Malashree: ಸ್ಯಾಂಡಲ್ವುಡ್ ನ ಕನಸಿನ ರಾಣಿ ಎಂದೇ ಹೆಸರನ್ನು ಪಡೆದಿರುವ ನಟಿ ಮಾಲಾಶ್ರೀ (Malashree) ಅವರಿಗೆ ಕನ್ನಡ ಸಿನಿಮಾ ರಂಗದಲ್ಲೊಂದು ವಿಶೇಷವಾದ ಸ್ಥಾನ ಮಾನವಿದೆ. ಮಾಲಾಶ್ರೀ ಅವರು ಮೂಲತಃ ತೆಲುಗಿನಿಂದ ಬಂದವರು, ತೆಲುಗು ಸಿನಿಮಾಗಳಲ್ಲೂ ನಟಿಸಿದವರು. ಆದರೆ ನಟಿ ಹೆಚ್ಚು ಜನಪ್ರಿಯತೆ ಪಡೆದಿದ್ದು, ಸ್ಟಾರ್ ನಟಿಯಾಗಿ ಜನ ಮನ ಗೆದ್ದು, ಜನರ ಅಚ್ಚು ಮೆಚ್ಚಿನ ನಟಿಯಾಗಿದ್ದ ಮಾತ್ರ ಕನ್ನಡದಲ್ಲಿ ಎನ್ನುವುದು ಅಕ್ಷರಶಃ ಸತ್ಯ.
ಮಾಲಾಶ್ರೀ ಅವರು ಕನ್ನಡ ಸಿನಿಮಾ ರಂಗದಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡವರು. ಈಗ ಅವರ ಮಗಳು ಆರಾಧನಾ ರಾಮ್ ಅವರು ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿಯನ್ನು ನೀಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ಕಾಟೇರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಆರಾಧನಾ ಅವರ ಮೊದಲ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡಿದ್ದು, ಆರಾಧನಾ ಸ್ಯಾಂಡಲ್ವುಡ್ ನ ಭವಿಷ್ಯದ ಭರವಸೆಯ ನಟಿ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದು, ಅಪಾರ ಸಿನಿ ಪ್ರೇಮಿಗಳ ಹೃದಯವನ್ನು ಗೆದ್ದು ಬೀಗುತ್ತಿದ್ದಾರೆ. ಅಭಿಮಾನಿಗಳು ಆರಾಧನಾ ಅವರ ಮುಂದಿನ ಸಿನಿಮಾ ನಿರೀಕ್ಷೆಯಲ್ಲಿದ್ದಾರೆ.
ಸಿನಿಮಾದ ನಂತರ ಇದೀಗ ಮಾಲಾಶ್ರೀ ಮತ್ತು ಅವರ ಮಗಳು ಆರಾಧನಾ ಅವರು ಮುಂಬೈ ಮಹಾನಗರಕ್ಕೆ ಭೇಟಿಯನ್ನು ನೀಡಿದ್ದು, ಅಲ್ಲಿನ ಸುಪ್ರಸಿದ್ಧ ಸಿದ್ಧಿ ವಿನಾಯದ ದೇಗುಲಕ್ಕೆ ಭೇಟಿಯನ್ನು ನೀಡಿ ದೇವರ ದರ್ಶನವನ್ನು ಮಾಡಿದ್ದಾರೆ.
ಮಾಲಾಶ್ರೀ ಮತ್ತು ಆರಾಧನಾ ಅವರು ಸಿದ್ಧಿ ವಿನಾಯಕ ದರ್ಶನವನ್ನು ಮಾಡಿದ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆಗಳನ್ನು ನೀಡುತ್ತಾ ಕಾಮೆಂಟ್ ಗಳನ್ನು ಸಹಾ ಮಾಡುತ್ತಿದ್ದಾರೆ.
Suchithra : ಗಾಯಕಿ ಸುಚಿತ್ರಾ ರಾಮದುರೈ (Suchithra) ಅವರು ಮೊನ್ನೆ ಮೊನ್ನೆಯಷ್ಟೇ ತಮ್ಮ ಮಾಜಿ ಪತಿ ತಮಿಳು ನಟ ಕಾರ್ತಿಕ್…
Prabhas : ಬಾಹುಬಲಿ (Bahubali) ಸಿನಿಮಾ ಖ್ಯಾತಿಯ ನಟ ಪ್ರಭಾಸ್ (Prabhas) ವಿಚಾರ ಬಂದಾಗಲೆಲ್ಲಾ ಅಲ್ಲಿ ಒಂದು ವಿಷಯ ಹೆಚ್ಚು…
Puttakkana Makkalu: ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಪುಟ್ಟಕ್ಕನ ಮಕ್ಕಳು (Puttakkana Makkalu) ಕಳೆದ ಕೆಲವು ದಿನಗಳಿಂದಲೂ ಸಹಾ ಸಹನಾ…
Kangana Ranaut: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಸದ್ಯಕ್ಕೆ ರಾಜಕೀಯದ ವಿಚಾರವಾಗಿ ಭರ್ಜರಿ ಸುದ್ದಿಯಲ್ಲಿದ್ದಾರೆ. ಮೊನ್ನೆಯಷ್ಟೇ ನಟಿ…
SeethaRama : ಸೀತಾಳ ಮನೆಗೆ ದೇಸಾಯಿ ಕುಟುಂಬದವರೆಲ್ಲರೂ ಆಗಮಿಸಿದ್ದಾರೆ. ಶಾಸ್ತ್ರೋಕ್ತವಾಗಿ ಹೆಣ್ಣನ್ನು ಕೇಳುವ ಶಾಸ್ತ್ರವನ್ನು ಬಹಳ ಖುಷಿಯಿಂದ ಮಾಡುತ್ತಿದ್ದಾರೆ ಸೂರ್ಯ…
Ninagagi Serial: ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಹೆಸರನ್ನು ಮಾಡಿರುವ ನಟಿಯರಲ್ಲಿ ದಿವ್ಯ ಉರುಡುಗ (Divya Uruduga) ಅವರು ಬಿಗ್…
This website uses cookies.