Bhagyalakshmi Serial: ಮದುವೆ ಸಂಭ್ರಮದಲ್ಲಿ ಹುಚ್ಚೆದ್ದು ಕುಣಿದ ತಾಂಡವ್ ಶ್ರೇಷ್ಠ, ಏನೂ ಮಾಡಲಾಗದ ಕುಸುಮಾ ಕಣ್ಣೀರು

Written by Soma Shekar

Published on:

---Join Our Channel---

Bhagyalakshmi Serial: ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ (Bhagyalakshmi Serial) ಶ್ರೇಷ್ಠ, ತಾಂಡವ್ ಮದುವೆಗೆ ಸಕಲ ಸಿದ್ಧತೆಗಳು ಭರ್ಜರಿಯಾಗಿ ನಡೆದಿದೆ. ಇನ್ನೊಂದು ಕಡೆ ಕುಸುಮಾಗೆ ಶ್ರೇಷ್ಠಾಳನ್ನ ಮದುವೆ ಆಗ್ತಿರೋದು ತನ್ನ ಮಗ ತಾಂಡವ್ ಅನ್ನೋದು ಗೊತ್ತಾಗಿದೆ. ‌ಸತ್ಯ ತಿಳಿದು ಕುಸುಮಾ ಕಣ್ಣೀರಾಗಿದ್ದರೆ, ಅಲ್ಲಿ ಮದುವೆ ಮಂಟಪದಲ್ಲಿ ತಾಂಡವ್ ಮತ್ತು ಶ್ರೇಷ್ಠ ಮದುವೆ ಮನೆಗೆ ಕುಣಿಯುತ್ತಾ ಖುಷಿಯಲ್ಲಿ ಎಂಟ್ರಿ ನೀಡಿದ್ದಾರೆ.

ಸರಿಯಾದ ಸಮಯಕ್ಕೆ ಮದುವೆ ನಿಲ್ಲಿಸಬೇಕಂತ ಕುಸುಮಾ (Kusuma) ಆಟೋದಲ್ಲಿ ಬರ್ತಿರೋವಾಗಲೇ ವಿಘ್ನಗಳು ಎದುರಾಗಿದೆ. ಬರ್ತಿದ್ದ ಆಟೋ ಬೈಕ್ ಗೆ ಗುದ್ದಿದೆ. ಅದರ ಮೇಲಿದ್ದ ವ್ಯಕ್ತಿ ಗಲಾಟೆಗೆ ಇಳಿದಿದ್ದಾನೆ. ಇದೇ ವೇಳೆ ಪೋಲಿಸರು ಸಹಾ ಬಂದಿದ್ದಾರೆ. ಕುಸುಮಾಗೆ ದಿಕ್ಕು ತೋಚದಾಗಿದೆ.

ಕುಸುಮಾ ಸರಿಯಾದ ಸಮಯಕ್ಕೆ ಮದುವೆ ಮಂಟಪಕ್ಕೆ ತಲುಪದೇ ಹೋದರೆ ತಾಂಡವ್ ಮತ್ತು ಶ್ರೇಷ್ಠ ಮದುವೆ ನಡೆಯೋದಂತೂ ಪಕ್ಕಾ ಆಗಿದೆ. ಮಂಟಪದಲ್ಲಿ ತಾಂಡವ್ ಮತ್ತು ಶ್ರೇಷ್ಠ ಖುಷಿಯಿಂದ ಭರ್ಜರಿಯಾಗಿ ಡ್ಯಾನ್ಸ್ ಮಾಡ್ತಿರೋದು ಪ್ರೊಮೊದಲ್ಲಿ ಕಂಡಿದೆ.

ಪೂಜಾನ ಶ್ರೇಷ್ಠ ಕಿಡ್ನಾಪ್ ಮಾಡ್ಸಿದ್ದಾಳೆ. ಅವಳನ್ನು ಕಾಪಾಡೋಕೆ ಸುಂದ್ರಿ ಭಾಗ್ಯ ಹತ್ರ ಬರ್ತಿದ್ದಾಳೆ. ಭಾಗ್ಯಾಗೆ ಸತ್ಯ ಗೊತ್ತಾಗಿ ಪೂಜಾನ ಕಾಪಾಡಿ ತಾನೇ ಮಂಟಪಕ್ಕೆ ಬಂದು ಶ್ರೇಷ್ಠ ಮತ್ತು ತಾಂಡವ್ ಮದುವೆಯನ್ನು ನಿಲ್ಲಿಸ್ತಾಳಾ? ಅನ್ನೋದನ್ನ ಕಾದು ನೋಡಬೇಕಾಗಿದೆ.

Varun Aradya: ರೀಲ್ಸ್ ಸ್ಟಾರ್, ನಟ ವರುಣ್ ಆರಾಧ್ಯ ಮತ್ತು ಮಾಜಿ ಪ್ರೇಯಸಿ ಕಥೆಯಲ್ಲಿ ಟ್ವಿಸ್ಟ್; ಇನ್ಸ್ಟಾಗ್ರಾಂ ಪೋಸ್ಟ್ ವೈರಲ್

Leave a Comment