Bhagyalakshmi: ಈ ಹರಿಕಥೆ ಬೇಕಿತ್ತಾ ಡೈರೆಕ್ಟರೇ, ಭಾಗ್ಯ ಬರೀ ಬಿಲ್ಡಪ್, ಭಾಗ್ಯ ಮೇಲೆ ಪ್ರೇಕ್ಷಕರ ಸಿಟ್ಟೇಕೆ

Written by Soma Shekar

Published on:

---Join Our Channel---

Bhagyalakshmi: ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದಾಗಿರುವ ಭಾಗ್ಯಲಕ್ಷ್ಮೀ (Bhagyalakshmi) ಆಗಾಗ ಜನರ ಮೆಚ್ಚುಗೆ‌ ಪಡೆಯುವ ಜೊತೆಗೆ ಒಂದಷ್ಟು ಟೀಕೆ ಟಿಪ್ಪಣಿಗಳಿಗೂ ಸಹಾ ಗುರಿಯಾಗುತ್ತದೆ.‌ ಈಗ ನಿನ್ನೆಯ ಎಪಿಸೋಡ್ ನ ಪ್ರೊಮೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡುತ್ತಾ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.

ಹೌದು ಶ್ರೇಷ್ಠ (Shreshtha) ತನ್ನ ಗೆಳತಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ನ ಬಳಸಿಕೊಂಡು ಭಾಗ್ಯ ಬಗ್ಗೆ ಕೆಟ್ಟದಾಗಿ ಸುದ್ದಿಯನ್ನು ಹರಡಿಸಿ ಭಾಗ್ಯ ಇಮೇಜ್ ಗೆ ಡ್ಯಾಮೇಜ್ ಆಗೋ‌ ಹಾಗೆ ಮಾಡಿದ್ದಾಳೆ.‌ ಭಾಗ್ಯ ತಂಗಿ ಪೂಜಾ ಮತ್ತೆ ಹಿತ ಸಹಾಯದಿಂದ ಆ ಸೋಶಿಯಲ್ ಮೀಡಿಯಾ ಇನ್ಪ್ಲುಯೆನ್ಸರ್ ನ ಹುಡುಕಿ ಅವಳ ಕೆನ್ನೆಗೆ ಬಾರಿಸಿ ಸತ್ಯ ಹೊರಗೆ ಕಕ್ಕಿಸಿದ್ದಾಳೆ.

ಇದಾದ ಮೇಲೆ ಶ್ರೇಷ್ಠಾಗೆ ಅವರ ತಂದೆ ತಾಯಿ ದೋಷ ಪರಿಹಾರ ಮಾಡಿಸ್ತಾ ಇದ್ದ ಕಡೆಗೆ ಬಂದ ಭಾಗ್ಯ ತಾನೇ ಶ್ರೇಷ್ಠ ತಲೆ ಮೇಲೆ ನೀರು ಸುರಿದು ಶಾಸ್ತ್ರ ಮಾಡಿ, ಬಳೆ ತೊಡಿಸಿ ಪ್ರತಿಯೊಂದು ಶಾಸ್ತ್ರ ಮಾಡೋವಾಗ್ಲೂ ಒಂದಷ್ಟು ವಿಚಾರಗಳನ್ನ ಹೇಳಿಕೊಂಡು, ತನಗೂ ತನ್ನ ತಾಯಿಗೂ ಇದ್ದ ನಂಟಿನ ಬಗ್ಗೆ ಎಲ್ಲಾ ಹೇಳ್ತಾಳೆ.‌ ಈ ದೃಶ್ಯ ನೋಡಿ ನೆಟ್ಟಿಗರು ಸಿಟ್ಟಾಗಿದ್ದಾರೆ.

ಪ್ರೊಮೋ ಗೆ ಕಾಮೆಂಟ್ ಮಾಡಿದ ಜನರು, ಏನ್ ದಾರಾವಾಹಿ. ಇದು ಬೇಗ ಬೇಗ ಮುಗಿಸಿರಿ ಬರೀ ಹೇಳಿದ್ದನ್ನೇ ಹೇಳ್ತೀರಾ. ನೋಡಕ್ಕೆ ತುಂಬಾ ಬೋರ್. ಬೇರೆ ಧಾರಾವಾಹಿ ಇದ್ರೆ ಹಾಕಿ ಪ್ಲೀಸ್ ಎಂದೂ, ಭಾಗ್ಯ ಹೇಳೋ ಮಾತುಗಳನ್ನ ಕೇಳ ಈ ಹರಿಕಥೆ ಬೇಕಿತ್ತಾ ನಿರ್ದೇಶಕರೇ ಎಂದೂ, ಭಾಗ್ಯ ಕೈಯಲ್ಲಿ ಏನೂ ಆಗಲ್ಲ ಬರೀ ಬಿಲ್ಡಪ್ ಅಂತ, ಬರೀ ಕಂತೆ ಪುರಾಣ, ಏನಾದ್ರು ಲಾಜಿಕ್ ಇದ್ಯಾ ಅಂತೆಲ್ಲಾ ಅಸಮಾಧಾನ ಹೊರ ಹಾಕಿದ್ದಾರೆ.

Namratha Gowda: ನಮ್ರತಾ ಮನೇಲಿ ವೈಭವದ ವರಮಹಾಲಕ್ಷ್ಮಿ ಪೂಜೆ, ಬಿಗ್ ಬಾಸ್ ಸ್ಪರ್ಧಿಗಳು ಹಾಜರ್, ಇಲ್ಲಿವೆ ಫೋಟೋಗಳು

Leave a Comment