Actor Darshan: ದರ್ಶನ್ ಇನ್ಯಾರ ಜೊತೆ ಮಾತಾಡ್ಬೇಕು? ಅಲ್ಲಿ ಕ್ರಿಮಿನಲ್ಸ್ ಅಲ್ದೇ ಮತ್ಯಾರು ಸಿಕ್ತಾರೆ ? ಸುಮಲತಾ ಅಂಬರೀಶ್

Written by Soma Shekar

Published on:

---Join Our Channel---

Actor Darshan: ಜೈಲಿನಲ್ಲಿ ಇರುವ ವಿಐಪಿ ಆರೋಪಗಳಿಗೆ ರಾಜಾತಿಥ್ಯ ಸಿಗುವುದು ಇದೇ ಮೊದಲಲ್ಲ ಈ ಹಿಂದೆ ಸಹಾ ಇಂತಹ ಆರೋಪಗಳು ಕೇಳಿ ಬಂದಿವೆ. ಆದರೆ ಈಗ ದರ್ಶನ್ ವಿಚಾರದಲ್ಲಿ ಮಾತ್ರ ಇದೇಕೆ ಸುದ್ದಿಯಾಗುತ್ತಿದೆ ಎಂದು ಮಾಜಿ ಸಂಸದೆ,‌ ನಟಿ ಸುಮಲತಾ (Sumalatha) ಅವರು ಪ್ರಶ್ನೆ ಮಾಡಿದ್ದಾರೆ. ಕೊ ಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ (Actor Darshan) ಅವರ ಫೋಟೋ ವೈರಲ್ ಆದ ಮೇಲೆ ಜೈಲಿನಲ್ಲಿ ಅವರಿಗೆ ಆತಿಥ್ಯ ಸಿಗುತ್ತಿದೆ ಎನ್ನುವ ವಿಷಯ ಸಂಚಲನ ಸೃಷ್ಟಿಸಿದೆ.

ಮಾದ್ಯಮಗಳಲ್ಲಿ ಈ ವಿಷಯ ದೊಡ್ಡ ಚರ್ಚೆಯ ವಿಷಯವಾಗಿ ಬದಲಾಗಿರುವ ಸಮಯದಲ್ಲಿ ಸುಮಲತಾ ಅವರು ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಣ ಖರ್ಚು ಮಾಡಿದರೆ ಜೈಲಲ್ಲಿ ಎಲ್ಲಾ ಸಿಗುತ್ತೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇದು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಮಾತ್ರವೇ ಅಲ್ಲದೇ ಇಡೀ ದೇಶದಲ್ಲಿ ಮತ್ತು ಅಮೆರಿಕಾದಂತಹ ದೇಶಗಳಲ್ಲೂ ನಡೆಯುತ್ತಿದೆ.

ಇದು ಭ್ರಷ್ಟಾಚಾರ, ಕಾನೂನಿಗೆ ವಿರುದ್ಧವಾಗಿದೆ. ಹೀಗಿರುವಾಗ ದರ್ಶನ್ ಒಬ್ಬ ವ್ಯಕ್ತಿಯನ್ನೇ ಗುರಿಯಾಗಿಟ್ಟುಕೊಂಡು ಮಾತನಾಡುತ್ತಿದ್ದಾರೆ. ಜೈಲಿನಲ್ಲಿ ಇರುವವರು ಕ್ರಿ ಮಿ ನಲ್ ಹಿನ್ನೆಲೆಯಿಂದ ಬಂದಿರುವವರೇ ಆಗಿರ್ತಾರೆ. ದರ್ಶನ್ ಅವರ ಜೊತೆ ಓಡಾಡದೇ ಮತ್ತೆ ಇನ್ಯಾರ ಜೊತೆಗೆ ಓಡಾಡಬೇಕು. ಈ ಕುರಿತಾಗಿ ಅಧಿಕಾರಿಗಳು ಗಮನ ನೀಡಬೇಕು.

ಜೈಲಲ್ಲಿ ಜೊತೆಯಲ್ಲಿ ಕೂರೋದಕ್ಕೆ, ಮಾತನಾಡೋದಕ್ಕೆ ಮತ್ತೆ ಇನ್ಯಾರು ಸಿಕ್ತಾರೆ. ಸಿಗ್ತಾರೆ, ಕ್ರಿಮಿನಲ್ಸ್ ಹಿನ್ನಲೆಯುಳ್ಳವರ ಜೊತೆಯಲ್ಲೇ ಮಾತಾಡಬೇಕು ತಾನೇ, ಜೈಲಲ್ಲಿ ಮತ್ತಿನ್ಯಾರನ್ನೂ ಮಾತನಾಡಿಸಬಾರದು ಅನ್ನೋ ರೀತಿಯಲ್ಲಿ ನೀವು ಹೇಳ್ತಿದ್ದೀರಿ. ಜೈಲಲ್ಲಿ ಪಾರ್ಟಿ ಮಾಡೋದು ತಪ್ಪು ಅದಕ್ಕಾಗಿ ಕೆಲವು ಅಧಿಕಾರಿಗಳ ವಿರುದ್ಧ ಕ್ರಮ ತಗೊಂಡಿದ್ದಾರೆ ಎಂದು ಸುಮಲತ ಅವರು ಹೇಳಿದ್ದಾರೆ.

Krishnashtami: ತಾರೆಗಳ ಮನೆಯಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ, ಇಲ್ಲಿದೆ ಸುಂದರವಾದ ಫೋಟೋಗಳು

Leave a Comment