Jaggesh: ದರ್ಶನ್ ಗೋಸ್ಕರ ಅಂದಿದ್ರೆ ನಾನು ಬರ್ತಾ ಇರ್ಲಿಲ್ಲ; ಕಲಾವಿದರ ಸಂಘದ ಹೋಮ, ನಟ ಜಗ್ಗೇಶ್ ಅವ್ರು ಹೇಳಿದ್ದೇನು?

Written by Soma Shekar

Published on:

---Join Our Channel---

Jaggesh : ಕನ್ನಡ ಸಿನಿಮಾ ರಂಗದ (Sandalwood) ಏಳಿಗೆಗಾಗಿ ಇಂದು (ಆ.14) ಚಾಮರಾಜಪೇಟೆಯಲ್ಲಿನ ಕಲಾವಿದರ ಸಂಘದಲ್ಲಿ ಒಂದು ವಿಶೇಷ ಪೂಜೆಯ ಕಾರ್ಯಕ್ರಮವನ್ನು ನಡೆಸಲಾಗಿದ್ದು, ಇದರಲ್ಲಿ ಕನ್ನಡ ಸಿನಿಮಾ ರಂಗದ ಹಲವು ಕಲಾವಿದರು ಭಾಗಿಯಾಗಿದ್ದರು. ಈ ಪೂಜೆ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ನ ಹಿರಿಯ ನಟ, ನವರಸನಾಯಕ ಖ್ಯಾತಿಯ ನಟ ಜಗ್ಗೇಶ್ ಅವರು ಸಹಾ ಭಾಗಿಯಾಗಿದ್ದರು.

ಈ ಪೂಜೆಯಲ್ಲಿ ಸಿನಿಮಾ ರಂಗದ ಒಳಿತಿಗಾಗಿ ಸರ್ಪ ಶಾಂತಿ, ಅಶ್ಲೇಷ ಬಲಿ ಸೇರಿದಂತೆ ಹಲವು ಪೂಜೆಯ ಕಾರ್ಯವನ್ನು ಮಾಡಲಾಗಿದೆ. ಈ ವೇಳೆ ನಟ ಜಗ್ಗೇಶ್ (Jaggesh) ಅವರು ಮಾದ್ಯಮಗಳ ಜೊತೆ ಮಾತನಾಡುವ ಸಂದರ್ಭದಲ್ಲಿ ದರ್ಶನ್‌ ಗೋಸ್ಕರ (Darshan) ಪೂಜೆ ಮಾಡಿದಿದ್ರೆ ನಾನು ಬರುತ್ತಿರಲಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ.‌

ನಟ ಜಗ್ಗೇಶ್ ಅವರನ್ನು ದರ್ಶನ್ ಅವರ ಕುರಿತಾಗಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡುತ್ತಾ ದರ್ಶನ್‌ಗೋಸ್ಕರ ಪೂಜೆ ಮಾಡಿದ್ರೆ ನಾನು ಬರ್ತಾ ಇರ್ಲಿಲ್ಲ. ಆದರೆ ಈ ಪೂಜೆ ದರ್ಶನ್‌ಗಾಗಿ ಅಲ್ಲ, ಎಲ್ಲಾ ಕಲಾವಿದರ ಒಳಿತಿಗಾಗಿ ಮಾಡಿರೋದು ಎನ್ನುವ ಮಾತನ್ನು ಹೇಳಿದ್ದಾರೆ.‌ ಜಗ್ಗೇಶ್ ಅವರು ಹೇಳಿದ ಮಾತೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಟ ಜಗ್ಗೇಶ್ ಅವರು, ನನಗೂ ಅನೇಕರು ಇದರ ಬಗ್ಗೆ ಕೇಳಿದ್ದರು. ನಾನು ಈ ಬಗ್ಗೆ ಮಾಹಿತಿಯನ್ನ ಪಡೆದುಕೊಂಡಿದ್ದೆ, ಚಿತ್ರರಂಗದ ಏಳಿಗೆಗಾಗಿ ಎಂದ ಮೇಲೆ ನಾನು ಭೇಟಿ ಕೊಟ್ಟಿದ್ದು ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ ನಟ ಜಗ್ಗೇಶ್ ಅವರು.

Leave a Comment