Amruthadhaare Serial: ಜೈದೇವ್ ನ ಕುತಂತ್ರ ಗೌತಮ್ ಮುಂದೆ ಬಯಲಾಯ್ತು; ಗೌತಮ್ ಮುಂದಿನ ನಿರ್ಧಾರ ಏನು?

Written by Soma Shekar

Published on:

---Join Our Channel---

Amruthadhaare Serial: ಅಮೃತಧಾರೆ ಸೀರಿಯಲ್ (Amruthadhaare Serial) ಕಿರುತೆರೆಯ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿನ ಕೆಲವೊಂದು ಟ್ವಿಸ್ಟ್ ಗಳು ಸೀರಿಯಲ್ ಪ್ರೇಕ್ಷಕರಿಗೆ ಅಸಮಾಧಾನವನ್ನು ಮೂಡಿಸಿದೆ. ಅದರಿಂದಲೇ ಅಮೃತಧಾರೆ ಟಾಪ್ ಐದರ ರೇಸ್ ನಿಂದ ಹೊರಗೆ ಉಳಿದಿದೆ. ಆದರೂ ಹೊಸ ಹೊಸ ಟ್ವಿಸ್ಟ್ ಮೂಲಕ ಪ್ರೇಕ್ಷಕರ ಗಮನ ಸೆಳೆಯುವ ಪ್ರಯತ್ನದಲ್ಲಿ ಮುಂದುವರೆದಿದೆ.

ಅಪ್ಪಿ (Appi) ಮತ್ತು ಪಾರ್ಥ (Partha) ಮದುವೆ ಸಮಯದಲ್ಲಿ ಜೈದೇವ್ ಅದನ್ನ ನಿಲ್ಲಿಸೋದಕ್ಕೆ ರೌಡಿಗಳನ್ನ ಬಿಟ್ಟಿದ್ದು ಮಾತ್ರವೇ ಅಲ್ಲದೇ ಸ್ವಂತ ತಮ್ಮನನ್ನೇ ಕೊಲ್ಲಲು ಹೇಳಿದ್ದ. ಆದರೆ ಸರಿಯಾದ ಸಮಯಕ್ಕೆ ಗೌತಮ್ ಎಂಟ್ರಿ ಆಗಿ ಎಲ್ಲವೂ ಸುಖಾಂತ್ಯ ಆಗಿತ್ತು. ಆದರೆ ಈ ಕೃತ್ಯಕ್ಕೆ ಕಾರಣ ಜೈದೇವ್ ಅಂತ ಆನಂದ್ ಗೆ ಗೊತ್ತಾಗಿತ್ತು.

ಆನಂದ್ ಎಲ್ಲಿ ತನ್ನ ಕೃತ್ಯದ ಬಗ್ಗೆ ಗೌತಮ್ ಗೆ ಹೇಳ್ತಾನೋ ಅಂತ ಜೈದೇವ್ ಆನಂದ್ ನ‌ ಕೊಲ್ಲೋದಕ್ಕೆ ಆ್ಯಕ್ಸಿಡೆಂಟ್ ಮಾಡಿಸಿ, ಆನಂದ್ ಕೋಮಾಕ್ಕೆ ಹೋಗಿದ್ದ. ಅದೃಷ್ಟವಶಾತ್ ಆನಂದ್ ಗೆ ಪ್ರಜ್ಞೆ ಬಂದಿದೆ. ಮತ್ತೆ ಚೇತರಿಸಿಕೊಳ್ತಾ ಇದ್ದು ಗೌತಮ್ ಗೆ ಹತ್ರ ಸತ್ಯವನ್ನು ಹೇಳಲು ಮುಂದಾಗಿದ್ದಾನೆ.

ಫ್ರೆಂಡ್ ಹತ್ರ ಸತ್ಯ ಹೇಳದೇ ಇದ್ರೆ ತಪ್ಪು ಅಂತ ಆನಂದ್ ಗೌತಮ್ ಗೆ ಅಪ್ಪಿ ಮತ್ತು ಪಾರ್ಥನ ಮೇಲೆ ಅಟ್ಯಾಕ್ ಮಾಡ್ಸಿದ್ದು ಆನಂದ್ ಅಂತ ಸಿಕ್ಕಿ ಹಾಕಿಕೊಂಡ ರೌಡಿ ಹೇಳಿದ ಅನ್ನೋ ಸತ್ಯವನ್ನ ಹೇಳಿದ್ದಾನೆ. ಈ ಮಾತನ್ನ ಕೇಳಿದ ಮೇಲೆ ಈಗ ಗೌತಮ್ ಏನು ಮಾಡ್ತಾನೆ? ಜೈದೇವ್ ಗೆ ಬುದ್ಧಿ ಕಲಿಸೋಕೆ ಯಾವ ದಾರಿ ಹಿಡೀತಾನೆ? ಕಾದು ನೋಡಬೇಕಾಗಿದೆ.

Jr. NTR ಕಾಂತಾರ 1 ನಲ್ಲಿ ಜೂ. ಎನ್ ಟಿ ಆರ್ ? ಮಾದ್ಯಮಗಳ ಮುಂದೆಯೇ ಸ್ಪಷ್ಟ ಮಾಹಿತಿಯನ್ನು ನೀಡಿದ ನಟ

Leave a Comment