NagaChaitanya: ಸಮಂತಾ ಮೇಲೆ ಹೀಗೆ ಸೇಡು ತೀರಿಸಿಕೊಂಡ್ರಾ ನಾಗಚೈತನ್ಯ; ನಿಶ್ಚಿತಾರ್ಥಕ್ಕೆ ಆಗಸ್ಟ್ 8 ಯಾಕೆ?

Written by Soma Shekar

Published on:

---Join Our Channel---

NagaChaitanya: ನಟ ನಾಗಚೈತನ್ಯ (NagaChaitanya) ನಿನ್ನೆ ತಮ್ಮ ಗರ್ಲ್ ಫ್ರೆಂಡ್ ನಟಿ ಶೋಭಿತಾ ಧೂಳಿಪಾಳ (Shobita Dhulipala) ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವರ ನಿಶ್ಚಿತಾರ್ಥದ ಫೋಟೋಗಳನ್ನ ಹಿರಿಯ ನಟ, ನಾಗಚೈತನ್ಯ ಅವರ ತಂದೆ ನಟ ನಾಗಾರ್ಜುನ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡು ಖುಷಿಯನ್ನು ಹಂಚಿಕೊಂಡಿದ್ದರು. ಫೋಟೋಗಳು ವೈರಲ್ ಆದ ಮೇಲೆ ಅದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.‌

ಅನೇಕರು ನಾಗಚೈತನ್ಯಗೆ ಸಮಂತಾಗಿಂತ (Samantha) ಉತ್ತಮ ಜೋಡಿ ಸಿಗೋದಿಲ್ಲ ಎಂದು ಹೇಳಿದ್ದಾರೆ. ಇವೆಲ್ಲವುಗಳು ನಡುವೆಯೇ ಈಗ ಹೊಸದೊಂದು ವಿಚಾರ ಮುನ್ನೆಲೆಗೆ ಬಂದಿದೆ. ಅದೇನೆಂದರೆ ನಾಗಚೈತನ್ಯ ಆಗಸ್ಟ್‌ 8 ರಂದೇ ಏಕೆ ನಿಶ್ಚಿತಾರ್ಥ ಮಾಡಿಕೊಂಡರು ಎನ್ನುವುದಾಗಿದೆ‌. ಈ ಮೂಲಕ ಸಮಂತಾ ಮೇಲೆ ಸೇಡು ತೀರಿಸಿಕೊಂಡರಾ ನಟ ಎನ್ನುವ ಪ್ರಶ್ನೆ ಮೂಡಿದೆ.

ನಾಗಚೈತನ್ಯ ಸಮಂತಾಗೆ ವಿಚ್ಚೇದನ ನೀಡಿದ ನಂತರ ನಟಿ ಶೋಭಿತಾ ಧೂಳಿಪಾಳ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆನ್ನುವ ವದಂತಿಗಳು ಹರಿದಾಡುತ್ತಲೇ ಇದ್ದವು. ಈಗ ಆ ವದಂತಿಗಳೇ ನಿಜವಾಗಿದೆ. ನಾಗಚೈತನ್ಯ ಮತ್ತು ಶೋಭಿತಾ ಈಗ ದಂಪತಿಗಳಾಗಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.

ನಾಗಚೈತನ್ಯ ಮತ್ತು ಸಮಂತಾ ಇಬ್ಬರದ್ದು ಪ್ರೇಮ ವಿವಾಹವಾಗಿತ್ತು. ಇವರು ಏಮ್ ಮಾಯ ಚೇಸಾವೋ ಸಿನಿಮಾದಲ್ಲಿ ಮೊದಲ ಬಾರಿಗೆ ಜೋಡಿಯಾಗಿ ನಟಿಸಿದ್ದರು. ಅಲ್ಲಿಂದಲೇ ಇಬ್ಬರ ನಡುವೆ ಸ್ನೇಹ ಆರಂಭವಾಗಿತ್ತು. ನಾಗಚೈತನ್ಯ ತನ್ನ ಪ್ರೇಮ ನಿವೇದನೆಯನ್ನು ಸಹಾ ಆಗಸ್ಟ್ 8 ರಂದೇ ಮಾಡಿಕೊಂಡಿದ್ದರು ಎನ್ನುವುದು ಸತ್ಯ.

ಅನಂತರ ಇಬ್ಬರೂ ಹಿಂದೂ ಸಂಪ್ರದಾಯ ಮತ್ತು ಕ್ರಿಶ್ಚಿಯನ್‌ ಸಂಪ್ರದಾಯ ಎರಡರ ಪ್ರಕಾರ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಆದರೆ ಇದ್ದಕ್ಮಿದ್ದ ಹಾಗೆ ಅವರ ವಿಚ್ಚೇದನದ ಘೋಷಣೆಯನ್ನು ಮಾಡಿದಾಗ ಅದು ಅಭಿಮಾನಿಗಳಿಗೆ ದೊಡ್ಡ ಶಾಕ್ ಅನ್ನೇ ನೀಡಿತ್ತು. ಆದರೆ ಅವರು ಬೇರೆ ಆದಾಗ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಈಗ ಆಗಸ್ಟ್ ಎಂಟರಂದೇ ನಿಶ್ಚಿತಾರ್ಥ ಮಾಡಿಕೊಂಡಿದ್ದನ್ನು ನೋಡಿ ಸಮಂತಾ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ನಟ ಸಮಂತಾ ಮೇಲಿನ ಅಸಮಾಧಾನದಿಂದ ಸೇಡು ತೀರಿಸಿಕೊಳ್ಳುವುದಕ್ಕಾಗಿ ಇಂತಹ ಕೆಲಸವನ್ನು ಮಾಡಿದ್ದಾರೆ ಎನ್ನುವುದು ಅವರ ಮಾತಾಗಿದೆ.

Nagara Panchami: ನಾಗರ ಪಂಚಮಿ ಪೂಜಾ ಮುಹೂರ್ತ; ಏನೀ ಹಬ್ಬದ ಮಹತ್ವ ಹಾಗೂ ಆಚರಣೆ ವಿಧಾನ

Leave a Comment