Amruthadhaare: ಅಪ್ಪಿ ಪಾರ್ಥನ ಕಂಡ್ರೆ ಚಾನೆಲ್ ಚೇಂಜ್ ಮಾಡ್ತೀವಿ, ಈ ಕ್ಯೂಟ್ ಜೋಡಿ ಬಗ್ಗೆ ಇಂತ ಅಸಮಾಧಾನ ಏಕೆ?

Written by Soma Shekar

Published on:

---Join Our Channel---

Amruthadhaare Serial : ಅಮೃತಧಾರೆ ಸೀರಿಯಲ್ ನಲ್ಲಿ (Amruthadhaare Serial) ಪ್ರಸ್ತುತ ಗೌತಮ್ ಮತ್ತು ಆನಂದ್ ನಡುವಿನ ಸ್ನೇಹಕ್ಕೆ ಮತ್ತೆ ಹೊಸ ಜೀವ ಬಂದಂತಾಗಿದೆ. ಆದರೆ ಇದೇ ವೇಳೆ ಬಹಳಷ್ಟು ಜನರು ಅಪ್ಪಿ ಮತ್ತು ಪಾರ್ಥನ ನಡುವಿನ ಸನ್ನಿವೇಶಗಳ ಬಗ್ಗೆ ಅಸಮಾಧಾನವನ್ನು ಹೊರ ಹಾಕ್ತಾ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿ ಈ ಪಾತ್ರಗಳ‌ ಬಗ್ಗೆ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.

ಅಪ್ಪಿ (Apeksha) ಮತ್ತು ಪಾರ್ಥನ (Partha) ನಡುವಿನ ನಿಷ್ಕಲ್ಮಶ ಪ್ರೀತಿ ಮತ್ತು ಅವರ ತುಂಟಾಟಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿತ್ತು. ಆದರೆ ಯಾವಾಗ ಆ ಪ್ರೀತಿಯನ್ನು ಶಕುಂತಲಾ ದೇವಿ ಸ್ವಾರ್ಥಕ್ಕೆ ಬಳಸಿಕೊಳ್ಳೋಕೆ ಶುರು ಮಾಡಿದಳೋ ಅಲ್ಲಿಂದ ಅಪ್ಪಿ ಮತ್ತು ಪಾರ್ಥನ ಪಾತ್ರಗಳು ಬೋರ್ ಹೊಡಿಸೋಕೆ ಶುರುವಾಗಿದೆ ಅನ್ನೋದು ಪ್ರೇಕ್ಷಕರ ಮಾತಾಗಿದೆ.

ಪಾರ್ಥನ ಜೊತೆ ಮದುವೆ ಆದ್ಮೇಲೆ ಶಕುಂತಲಾ ಮಾತು ಕೇಳಿ ಅತಿಯಾಗಿ ಆಡೋ ಅಪೇಕ್ಷಾ ಪಾತ್ರ ನೋಡಿ ತಿರುಕನಿಗೆ ಸಿರಿ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿತಾನೆ ಅನ್ನೋ ಗಾದೆ ಮಾತನ್ನು ಅನೇಕರು ಹೇಳಿದ್ದಾರೆ. ಒಂದು ಕ್ಯೂಟ್ ಲವ್ ಸ್ಟೋರಿಯನ್ನು ಹೀಗೆ ನೆಗೆಟಿವ್ ಟರ್ನ್ ಮಾಡಿದ್ದು ಕಥೆಗೆ ಟ್ವಿಸ್ಟ್ ನೀಡೋಕಾದ್ರು ಇದನ್ನ ಪ್ರೇಕ್ಷಕರಿಗ ಸುಲಭವಾಗಿ ಒಪ್ಪೋದಕ್ಕೆ ಆಗ್ತಿಲ್ಲ.

ಪಾರ್ಥ ಮತ್ತು ಅಪೇಕ್ಷಾ ನಡುವೆ ಇದ್ದ ಆ ಪ್ರೀತಿ ಈಗ ಕಾಣ್ತಾ ಇಲ್ಲ. ಪಾರ್ಥ ಈ ತರ ಮದುವೆ ಅಗೋದಾಗಿದ್ರೆ ಮಧ್ಯದಲ್ಲಿ ಸದಾಶಿವ ನೀಡೋ ಚಾಲೆಂಜ್, ಹುಡುಗರನ್ನು ಓದಿಸಿ ಅವರನ್ನು ಪಾಸ್ ಮಾಡಿಸೋದಕ್ಕೆ ಅಷ್ಟೆಲ್ಲಾ ಕಷ್ಟ ಪಡೋತಂದ್ದು ಏನಿತ್ತು ಅನ್ನೋದು ಕೆಲವರ ಮಾತು.. ಈಗಂತೂ ಪಾರ್ಥ ಅಪ್ಪಿ ಸನ್ನಿವೇಶ ಬಂದ್ರೆ ಸೀರಿಯಲ್ ನೋಡೋ ಮೂಡೇ ಇಲ್ಲ ಅನ್ನೋದು ಕೆಲವರ ಮಾತಾಗಿದೆ.

Leave a Comment