Bhagyalakshmi Serial: ಮಗನ ಮಹಾಸತ್ಯ ಬಯಲಾಯ್ತು, ಶಪಥ ಮಾಡಿದ ಕುಸುಮಾ ಮುಂದಿನ ಹೆಜ್ಜೆ ಏನು?

Written by Soma Shekar

Published on:

---Join Our Channel---

Bhagyalakshmi Serial: ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ (Bhagyalakshmi Serial) ಕೊನೆಗೂ ಮನೆ ಕಳ್ಳನ ಗುಟ್ಟು ಕುಸುಮಾ ಮುಂದೆ ರಟ್ಟಾಗಿದೆ. ತನ್ನ ಮಗನನ್ನ ರಾಜ ರಾಜ ಅಂತ ಪ್ರೀತಿಯಿಂದ ಕರೀತಿದ್ದ ಕುಸಮಾಗೆ ತನ್ನ ಆ ರಾಜ ನಿಜವಾದ ಬಣ್ಣ ಏನು ಅನ್ನೋದು ಗೊತ್ತಾಗಿದೆ. ಹೆಂಡ್ತಿ ಮಕ್ಕಳಿಗೆ ಮೋಸ ಮಾಡಿ ‌ಶ್ರೇಷ್ಠಾಳನ್ನ ಮದುವೆ ಆಗ್ತಾ ಇರೋದು ತನ್ನ ಮಗನೇ ಅನ್ನೋ ಸತ್ಯ ಕುಸುಮಾ ಮುಂದೆ ಬಯಲಾಗಿದೆ.

ಶ್ರೇಷ್ಠ ಯಾರದೋ ಸಂಸಾರವನ್ನು ಹಾಳು ಮಾಡ್ತಾ ಇದ್ದಾಳೆ ಅಂತ ಸಿಟ್ಟಾಗಿದ್ದ ಕುಸುಮಾಗೆ ಈಗ ಅದು ತನ್ನ ಸೊಸೆಯ ಕುಟುಂಬವೇ ಅನ್ನೋದು ಗೊತ್ತಾಗಿ ನೊಂದು ಕೊಂಡಿದ್ದಾಳೆ. ಮನೆಯಲ್ಲಿದ್ದ ಲಗ್ನ ಪತ್ರಿಕೆಯಲ್ಲಿ ಶ್ರೇಷ್ಠ ಜೊತೆಗೆ ಮಗ ತಾಂಡವ್ ಫೋಟೋ ನೋಡಿ ಶಾಕ್ ಆಗಿದ್ದಾಳೆ.

ಇನ್ನೊಂದು ಕಡೆ ಶ್ರೇಷ್ಠ ಕುಸುಮಾ ಮತ್ತು ಭಾಗ್ಯಾನ ಮದುವೆ ಮಂಟಪಕ್ಕೆ ಬಿಡಬೇಡಿ ಅಂತ ಸೆಕ್ಯುರಿಟಿಗೆ ಹೇಳಿದ್ದಾಳೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕುಸುಮಾ ಏನು ಮಾಡ್ತಾಳೆ? ಹೇಗೆ ಶ್ರೇಷ್ಠ ಮತ್ತು ತಾಂಡವ್ ಮದುವೆಯನ್ನ ನಿಲ್ಲಿಸ್ತಾಳೆ ಅನ್ನೋದೇ ಈಗಿರುವ ಪ್ರಶ್ನೆಯಾಗಿದೆ.

ಕುಸುಮಾ ಮಗನಿಗೆ ಬುದ್ಧಿಯನ್ನು ಕಲಿಸೋದಕ್ಕೆ ಪೋಲಿಸರನ್ನು ಕರ್ಕೊಂಡು ಹೋಗಿ ಮದುವೆಯನ್ನು ನಿಲ್ಲಿಸ್ತಾಳಾ? ಈಗಂತೂ ತಾಂಡವ್ ಮತ್ತು ಶ್ರೇಷ್ಠ ಮದುವೆ ಆಗೋದು ಅನುಮಾನ ಅಂತಾನೇ ಹೇಳಬಹುದಾಗಿದೆ. ಕುಸುಮಾ ಮುಂದಿನ ಹೆಜ್ಜೆ ಏನು ಅನ್ನೋದನ್ನ ನೋಡಬೇಕಾಗಿದೆ.

Leave a Comment