Bhagyalakshmi Serial: ನಡು ರಸ್ತೆಗಲ್ಲೇ ಭಾಗ್ಯಾಗೆ ಬೆಂಡೆತ್ತಿದ್ದ ಶ್ರೇಷ್ಠ, ಹುಚ್ಚರ ಸಂತೆ ಎಂದು ಸಿಟ್ಟಾದ ನೆಟ್ಟಿಗರು

Written by Soma Shekar

Published on:

---Join Our Channel---

Bhagyalakshmi Serial : ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ (Bhagyalakshmi Serial) ಭಾಗ್ಯಾಗೆ ಶ್ರೇಷ್ಠಾಳ ಅಸಲಿಯತ್ತೇನೋ ಗೊತ್ತಾಗಿದೆ. ಆದ್ರೆ ಅವಳು ಮದುವೆ ಆಗೋಕೆ ಹೊರಟಿರೋದು ತನ್ನ ಗಂಡನನ್ನೇ ಅನ್ನೋ ವಿಷಯ ಗೊತ್ತಿಲ್ಲ. ಶ್ರೇಷ್ಠ ತನ್ನ ಗೆಳತಿಯ ಸಹಾಯದಿಂದ ಸೋಶಿಯಲ್ ಮೀಡಿಯಾಗಳಲ್ಲಿ ಭಾಗ್ಯ ಬಗ್ಗೆ ಅಪಪ್ರಚಾರ ಮಾಡಿಸಿದ್ಲು. ಆದ್ರೆ ಅಸಲಿ ವಿಚಾರ ತಿಳ್ಕೊಂಡ ಭಾಗ್ಯ ಶ್ರೇಷ್ಠಾಗೆ ದೋಷ ಪರಿಹಾರ ಶಾಸ್ತ್ರ ನಡೀತಾ ಇದ್ದ ಕಡೆಗೆ ಬಂದು ಅವಳಿಗೆ ಬುದ್ಧಿ ಹೇಳಿದ್ದಾಳೆ.

ಆದ್ರೆ ಭಾಗ್ಯ (Bhagya) ಹೇಳಿದ ಮಾತುಗಳಿಂದ ಶ್ರೇಷ್ಠ (Shreshtha) ಕೆಂಡಾಮಂಡಲವಾಗಿದ್ದಾಳೆ. ರಸ್ತೆಯಲ್ಲೇ ನಿಂತು ಅರಚಾಡಿದ್ದಾಳೆ‌. ಮುಡಿದಿದ್ದ ಹೂವನ್ನು ಕಿತ್ತು ಭಾಗ್ಯ ಮುಖದ ಮೇಲೆ ಎಸೆದಿದ್ದಾಳೆ. ಹಣೆಗಿಟ್ಟ ಕುಂಕುಮ ಅಳಿಸಿಕೊಂಡು, ಜನರ ಮುಂದೆಯೇ ಬಳೆಗಳನ್ನು ಒಡೆದು ಹಾಕಿ ರಂಪ ರಾಮಾಯಣ ಮಾಡಿ, ತಾನು ತನ್ನ ಪ್ರೀತಿಯನ್ನ ಪಡೆದೇ ಪಡೀತಿನಿ ಅಂತ ಸವಾಲು ಹಾಕಿದ್ದಾಳೆ.

ವಾಹಿನಿ ಶೇರ್ ಮಾಡಿದ ಹೊಸ ಪ್ರೊಮೊ ಬಂದ ಮೇಲೆ ನೆಟ್ಟಿಗರಂತೂ ಸಿಕ್ಕಾಪಟ್ಟೆ ಸಿಟ್ಟಾದಂತೆ ಕಂಡಿದೆ. ಪ್ರೊಮೊ ನೋಡಿ ನೆಟ್ಟಿಗರು ನೀಡಿದ ಕೆಲವು ಪ್ರತಿಕ್ರಿಯೆಗಳು ಹೇಗಿದೆ ಅನ್ನೋದನ್ನ ಹೇಳೋದಾದ್ರೆ, ನಾನೇನಾದ್ರು ಈ ಸೀರಿಯಲ್ ನಿರ್ದೇಶಕನ ಹೆಂಡ್ತಿ ಆಗಿದ್ರೆ ಇಷ್ಟೊತ್ತಿಗೆ ನಿರ್ದೇಶಕಗೆ ಡೈವೋರ್ಸ್ ಕೊಡ್ತಿದ್ದೆ ಎಂದಿದ್ದಾರೆ ನೆಟ್ಟಿಗರೊಬ್ಬರು.

ಇದೆ ವೇಳೆಗೆ ಒಳ್ಳೇ ಪ್ರೋಗ್ರಾಂ ಅಪ್ಪು ನಡೆಸಿದ ಕನ್ನಡದ ಕೋಟ್ಯಾಧಿಪತಿ repeat ಆದ್ರೆ ಎಷ್ಟು ಚೆನ್ನಾಗಿರುತ್ತೆ , ಈ ಗಬ್ಬು ಧಾರಾವಾಹಿಗಳು ಬೇಕಿಲ್ಲ , ಇದೊಂದು ಹುಚ್ಚರ ಸಂತೆ ಆಗಿದೆ ಸಮಾಜಕ್ಕೆ ಕೆಟ್ಟ ಸಂದೇಶ ನೀಡುವ ಧಾರಾವಾಹಿ ಮೊದಲು ನಿಲ್ಲಿಸಿ, ಈ ಧಾರಾವಾಹಿ ನೋಡುತ್ತಿರುವ ನಾವು ಗಳು ಹುಚ್ಚಾರಾಗಿ ನೋಡುವೆವು ಇದೇ ಪರಿಸ್ಥಿತಿ????? ಹೀಗೆ ತರಹೇವಾರಿ ಕಾಮೆಂಟ್ ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ.

Bigg Boss Kannada: ಬಿಗ್ ಬಾಸ್ ಗೂ ಮೊದಲೇ ಹೊಸ ಸೀರಿಯಲ್, ಹಾಗಾದ್ರೆ ಮುಕ್ತಾಯವಾಗೋದು ಯಾವ ಸೀರಿಯಲ್ ?

Leave a Comment