Bhagyalakshmi Serial ತಾಂಡವ್ ಗೆ ಒಂದು ತಿಂಗಳ ಚಾಲೆಂಜ್ ಹಾಕಿದ ಕುಸುಮಾ, ಭಾಗ್ಯಾಳ ಭಾಗ್ಯ ಬದಲಾಗುತ್ತಾ?

Written by Soma Shekar

Published on:

---Join Our Channel---

Bhagyalakshmi Serial : ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ (Bhagyalakshmi Serial) ತಾಂಡವ್ ಶ್ರೇಷ್ಠ ಮದುವೆ ಅಧ್ಯಾಯ ಕೊನೆಗೂ ಮುಗಿದಿದೆ. ಕುಸುಮಾ ಮತ್ತು ಪೂಜಾ ಮದುವೆ ಮಂಟಪಕ್ಕೆ ಬಂದು ಮದುವೆ ನಿಲ್ಲಿಸುವಲ್ಲಿ ಸಫಲರಾಗಿದ್ದಾರೆ. ಆದರೆ ಇಷ್ಟೆಲ್ಲಾ ನಡೆದರೂ ಭಾಗ್ಯಾಗೆ ಮಾತ್ರ ಯಾವುದೇ ವಿಚಾರದ ಸಣ್ಣ ಸುಳಿವು ಸಿಕ್ಕಿಲ್ಲ ಅನ್ನೋದು ಮಾತ್ರ ಸತ್ಯ. ಆದರೆ ಮದುವೆ ನಿಂತರೂ ಕೂಡಾ ತಾಂಡವ್ ಗೆ ಮಾತ್ರ ಭಾಗ್ಯ ಜೊತೆ ಬಾಳ್ವೆ ಮಾಡೋದು ಸುತರಾಂ ಇಷ್ಟ ಇಲ್ಲ.

ರಸ್ತೆಯಲ್ಲೇ ಅಮ್ಮನ ಜೊತೆ ಜಗಳ ಮಾಡ್ಕೊಂಡಿದ್ದಾನೆ. ಭಾಗ್ಯ ತನಗೆ ಬೇಕಾದ ಜಾಗೆ ಇಲ್ಲ, ಅವಳು ತನಗೆ ಇಷ್ಟ ಇಲ್ಲ ಅಂತಾನೇ ವಾದ ಮಾಡಿದ್ದಾನೆ. ಈಗ ಮಗನ ಮಾತಿಗೆ ಕುಸುಮಾ ಮತ್ತೊಂದು ಸವಾಲನ್ನು ಹಾಕಿದ್ದಾರೆ.‌ ಈ ಹಿಂದೆ ಸೊಸೆಯನ್ನ ಓದಿಸೋ ಸವಾಲು ಹಾಕಿ ಸಕ್ಸಸ್ ಆದ ಕುಸುಮಾ ಈಗ ಮತ್ತೊಂದು ಹೆಜ್ಜೆ ಇಡಲು ಸಜ್ಜಾಗಿದ್ದಾರೆ.‌

ಹೌದು, ಕುಸುಮಾ (Kusuma) ಈಗ ತಾಂಡವ್ (Tandav) ಮುಂದೆ ಹೊಸ ಚಾಲೆಂಜ್ ಮಾಡಿದ್ದಾರೆ, ಇನ್ನು ಒಂದೇ ಒಂದು ತಿಂಗಳಲ್ಲಿ ಭಾಗ್ಯಾನ ನಿನಗೆ ತಕ್ಕ ಹಾಗೆ ಇರೋ ತರ ಮಾಡ್ತೀನಿ ಅಂತ ಹೇಳಿದ್ದಾರೆ. ಅಂದ್ರೆ ಈಗ ಕುಸುಮಾ ತಮ್ಮ ಸೊಸೆಯನ್ನ ಮಾಡ್ರನ್ ಮಹಿಳೆಯಾಗಿ ಮಾಡೋ ಸವಾಲನ್ನ ಹಾಕಿರೋ ಹಾಗೆ ಕಂಡಿದೆ.

ಇನ್ನು ಮುಂದಿನ ದಿನಗಳಲ್ಲಿ ಕುಸುಮಾ ಭಾಗ್ಯ ಜೀವನದಲ್ಲಿ ಮತ್ತೆ ಯಾವ ಹೊಸ ಹೊಸ ಬದಲಾವಣೆಯನ್ನು ತರ್ತಾರೆ ಅನ್ನೋದನ್ನ ನೋಡೋದಕ್ಕೆ ಪ್ರೇಕ್ಷಕರು ಕೂಡಾ ಬಹಳ ಕಾತರರಾಗಿ ಕಾಯ್ತಾ ಇದ್ದು, ಭಾಗ್ಯಲಕ್ಷ್ಮೀ ಸೀರಿಯಲ್ ನ ಹೊಸ ಟ್ವಿಸ್ಟ್ ಏನೆಲ್ಲಾ ಮೋಡಿ ಮಾಡುತ್ತೋ ನೋಡಬೇಕಾಗಿದೆ.

Jani Master ಲೈಂ* ಗಿಕ ಕಿರುಕುಳ ನೀಡಿದ್ದೆ, ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡು ಶಾಕ್ ಕೊಟ್ಟ ಜಾನಿ ಮಾಸ್ಟರ್

Leave a Comment