Venu Swamy: ಭವಿಷ್ಯ ಸುಳ್ಳಾಯ್ತು, ಕೈಜೋಡಿಸಿ ಕ್ಷಮೆ ಕೇಳಿದ ವೇಣು ಸ್ವಾಮಿ ಶಾಕಿಂಗ್ ಪ್ರತಿಜ್ಞೆ, ಬೆಚ್ಚಿದ ನೆಟ್ಟಿಗರು

Written by Soma Shekar

Published on:

---Join Our Channel---

Venu Swamy: ತೆಲುಗು ಸಿನಿಮಾ ಸೆಲೆಬ್ರಿಟಿಗಳು ಮತ್ತು ರಾಜಕೀಯ ಮುಖಂಡರ ಭವಿಷ್ಯವನ್ನು ಹೇಳುವ ಮೂಲಕವೇ ಜನಪ್ರಿಯತೆಯನ್ನು ಪಡೆದುಕೊಂಡು ದೊಡ್ಡ ಮಟ್ಟದಲ್ಲಿ ಹೆಸರನ್ನು ಪಡೆದುಕೊಂಡಿದ್ದಾರೆ ಜ್ಯೋತಿಷಿ ವೇಣುಸ್ವಾಮಿ (Venue Swamy). ಸಮಂತಾ ಮತ್ತು ನಾಗಚೈತನ್ಯ ವಿಚ್ಚೇದನದ ಕುರಿತಾಗಿ ವೇಣು ಸ್ವಾಮಿ ನುಡಿದ ಭವಿಷ್ಯ (Prediction) ನಿಜವಾದ ನಂತರ ತೆಲುಗು ರಾಜ್ಯಗಳಲ್ಲಿ ವೇಣು ಸ್ವಾಮಿ ಭರ್ಜರಿ ಜನಪ್ರಿಯತೆ ಪಡೆದುಕೊಂಡರು. ನಂತರ ಪ್ರಭಾಸ್ ಬಗ್ಗೆ ಮಾಡಿದ ಭವಿಷ್ಯವಾಣಿ ಟ್ರೋಲ್ ಗೆ ಗುರಿ ಮಾಡಿತ್ತು.

ವೇಣು ಸ್ವಾಮಿ ಅವರು ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆಗೂ ಮೊದಲು ಭವಿಷ್ಯವಾಣಿ ನುಡಿಯುತ್ತಾ, ಚುನಾವಣೆಯಲ್ಲಿ ಜಗನ್ ಮೋಹನ್ ರೆಡ್ಡಿ (Jagan Mohan Reddy) ಅವರ ಪಕ್ಷ ಮತ್ತೊಮ್ಮೆ ಗೆಲುವನ್ನು ಸಾಧಿಸಲಿದ್ದು, ಜಗನ್ ಮೋಹನ್ ಮತ್ತೊಮ್ಮೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗುವರು ಎನ್ನುವ ಮಾತುಗಳನ್ನು ಹೇಳಿದ್ದರು. ಆದರೆ ವೇಣು ಸ್ವಾಮಿ ಅವರ ಭವಿಷ್ಯವಾಣಿ ಈಗ ಸುಳ್ಳಾಗಿದೆ.

ಜಗನ್ ಮೋಹನ್ ಅವರ ವೈಸಿಪಿ ಪಾರ್ಟಿ ಚುನಾವಣೆಯಲ್ಲಿ ಹೀನಾಯವಾದ ಸೋಲನ್ನು ಕಂಡಿದೆ. ಟಿಡಿಪಿ ಭರ್ಜರಿ ಜಯಭೇರಿ ಬಾರಿಸಿದ್ದು ಈ ಗೆಲುವಿನ ಸುದ್ದಿಯ ಬೆನ್ನಲ್ಲೇ ವೇಣು ಸ್ವಾಮಿ ವೀಡಿಯೋ ಮೂಲಕ ಕ್ಷಮೆ ಯಾಚನೆ ಮಾಡಿದ್ದಾರೆ. ನಾನು ಕಲಿತ ವಿದ್ಯೆಗಳ ಆಧಾರದಲ್ಲಿ ನಾನು ನುಡಿದ ಭವಿಷ್ಯವಾಣಿಯಲ್ಲಿ ಮೋದಿ ಪ್ರಭಾವ ತಗ್ಗುತ್ತದೆ ಎಂದು ಹೇಳಿದ್ದೆ ಅದು ನಿಜವಾಗಿದೆ. ಆದರೆ ಆಂಧ್ರ ಪ್ರದೇಶದ ರಾಜಕೀಯದ ಭವಿಷ್ಯವಾಣಿ ಸುಳ್ಳಾಗಿದೆ.

ನಾನು ನಂಬಿರುವ ವೆಂಕಟೇಶ್ವರ ಮತ್ತು ಕಾಮಾಕ್ಯ ದೇವಿಯ ಕ್ಷಮೆಯಾಚಿಸುತ್ತೇನೆ. ಇನ್ನು ಮುಂದೆ ಯಾವುದೇ ರಾಜಕೀಯ ಮತ್ತು ಸಿನಿಮಾ ವ್ಯಕ್ತಿಗಳ ಬಗ್ಗೆ ಎಲ್ಲಿಯೂ ಭವಿಷ್ಯವನ್ನು ಹೇಳುವುದಿಲ್ಲ ಎಂಬುದಾಗಿ ವೇಣು ಸ್ವಾಮಿ ಘೋಷಣೆ ಮಾಡಿದ್ದು, ತನ್ನನ್ನ ಟ್ರೋಲ್ ಮಾಡುತ್ತಿರುವವರಿಗೆ ತಾನೂ ಏನೂ ಹೇಳಲು ಬಯಸುವುದಿಲ್ಲ ಎನ್ನುವ ಮಾತನ್ನ ಸಹಾ ಅವರು ಹೇಳಿದ್ದಾರೆ.

Leave a Comment