Bigg Boss Kannada 11 ಶಾಕಿಂಗ್ ಎಲಿಮಿನೇಷನ್, ಮೊದಲ ವಾರವೇ ಪ್ರಬಲ ಸ್ಪರ್ಧಿ ಮನೆಯಿಂದ ಹೊರಕ್ಕೆ

Written by Soma Shekar

Published on:

---Join Our Channel---

Bigg Boss Kannada 11 : ಕನ್ನಡ ಬಿಗ್ ಬಾಸ್ (Bigg Boss Kannada 11) ಮೊದಲ ಎಲಿಮಿನೇಷನ್‌ ನಡೆದಿದ್ದು, ಖಂಡಿತ ಬಿಗ್ ಬಾಸ್ ನಲ್ಲಿ ಮೊದಲ ವಾರದ ಎಲಿಮಿನೇಷನ್ ನಲ್ಲೇ ದೊಡ್ಡ ಅಚ್ಚರಿಯು ನಡೆದಿದ್ದು, ಶಾಕಿಂಗ್ ಎಲಿಮಿನೇಷನ್ ಆಗಿದೆ ಎಂದು ತಿಳಿದು ಬಂದಿದೆ. ಏಕೆಂದರೆ ಈ ಸೀಸನ್ ನಲ್ಲಿ ಕೊನೆಯವರೆಗೆ ಇರ್ತಾರೆ ಅಂತ ಊಹೆ ಮಾಡಿದ್ದಂತಹ ಸ್ಪರ್ಧಿಯೇ ಮನೆಯಿಂದ ಹೊರ ನಡೆದಿದ್ದಾರೆ. 

ವೀಕೆಂಡ್ ಪಂಚಾಯಿತಿಯ ನಿನ್ನೆಯ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ಈ ಸೀಸನ್‌ನ ಮೊದಲ ಪಂಚಾಯಿತಿ ಯನ್ನು ನಡೆಸಿದ್ದಾರೆ. ಈ ವೇಳೆ ಅವರು ನಾಮಿನೇಟ್ ಆಗಿದ್ದವರಲ್ಲಿ ಮೂವರನ್ನು ಸೇವ್‌ ಮಾಡಿದ್ದು, ಇನ್ನೂ 6 ಜನರು ಬಾಕಿ ಉಳಿದಿದ್ದರು. ಆ ಆರರಲ್ಲಿ ಒಬ್ಬರು ಈಗ ಮನೆಯಿಂದ ಹೊರಗೆ ಬಂದಿದ್ದಾರೆ.

ಬಿಗ್‌ ಬಾಸ್‌ ನ ಮೊದಲ ವಾರದಲ್ಲಿ ನಾಮಿನೇಟ್ ಆಗಿದ್ದವರಲ್ಲಿ ನಿನ್ನೆ ಕಿಚ್ಚ ಸುದೀಪ್ ಅವರು ಭವ್ಯಾ ಗೌಡ, ಗೌತಮಿ ಜಾಧವ್‌ ಮತ್ತು ಮಾನಸ ಸೇಫ್ ಎಂದು ಹೇಳಿದ್ದರು. ಇವರನ್ನು ಬಿಟ್ಟು ಚೈತ್ರ ಕುಂದಾಪುರ, ಹಂಸ, ಜಗದೀಶ್, ಮೋಕ್ಷಿತಾ, ಶಿಶಿರ್, ಯಮುನಾ ನಾಮಿನೇಷನ್ ಪಟ್ಟಿಯಲ್ಲಿ ಉಳಿದುಕೊಂಡಿದ್ದರು.

ಈಗ ಬಂದಿರುವ ಸುದ್ದಿಗಳ ಪ್ರಕಾರ ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನದಿಂದಲೇ ಸಖತ್ ಸದ್ದನ್ನು ಮಾಡಿದ್ದ ಯಮುನಾ ಶ್ರೀನಿಧಿ (Yamuna Srinidhi) ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಮೊದಲ ವಾರದಲ್ಲೇ ಎಲಿಮಿನೇಟ್ ಆಗಲಿದ್ದಾರೆ ಎಂದು ಕೆಲ ವರದಿಗಳು ತಿಳಿಸಿದ್ದು, ಅತಿ ಕಡಿಮೆ ವೋಟ್‌ ಪಡೆದ ಕಾರಣ ಅವರು ಮನೆಯಿಂದ ಹೊರಗೆ ಬಂದಿದ್ದಾರೆನ್ನಲಾಗಿದೆ.

Leave a Comment