Amruthadhaare ಮಗು ಕಳ್ಕೊಂಡ ಮಲ್ಲಿ, ದಿಯಾ ಮಾತು ಕೇಳಿ ಮಲ್ಲಿನ ಮುಗಿಸಿಬಿಡ್ತಾನಾ ಜೈದೇವ್; ಹೊಸ ಟ್ವಿಸ್ಟ್

Written by Soma Shekar

Published on:

---Join Our Channel---

Amruthadhaare: ಅಮೃತಧಾರೆ (Amruthadhaare)ಸೀರಿಯಲ್ ನಲ್ಲಿ ಪ್ರೇಕ್ಷಕರು ಊಹಿಸಿದ ಹಾಗೆಯೇ ಜೈದೇವ್ ನನ್ನ ಅತಿಯಾಗಿ ನಂಬಿದ ಮಲ್ಲಿ ಅವನ ಅಸಲಿ ರೂಪವನ್ನು ನೋಡಿ ಶಾಕ್ ಆಗಿದ್ದು ಮಾತ್ರವೇ ಅಲ್ಲದೇ ಆ ಶಾಕ್ ನಿಂದ ಹೊರ ಬರೋದಕ್ಕೂ ಮೊದಲೇ ಅಪಘಾತದಲ್ಲಿ ತನ್ನ ಮಗುವನ್ನ ಕೂಡಾ ಕಳ್ಕೊಂಡಿದ್ದಾಳೆ. ಆಸ್ಪತ್ರೆಯಲ್ಲಿ ಅವಳ ಚಿಕಿತ್ಸೆ ನಡೀತಿದೆ.

ಮಲ್ಲಿನ ( Malli ) ಆಸ್ಪತ್ರೆಗೆ ಸೇರಿಸಿದ ಜೈದೇವ್ ಗೌತಮ್ ಗೆ ಕಾಲ್ ಮಾಡಿ ವಿಷಯ ಹೇಳಿದ್ದಾನೆ. ಗೌತಮ್ (Gowtham) ಮತ್ತು ಭೂಮಿಕಾ (Bhumika) ಕೂಡಲೇ ಆಸ್ಪತ್ರೆಗೆ ಬಂದಿದ್ದಾರೆ. ಡಾಕ್ಟರ್ ಪೇಶೆಂಟ್ ಗೆ ಪ್ರಜ್ಞೆ ಬಂದಿಲ್ಲ ಆದರೆ ಮಗುನ ಉಳಿಸೋಕೆ ಆಗ್ಲಿಲ್ಲ ಎಂದು ಹೇಳಿದ್ದು, ಜೈದೇವ್ ಅದನ್ನ ಕೇಳಿ ಗೋಳಾಡುವಂತೆ ನಾಟಕ ಆಡಿ ಅಣ್ಣ, ಅತ್ತಿಗೆ ಮುಂದೆ ಒಳ್ಳೆಯವನಾಗೋ ಪ್ರಯತ್ನ ಮಾಡಿದ್ದಾನೆ.

ದಿಯಾ (Diya) ಫೋನ್ ಮಾಡಿ ಜೈದೇವ್ ಗೆ ಒಂದು ವೇಳೆ ಮಲ್ಲಿ ನಮ್ಮನ್ನ ಒಟ್ಟಿಗೆ ನೋಡಿಬಿಟ್ಲಾ ಅನ್ನೋ ಅನುಮಾನದ ಹುಳುವನ್ನು ಅವನ ತಲೆಗೆ ಬಿಟ್ಟಿದ್ದಾಳೆ. ಇಲ್ಲ ನೋಡಿರೋದಿಲ್ಲ ಅನ್ನೋ ಮಾತನ್ನು ಜೈದೇವ್ ಹೇಳಿದರೂ ಕೂಡಾ ದಿಯಾ ಹೇಳಿದ ಮಾತುಗಳು ಜೈದೇವ್ ಮನಸ್ಸಿನಲ್ಲಿ ಹೊಸ ಅನುಮಾನವನ್ನು ಹುಟ್ಟು ಹಾಕಿದೆ.

ಈಗ ಮಲ್ಲಿ ಕೋಮಾಗೆ ಹೋಗ್ತಾಳಾ?‌ಜೈದೇವ್ ತನ್ನ ಆಟ ಬಯಲಾಗಬಾರದು ಅಂತ ಮಲ್ಲಿನ ಕೊಲೆ ಮಾಡೋ ಪ್ರಯತ್ನ ಏನಾದ್ರು ಮಾಡ್ತಾನಾ? ಅನ್ನೋದು ಪ್ರೇಕ್ಷಕರಲ್ಲಿ ಮೂಡಿರುವ ಪ್ರಶ್ನೆಗಳಾಗಿದೆ. ಈ ಪ್ರಶ್ನೆಗಳಿಗೆ ಉತ್ತರ ಇಂದಿನ ಎಪಿಸೋಡ್ ನಲ್ಲಿ ಸಿಗಬಹುದು.

Samantha ಪ್ರೀತಿಸಿದ್ದ ಇಬ್ಬರು ಲವ್ ಮತ್ತು ಮದುವೆ ಬಗ್ಗೆ ಶಾಕಿಂಗ್ ಸೀಕ್ರೆಟ್ ಬಿಚ್ಚಿಟ್ಟ ಸಮಂತಾ, ಬೇಸರದಲ್ಲಿ ಫ್ಯಾನ್ಸ್

Leave a Comment