ಕೊನೆಯ ದಿನದ ಶೂಟಿಂಗ್ ಮುಕ್ತಾಯ, ಗೆಟ್ ಟು ಗೆದರ್ ಮಾಡಿದ ಖುಷಿ ಪಟ್ಟ Antarapata Serial Team

Written by Soma Shekar

Published on:

---Join Our Channel---

Antarapata: ಸೆಪ್ಟೆಂಬರ್ 29ರಿಂದ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 11’ ರ ಆರಂಭಕ್ಕೆ ವೇದಿಕೆ ಸಜ್ಜಾಗಿದೆ. ಬಿಗ್ ಬಾಸ್ ಆರಂಭದ ಹಿನ್ನೆಲೆಯಲ್ಲಿ ಕೆಲವು ಸೀರಿಯಲ್ ಗಳು ಮುಗಿಯಲೇಬೇಕು. ಈಗ ಅಂತರಪಟ (Antarapata) ಸೀರಿಯಲ್ ಮುಕ್ತಾಯ ಆಗ್ತಿದೆ.

ಅಂತರಪಟ ಸೀರಿಯಲ್ ತಂಡವು ಕೊನೆಯ ದಿನದ ಶೂಟಿಂಗ್ ಮುಗಿಸಿದ್ದು, ಕಲಾವಿದರು ಗೆಟ್ ಟು ಗೆದರ್ ಮಾಡಿ ಸುಂದರ ನೆನಪುಗಳನ್ನು ಕಲೆ ಹಾಕಿದ್ದಾರೆ.

ತನ್ವಿ ಬಾಲರಾಜ್ (Tanvi Balaraj), ಶರ್ಮಿಳಾ ಚಂದ್ರಶೇಖರ್, ಸ್ವಪ್ನ ಕೃಷ್ಣ, ನಟ ಚಂದನ್ ಗೌಡ (Chandan Gowda) ಅವರು ಗೆಟ್ ಟು ಗೆದರ್ ನಲ್ಲಿ ಕಾಣಿಸಿಕೊಂಡಿರುವುದನ್ನು ನೋಡಬಹುದಾಗಿದೆ.

ನಟಿ ತನ್ವಿ ಬಾಲರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಸುಂದರ ಸಮಯದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ನೀಡಿದ್ದಾರೆ.

ಸೀರಿಯಲ್ ಮುಗೀತಿರೋದು ಪ್ರೇಕ್ಷಕರಿಗೆ ಬೇಸರವನ್ನು ಉಂಟು ಮಾಡಿದೆ, ಇದೇ ವೇಳೆ ಪ್ರೇಕ್ಷಕರ ಒಂದಷ್ಟು ಪ್ರಶ್ನೆಗಳಿಗೆ ಸಹಾ ಈಗ ಉತ್ತರ ಸಿಗಬೇಕಿದೆ.

ಅಮಲ ಇಷ್ಟುದಿನಗಳ ಕಾಲ ಮಾಡಿದ ಕುತಂತ್ರಗಳ ಉದ್ದೇಶ ಏನು? ತನ್ನ ಮನೆಯವರ ಮುಂದೆ ಅಮಲಾ ತಪ್ಪು ಒಪ್ಪಿಕೊಳ್ತಾಳಾ, ಅಮಲಾ ಬುದ್ಧಿ ಗೊತ್ತಾದಬಳಿಕ ಸುಶಾಂತ್ ಕುಟುಂಬ ಅವಳನ್ನು ಕ್ಷಮಿಸುತ್ತದೆಯೇ?

ತನ್ವಿ ಮಲತಂದೆ ಮಹೇಶ್ ಸರಿ ಹೋಗ್ತಾನಾ? ಹೀಗೆ ಒಂದಷ್ಟು ಪ್ರಶ್ನೆಗಳಿಗೆ ಉತ್ತರ ಗೊತ್ತಾಗಬೇಕಿದೆ. ಒಟ್ನಲ್ಲಿ ಕೊನೆಗೆ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತಾ ಅನ್ನೋದನ್ನ ಸಹಾ ಕಾದು ನೋಡಬೇಕಾಗಿದೆ.

Leave a Comment