Amruthadhaare ಎಲ್ರೂ ಅಂದು ಕೊಂಡ ಹಾಗೇ ಆಯ್ತು; ಜೈದೇವ್ ನಿಜಕ್ಕೂ ನಾಯಕ, ನಾಯಕಿಗಿಂತ ಜೀನಿಯಸ್

Written by Soma Shekar

Published on:

---Join Our Channel---

Amruthadhaare : ಅಂದುಕೊಂಡಿದ್ದೇ ಆಯ್ತು ಅಂತಿದ್ದಾರೆ ವೀಕ್ಷಕರು. ಹೌದು, ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿ ಹೊಸ ಟ್ವಿಸ್ಟ್ ಅನ್ನು ಪ್ರೇಕ್ಷಕರು ಮೊದಲೇ ಊಹೆ ಮಾಡಿದ್ದರು. ಅವರು ಊಹೆ ಮಾಡಿದಂತೆ ಈಗ ಸೀರಿಯಲ್ ನ ದೃಶ್ಯ ಕಂಡಿದೆ. ಇದನ್ನ ನೋಡಿ ಕೆಲವರಿಗೆ ಖುಷಿಯಾದರೆ ಇನ್ನೂ ಕೆಲವರಿಗೆ ಕಥೆಯನ್ನು ಎಳೆಯೋದಕ್ಕೆ ಮತ್ತೊಂದು ಅವಕಾಶ ಸಿಕ್ತು ಅನಿಸಿದೆ.

ಅಮೃತಧಾರೆ ಸೀರಿಯಲ್ ನಲ್ಲಿ ಜೈದೇವ್ (Jaidev) ಮಾಡಿದ ಕುತಂತ್ರಗಳನ್ನು ಗೌತಮ್ ಸಾಕ್ಷಿ ಸಮೇತ ಮನೆ ಮಂದಿ ಮುಂದೆ ವಿವರಿಸಿದ್ದು, ಇದನ್ನ ಕೇಳಿ ಶಕುಂತಲಾ ದೇವಿ ಜೈದೇವ್ ನ ಮನೆಯಿಂದ ಹೊರಗೆ ಹಾಕಿದ್ದಾಳೆ. ಆದರೆ ಜೈದೇವ್ ಅಲ್ಲಿಗೆ ಸುಮ್ಮನೆ ಆಗಿಲ್ಲ.

ಮನೆಯೊಳಗೆ ಬಂದು ತನ್ನನ್ನು ತಾನು ತಿವಿದುಕೊಂಡು ಪ್ರಾಣ ಬಿಡೋ ನಾಟಕ ಆಡಿ ಆಸ್ಪತ್ರೆ ಸೇರಿದ್ದಾನೆ. ಅಲ್ಲಿ ವೈದ್ಯರು ಅವನ ಕಂಡೀಷನ್ ಸೀರಿಯಸ್ ಎಂದಿದ್ದಾರೆ. ಪ್ರಜ್ಞೆ ಬರದೇ ಇದ್ರೆ ಅಪಾಯ ಅಂತ ಹೇಳಿದ್ದಾರೆ. ಆದರೆ ಜೈದೇವ್ ಇಲ್ಲೂ ನಾಟಕ ಆಡಿದ್ದಾನೆ.

ಜೈದೇವ್ ನ ಮಾವ ವಾರ್ಡ್ ಗೆ ಬಂದು ಮಾತನಾಡೋವಾಗ ಜೈದೇವ್ ನನಗೆ ಆಗ್ಲೇ ಪ್ರಜ್ಞೆ ಬಂದಿದೆ. ಆದ್ರೆ ಪ್ರಜ್ಞೆ ಇಲ್ಲದ ಹಾಗೆ ನಾಟಕ ಆಡ್ತೀರೋದನ್ನ ಬಾಯಿ ಬಿಟ್ಟಿದ್ದಾನೆ. ಈಗ ಮತ್ತೆ ಮನೆಗೆ ಸೇರೋದಕ್ಕೆ ಪ್ಲಾನ್ ಮಾಡಬೇಕು ಅಂತ ಮಾವನ ಹತ್ರ ತನ್ನ ಹೊಸ ಕುತಂತ್ರದ ಬಗ್ಗೆ ಹೇಳಿದ್ದಾನೆ ಜೈದೇವ್.

ಅಲ್ಲಿಗೆ ಜೈದೇವ್ ಗೆ ಬುದ್ಧಿ ಬಂದಿಲ್ಲ ಅನ್ನೋದಂತೂ ಪಕ್ಕಾ ಆಗಿದೆ. ಇದನ್ನ ನೋಡಿ ವೀಕ್ಷಕರು ನಾವು ಅಂದುಕೊಂಡ ಹಾಗೇ ಆಯ್ತು ಅಂತ ಕಾಮೆಂಟ್ ಮಾಡ್ತಿದ್ದಾರೆ. ಅಲ್ಲದೇ ಜೈದೇವ್ ವಿಲನ್ ಕ್ಯಾರಕ್ಟರ್ ಬಹಳ ಪವರ್ ಫುಲ್ ಅಂತಾನೂ ಹೇಳ್ತಾ ಇದ್ದಾರೆ.

Leave a Comment