Bhagyalakshmi Serial: ಮಚ್ಚು ಹಿಡಿದು ಮಂಟಪಕ್ಕೆ ಬಂದ ಕುಸುಮಾ; ತಾಂಡವ್, ಶ್ರೇಷ್ಠ ಇಬ್ಬರಿಗೂ ನಡುಕ ಶುರುವಾಯ್ತು

Written by Soma Shekar

Published on:

---Join Our Channel---

Bhagyalakshmi Serial : ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ (Bhagyalakshmi Serial) ಪ್ರೇಕ್ಷಕರು ಕಾಯ್ತಿದ್ದ ಸನ್ನಿವೇಶ ಬಂದಿದೆ, ವಾಹಿನಿ ಶೇರ್ ಮಾಡಿದ ಪ್ರೊಮೊ ನೋಡಿದ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಹೆಂಡತಿ ಮಕ್ಕಳಿಗೆ ಮೋಸ ಮಾಡಿ ಶ್ರೇಷ್ಠ ಜೊತೆ ಮದುವೆ ಆಗಲು ಹೊರಟಿದ್ದ ತಾಂಡವ್ ಗೆ, ಮದುವೆ ಆಗಿ ಮಕ್ಕಳಿರೋ ತಾಂಡವ್ ನ ಮದುವೆ ಆಗೋಕೆ ಪ್ರಯತ್ನ ಮಾಡ್ತಿರೋ ಶ್ರೇಷ್ಠಾ ಪಾಲಿಗೆ ಕುಸುಮಾ ಭದ್ರಕಾಳಿ ಆಗ್ತಿದ್ದಾರೆ.‌

ತಾಂಡವ್ ಮದುವೆ ಆಗ್ತಿರೋದು ಶ್ರೇಷ್ಠಾನ ಅಂತ ಗೊತ್ತಾದ ಮೇಲೆ ಕುಸುಮಾ ಮದುವೆ ನಿಲ್ಲಿಸಬೇಕಂತ ಬಂದಿದ್ದಾರೆ. ಮಹೇಶನ ಬಂಧನದಿಂದ ಭಾಗ್ಯ ಪೂಜಾನ ಬಿಡಿಸಿದ ಮೇಲೆ ಪೂಜಾ ಸಹಾ ಅಕ್ಕನಿಗೆ ಗೊತ್ತಾಗದ ಹಾಗೆ ಮದುವೆ ಮಂಟಪದ ಕಡೆಗೆ ಬಂದಿದ್ದಾಳೆ. ಪೂಜಾ ಮತ್ತು ಕುಸುಮಾ ಇಬ್ಬರೂ ಟ್ರಾಕ್ಟರ್ ನಲ್ಲಿ ಮಂಟಪದ ಗೋಡೆ ಒಡ್ಕೊಂಡು ಒಳಗೆ ಬಂದಿದ್ದಾರೆ.

ಮದುವೆ ಮಂಟಪಕ್ಕೆ ಬಂದು ಉಗ್ರರೂಪ ತಾಳಿದ ಕುಸುಮಾ (Kusuma) ಮಗ ತಾಂಡವ್ (Tandav) ಮತ್ತು ಶ್ರೇಷ್ಠಾ ಕೆನ್ನೆಗೆ ಬಾರಿಸಿದ್ದಾರೆ. ಮಗ ತನ್ನ ನಂಬಿಕೆಯನ್ನೇ ಸುಳ್ಳು ಮಾಡಿಬಿಟ್ಟ ಎಂದು ಅರಚಾಡಿದ್ದಾರೆ. ಮದುವೆ ಮಂಟಪದಲ್ಲಿದ್ದ ವಸ್ತುಗಳನ್ನು ಎತ್ತಿ ಬಿಸಾಡಿ, ತನ್ನ ಆಕ್ರೋಶವನ್ನು ಕುಸುಮಾ ಹೊರ ಹಾಕಿದ್ದಾಗಿದೆ.‌

ಇದಲ್ಲದೇ ಕೈಯಲ್ಲಿ ಮಚ್ಚನ್ನು ಹಿಡಿದು ಕುಸುಮಾ ಎಚ್ಚರಿಕೆ ಕೊಡುವುದು ಸಹಾ ಕಂಡಿದೆ. ಕೊನೆಗೂ ಕುಸುಮಾ ಮದುವೆ ಮಂಟಪಕ್ಕೆ ಎಂಟ್ರಿ ನೀಡಿ ಆಗಿದ್ದು, ಮುಂದೆ ಏನೆಲ್ಲಾ‌ ಆಗುತ್ತೆ? ಭಾಗ್ಯಾಗೆ ಈ ಎಲ್ಲಾ ವಿಷಯಗಳು ಗೊತ್ತಾಗುತ್ತಾ? ಅನ್ನೋದಕ್ಕೆ ಕಾದು ನೋಡಬೇಕಾಗಿದೆ.

Ananya Pandey: ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆ, ದನಿ ಎತ್ತಿದ ಬಾಲಿವುಡ್ ಬ್ಯೂಟಿ ಅನನ್ಯ ಪಾಂಡೆ

Leave a Comment