಟ್ಟಿಗರು ವೈವಿದ್ಯಮಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕಾಮೆಂಟ್ ಮಾಡಿದವರು ಎಷ್ಟೋ ಜನ ಹೆಣ್ಣು ಮಕ್ಕಳ ಪರಿಸ್ಥಿತಿ ಇದೇ ಎಂದಿದ್ದಾರೆ. ಮತ್ತೊಬ್ಬರು ಏನೇ ಆಗ್ಲಿ ಮತ್ತೆ ಗಂಡನ ಹತ್ರ ಹೋಗಬೇಡ, ಮುರುಳೀನ ಒಪ್ಕೋಬೇಡ ಅಂತ ಕಾಮೆಂಟ್ ಗಳನ್ನ ಮಾಡಿದ್ದಾರೆ. ಇನ್ಮುಂದೆ ಇನ್ನೂ ಕಷ್ಟ ಸಹನಾಗೆ ಎಂದಿದ್ದಾರೆ. ಒಟ್ನಲ್ಲಿ ಸೀರಿಯಲ್ ನ ಕಥೆ ಪ್ರೇಕ್ಚಕರ ಮನಸ್ಸಿಗೆ ನಾಟಿದೆ. ಸಹನಾ ಮನೆ ಬಿಟ್ಟು ಹೋಗಿ ಏನ್ಮಾಡ್ತಾಳೆ ಅನ್ನೋದೇ ಈಗ ಎಲ್ಲರ ಕುತೂಹಲ ಕೆರಳಿಸಿದೆ.

Soma Shekar

Recent Posts

SeethaRama: ಭಾರ್ಗವಿಯ ಕುತಂತ್ರಕ್ಕೆ ಬಲಿಯಾದ ಅಶೋಕ; ಪ್ರಜ್ಞೆ ತಪ್ಪಿದ ಅಶೋಕನ ರಕ್ಷಣೆಗೆ ಯಾರು ಬರ್ತಾರೆ?

SeethaRama : ಸೀತಾಳ ಮನೆಗೆ ದೇಸಾಯಿ ಕುಟುಂಬದವರೆಲ್ಲರೂ ಆಗಮಿಸಿದ್ದಾರೆ. ಶಾಸ್ತ್ರೋಕ್ತವಾಗಿ ಹೆಣ್ಣನ್ನು ಕೇಳುವ ಶಾಸ್ತ್ರವನ್ನು ಬಹಳ ಖುಷಿಯಿಂದ ಮಾಡುತ್ತಿದ್ದಾರೆ ಸೂರ್ಯ…

10 mins ago

Ninagagi Serial: ಹೊಸ ಸೀರಿಯಲ್ ಘೋಷಣೆ, ದಿವ್ಯ ಉರುಡುಗ ಎಂಟ್ರಿ, ಬೃಂದಾವನ ಸೀರಿಯಲ್ ಎಕ್ಸಿಟ್? ಪ್ರೇಕ್ಷಕರಿಗೆ ಟೆನ್ಷನ್

Ninagagi Serial: ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಹೆಸರನ್ನು ಮಾಡಿರುವ ನಟಿಯರಲ್ಲಿ ದಿವ್ಯ ಉರುಡುಗ (Divya Uruduga) ಅವರು ಬಿಗ್…

18 hours ago

Chandini: ‘ಎ’ ನನ್ನ ಜೀವನ ಬದಲಿಸಿದ ಸಿನಿಮಾ: ರೀ ರಿಲೀಸ್ ವೇಳೆ ಎ ಸಿನಿಮಾ ನಟಿ ಚಾಂದಿನಿ ಮನಸ್ಸಿನ ಮಾತು

Chandini: ಕನ್ನಡ ಸಿನಿಮಾ ರಂಗದಲ್ಲಿ ಕೆಲವೊಂದು ಸಿನಿಮಾಗಳು ಎವರ್ ಗ್ರೀನ್ ಸಿನಿಮಾಗಳಾಗಿ ಜನರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದಿದೆ. ಕೆಲವೊಂದು ಸಿನಿಮಾಗಳು…

20 hours ago

Tollywood Heroins: ಮೊದಲ ಸಿನಿಮಾದಿಂದಲೇ ಸ್ಟಾರ್ ಗಳಾದ ಈ ಇಬ್ಬರ ಅಬ್ಬರ ತಗ್ಗಿದ್ದೇಕೆ? ಚಾನ್ಸ್ ಸಿಕ್ತಿಲ್ಲ ಯಾಕೆ?

Tollywood Heroins: ಸಿನಿಮಾ ರಂಗದಲ್ಲಿ ಕೆಲವು ನಟ ನಟಿಯರಿಗೆ ಮೊದಲ ಸಿನಿಮಾದ ಮೂಲಕವೇ ದೊಡ್ಡ ಕ್ರೇಜ್ ಸೃಷ್ಟಿಯಾಗುತ್ತದೆ ಮತ್ತು ಒಂದೇ…

22 hours ago

Amruthadhaare: ಗೌತಮ್ ಭೂಮಿಕಾ ಹೊರಟ ಕೂಡಲೇ ತನ್ನ ಅಸಲಿ ಮುಖ ತೋರಿಸಿದ ಜೈದೇವ್; ಮಲ್ಲಿ ಕಥೆ ಮುಗೀತಾ?

Amruthadhaare : ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿ ಗೌತಮ್ ಮತ್ತು ಭೂಮಿಕಾ ಖುಷಿಯಾಗಿ ಚಿಕ್ಕಮಗಳೂರಿನ ಕಡೆಗೆ ಹೊರಟಿದ್ದಾರೆ. ಅಲ್ಲಿನ ಪ್ರಕೃತಿ…

23 hours ago

Bhumika Ramesh: ಲಕ್ಷ್ಮೀ ಬಾರಮ್ಮ ಸೀರಿಯಲ್ ಗೆ ಗುಡ್ ಬೈ ಹೇಳ್ತಾರಾ ಭೂಮಿಕಾ; ತೆಲುಗಲ್ಲಿ ಹೊಸ ಆಫರ್

Bhumika Ramesh: ಇತ್ತೀಚಿನ ದಿನಗಳಲ್ಲಿ ತೆಲುಗು ಕಿರುತೆರೆಯಲ್ಲಿ (Telugu Television) ಕನ್ನಡ ಕಲಾವಿದ್ದರದ್ದೇ ಪಾರುಪತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ತೆಲುಗು…

1 day ago

This website uses cookies.