Bhagyalakshmi Serial: ಪೂಜಾ, ಭಾಗ್ಯ,‌ಕುಸುಮಾ.. ಮದ್ವೆ ಮಂಟಪಕ್ಕೆ ಮೊದ್ಲು ಬರೋದ್ಯಾರು? ಮದ್ವೆ ನಿಲ್ಸೋದು ಯಾರು?

Written by Soma Shekar

Published on:

---Join Our Channel---

Bhagyalaskhmi Serial: ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ (Bhagyalakshmi Serial) ಹೊಸ ತಿರುವು ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ತಾಂಡವ್ ಮತ್ತು ಶ್ರೇಷ್ಠ ಇಬ್ಬರೂ ಭರ್ಜರಿಯಾಗಿ ಮದುವೆ ಆಗಲು ಸಜ್ಜಾಗಿದ್ದಾರೆ. ಮದುವೆ ಮಂಟಪದಲ್ಲಿ ಖುಷಿಯಿಂದ ಕುಣಿದಾಡಿದ್ದಾರೆ. ಕುಸುಮಾಗೆ ಶ್ರೇಷ್ಠಾನ ಮದ್ವೆ ಆಗ್ತಿರೋದು ತಾಂಡವ್ ಅಂತ ಗೊತ್ತಾಗಿದೆ. ಸುಂದರಿ ಹೇಳಿದ ಮಾತನ್ನು ಕೇಳಿ ಭಾಗ್ಯ ಮಾವನ ಜೊತೆ ಹೋಗಿ ಮಹೇಶನಿಂದ ಪೂಜಾಳನ್ನು ಕಾಪಾಡಿದ್ದಾಳೆ.‌

ಆದರೆ ಈಗ ಪ್ರೇಕ್ಷಕರನ್ನ ಕಾಡ್ತಾ ಇರೋ ಪ್ರಶ್ನೆ ಇಷ್ಟಕ್ಕೂ ಶ್ರೇಷ್ಠ (Shreshta) ಮತ್ತು ತಾಂಡವ್ (Tandav) ಮದುವೆಯನ್ನ ನಿಲ್ಸೋದು ಯಾರು ? ಅನ್ನೋದಾಗಿದೆ. ಭಾಗ್ಯಾಗೆ ತನ್ನ ಗಂಡನೇ ಶ್ರೇಷ್ಠಾನ ಮದುವೆ ಆಗ್ತಿರೋದು ಅಂತ ಗೊತ್ತಿಲ್ಲ. ಆದರೆ ಕುಸುಮಾ ಮತ್ತು ಪೂಜಾಗೆ ಈ ಸತ್ಯ ಗೊತ್ತಿದೆ. ಸೊಸೆಗೆ ವಿಷಯ ಗೊತ್ತಾಗಬಾರದು ಅಂತ ಕುಸುಮಾ ಆಲೋಚನೆ.

ಕುಸುಮಾ ಮದುವೆ ನಿಲ್ಲಿಸೋದಕ್ಕೆ ಮದುವೆ ಮಂಟಪದ ಕಡೆಗೆ ಹೊರಟಿದ್ದಾರೆ. ಇನ್ನೊಂದು ಕಡೆ ಮಹೇಶನಿಂದ ಪೂಜಾನ ಭಾಗ್ಯ ಬಿಡಿಸಿದ ನಂತರ ಅಕ್ಕನಿಗೆ ಗೊತ್ತಾಗದ ಹಾಗೆ ಪೂಜಾ ಶ್ರೇಷ್ಠ ಮದುವೆಯನ್ನ ನಿಲ್ಲಿಸಬೇಕಂತ ಅಲ್ಲಿಂದ ಜಾರಿಕೊಂಡಿದ್ದಾಳೆ.‌ ಸುಂದ್ರಿ ತಾವು ತರುಣ್ ಗೆ ನಾಟಕದ ತಂದೆ ತಾಯಿ ಅಂತ ಭಾಗ್ಯಾಗೆ ಹೇಳಿದ್ದಾಳೆ.

ಈಗ ಕುಸುಮಾನ (Kusuma) ಸೆಕ್ಯುರಿಟಿ ಅವರು ಮದುವೆ ಮನೆಯೊಳಕ್ಕೆ ಬಿಡಲ್ಲ, ಅದೇ ವೇಳೆ‌ ಪೂಜಾ ಕೂಡಾ ಮದುವೆ ಮಂಟಪದ ಕಡೆ ಬರ್ತಿದ್ದಾಳೆ. ಮದುವೆ ಗಂಡನ ತಂದೆ ತಾಯಿ ಅನ್ನೋದೇ ನಾಟಕ ಅಂತ ಗೊತ್ತಾದ ಭಾಗ್ಯ ಕೂಡಾ ಮದುವೆ ಮಂಟಪಕ್ಕೆ ಬರ್ತಾಳಾ?? ಮದುವೆಯನ್ನ ನಿಲ್ಸೋದು ಯಾರು? ಕಾದು ನೋಡಬೇಕಾಗಿದೆ.

Actress Trisha: ಸಮಂತಾ, ರಶ್ಮಿಕಾ, ಪೂಜಾ ಎಲ್ಲರನ್ನೂ ಹಿಂದೆ ಹಾಕಿದ ತ್ರಿಷಾ, ಯುವನಟಿಯರಿಗೂ ಟಕ್ಕರ್ ಕೊಟ್ಟ ತ್ರಿಷಾ

Leave a Comment