Nagarjuna : ನಾಗಾರ್ಜುನ ಪರ ಚಿತ್ರರಂಗ ಮೌನ, ನಟನ ನೋವಿಗೆ ಸೆಲೆಬ್ರಿಟಿಗಳ ಮನಸ್ಸು ಮಿಡಿಯಲಿಲ್ಲ ಏಕೆ?

Written by Soma Shekar

Published on:

---Join Our Channel---

Nagarjuna : ತೆಲುಗು ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ (Nagarjuna) ಅವರದ್ದು ಎನ್ನಲಾದ ಮಾದಾಪುರದಲ್ಲಿರುವ ಎನ್​​ ಕನ್ವೆನ್ಷನ್​ ಹಾಲ್​ ಅನ್ನು ಹೈದ್ರಾಬಾದ್ ಡಿಸಾಸ್ಟರ್ ರೆಸ್ಪಾನ್ಸ್ ಮತ್ತು ಅಸೆಟ್ಸ್ ಮಾನಿಟರಿಂಗ್ ಮತ್ತು ಪ್ರೊಟೆಕ್ಷನ್ ಅಧಿಕಾರಿಗಳು ನೆಲಸಮ ಮಾಡಿದ ವಿಚಾರವು ಈಗಾಗಲೇ ದೊಡ್ಡ ಸುದ್ದಿಯಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆ ಹುಟ್ಟು ಹಾಕಿದೆ. 

ಇಷ್ಟೆಲ್ಲಾ ಆದರೂ ಸಹಾ ಇಡೀ ಟಾಲಿವುಡ್ (Tollywood) ಮೌನವಾಗಿದೆ. ಯಾವೊಬ್ಬ ನಟ ಅಥವಾ ನಟಿ ನಾಗಾರ್ಜುನ ಅವರ ಪರವಾಗಿ ಮಾತನಾಡದೇ ಇರುವುದು ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ. ನಟ ಈ ವಿಚಾರವಾಗಿ ತಮ್ಮ ಬೇಸರವನ್ನು ಎಕ್ಸ್ ನಲ್ಲಿ ಶೇರ್ ಮಾಡಿಕೊಂಡಿದ್ದರು. ಆದರೆ ಇದಕ್ಕೆ ಯಾವ ಸೆಲೆಬ್ರಿಟಿ ಸಹಾ ಪ್ರತಿಕ್ರಿಯೆಯನ್ನು ನೀಡಿಲ್ಲ.

ಈ ವಿಷಯವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಅನೇಕರು ಪ್ರಶ್ನೆ ಮಾಡಿದ್ದಾರೆ. ನಟ ತಮ್ಮ ನೋವನ್ನು ಹಂಚಿಕೊಂಡರೂ ಸಹಾ ಯಾಕೆ ಎಲ್ಲರೂ ಮೌನವಾಗಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಅಭಿಮಾನಿಗಳು ತಮ್ಮ ಅಭಿಮಾನ ನಟನ ಪರವಾಗಿ ದನಿ ಎತ್ತಿ ಟ್ವೀಟ್ ಗಳನ್ನು ಮಾಡಿದ್ದಾರೆ.

ಇಷ್ಟಕ್ಕೂ ಸಿನಿಮಾ ಸೆಲೆಬ್ರಿಟಿಗಳು ಮೌನ ವಹಿಸಿರುವುದು ಏಕೆ ಎನ್ನುವುದಾದರೆ, ಇದು ನಾಗಾರ್ಜುನ ಅವರ ಖಾಸಗಿ ಆಸ್ತಿಯ ವಿಚಾರವಾಗಿದೆ. ನಾಗಾರ್ಜುನ ಮತ್ತು ಸರ್ಕಾರದ ನಡುವಿನ ಈ ಸಮಸ್ಯೆ ಇದಾಗಿರುವುದರಿಂದ ಯಾವ ಸೆಲೆಬ್ರಿಟಿಗಳು ಇದರ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಲಾಗುತ್ತಿದೆ. ‌

Sangeetha Sringeri : ಸಂಗೀತಾ ಹಾಟ್ ಲುಕ್, ಸ್ಟೈಲಿಶ್ ಐಕಾನ್ ನೀವು ಎಂದು ಹಾಡಿ ಹೊಗಳ್ತಿರೋ ಫ್ಯಾನ್ಸ್

Leave a Comment