Lakshmi Baramma: ಕಾಪಾಡೋಕೆ ಹೋಗಿ ತಾನೇ ಬಲಿಯಾದ್ಲಾ ಕೀರ್ತಿ? ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಹೊಸ ಟ್ವಿಸ್ಟ್

Written by Soma Shekar

Published on:

---Join Our Channel---

Lakshmi Baramma: ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಒಂದು ಮಹತ್ವದ ತಿರುವು ಎದುರಾಗಿದೆ. ಕಳೆದೊಂದು ವಾರದಿಂದಲೂ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸುವಂತೆ ಎಪಿಸೋಡ್ ಗಳು ಪ್ರಸಾರವಾಗುತ್ತಿತ್ತು. ವೈಷ್ಣವ್, ಲಕ್ಷ್ಮಿ ಹಾಗೂ ಕೀರ್ತಿ ಜೀವನದಲ್ಲಿ ಏನೆಲ್ಲಾ ನಡೆದಿದೆ ಅನ್ನೋ ಸತ್ಯ ಗೊತ್ತಾಗಿದೆ. ಅದನ್ನು ಕಾವೇರಿ ಒಪ್ಪಿಕೊಳ್ಳಬೇಕಾಗಿತ್ತು. ಅದಕ್ಕೆ ಕೀರ್ತಿ ಕಾವೇರಿಯನ್ನು ಕಿಡ್ನಾಪ್ ಮಾಡಿಸಿದಳು.

ಕೀರ್ತಿ (Keerthy) ಮುಂದೆ ಕಾವೇರಿ ತಾನು ಮಾಡಿದ ತಪ್ಪನ್ನು ಒಪ್ಪಿಕೊಳ್ತಾಳಾ ಅನ್ನೋದನ್ನ ನೋಡೋದಕ್ಕೆ ಪ್ರೇಕ್ಷಕರು ಕಾಯುತ್ತಿರುವಾಗಲೇ, ಕಥೆಯಲ್ಲಿ ಹೇಗ ಉತ್ತರದ ಜೊತೆಗೆ ಹೊಸ ಟ್ವಿಸ್ಟ್ ಮೂಡಿ ಬಂದಿದೆ. ಕೀರ್ತಿ ತನಗೆ ಮೋಸ ಆಗಿದೆ, ಆ ಮೋಸಕ್ಕೆ ಕಾರಣ ಕಾವೇರಿ ಅಂತ ಮನಸ್ಸಿನಲ್ಲಿ ಇದ್ದ ಕೋಪವನ್ನೆಲ್ಲಾ ಕಾವೇರಿ ಮೇಲೆ ತೀರಿಸಿಕೊಂಡಿದ್ದಾಳೆ. ಅಲ್ಲದೇ ವೈಷ್ಣವ್ ನ ಮದುವೆ ಆಗ್ತೀನಿ ಅಂತ ಹೇಳಿ ಹೆದರಿಸಿದ್ದಾಳೆ.

ಕೀರ್ತಿಯ ವರ್ತನೆಯಿಂದ ಭಯ ಪಟ್ಟ ಕಾವೇರಿ (Kaveri) ಸತ್ಯವನ್ನ ಒಪ್ಪಿಕೊಂಡಿದ್ದು ಮಾತ್ರವಲ್ಲದೇ ಬೇರೆ ಯಾರ ಹತ್ರಾನೂ ಇದನ್ನ ಹೇಳಬೇಡ ಅಂತ ಬೇಡಿಕೊಂಡಿದ್ದಾಳೆ. ಇದೆಲ್ಲದರ ಮಧ್ಯೆ ಕೀರ್ತಿ ಹತ್ರ ಇದ್ದಂತಹ ಗನ್ ಅನ್ನ ಕಿತ್ತುಕೊಂಡ ಕಾವೇರಿ ಕೀರ್ತಿಗೆ ಅವಾಜ್ ಹಾಕ್ತಾ, ಅದ್ಯಾವ ಮೊಂಡು ಧೈರ್ಯದಲ್ಲಿ ಬಂದೆ ನೀನು, ನನ್ನನ್ನ ಎದುರು ಹಾಕಿಕೊಂಡು ನೀನು ಗೆಲ್ಲಬಹುದು ಅಂತ ಹೇಗೆ ಅನ್ಕೊಂಡೆ.

ನಾನು ಸಾಯ್ತಿನಿ ನೀನು ಲಕ್ಷ್ಮಿ ಇಬ್ರು ನರಳಬೇಕು ಅಂತ ಕಾವೇರಿ ಹೇಳಿದ ಮಾತುಗಳನ್ನು ಕೇಳಿ ಕೀರ್ತಿ ಕೂಡ ಶಾಕ್ ಆಗಿದ್ದಾಳೆ. ಅಲ್ಲದೇ ಹುಡುಗಾಟ ಆಡ್ಬೇಡಿ ಅಲ್ಲಿ ಪ್ರಪಾತ ಇದೆ ದಯವಿಟ್ಟು ಈ ಕಡೆ ಬನ್ನಿ ಅಂತ ಹೇಳಿದ್ದಾಳೆ. ಆದ್ರೆ ಕಾವೇರಿ ಹೆಜ್ಜೆ ಹಿಂದೆ ಹಾಕ್ತಾ ಹೋಗಿದ್ದಾಳೆ. ಕಾವೇರಿಯ ಪ್ಲಾನ್ ಏನು ಅಂತ ಗೊತ್ತಿಲ್ಲದ ಕೀರ್ತಿ ಕಾವೇರಿಯನ್ನ ಕಾಪಾಡೋಕೆ ಅಂತ ಮುಂದೆ ಬಂದ ಕೂಡಲೇ ಕಾವೇರಿ ಕೀರ್ತಿಯನ್ನೇ ಪ್ರಪಾತಕ್ಕೆ ತಳ್ಳಿದ್ದಾಳೆ.

ಕಾವೇರಿಯನ್ನ ನಂಬಿದ ಕೀರ್ತಿ ಕೊನೆಗೆ ತನ್ನ ಪ್ರಾಣವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿಗೆ ತಲುಪಿದ್ದಾಳೆ. ಇನ್ನೊಂದು ಕಡೆ ಸತ್ಯವನ್ನ ತಿಳ್ಕೋಬೇಕು ಅಂತ ಲಕ್ಷ್ಮಿ ಹಾಗೂ ವೈಷ್ಣವ್ ಕೀರ್ತಿಯನ್ನು ಹುಡುಕಿಕೊಂಡು ಬರ್ತಿದ್ದಾರೆ. ಕೀರ್ತಿ ಬದುಕಿ ಉಳಿತಾಳ? ಕಾವೇರಿ ಬಣ್ಣ ಬಯಲಾಗುತ್ತಾ? ಅಥವಾ ಮುಂದೆ ಬೇರೆ ಏನಾದರೂ ಆಗುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ.

Puttakkana Makkalu: ಸಹನಾ ಬಾಳಲ್ಲಿ ಮತ್ತೊಂದು ಬರ ಸಿಡಿಲು; ಇರೋ ಒಂದು ನೆಲೆ ಕಳ್ಕೊಳ್ತಾಳಾ ಸಹನಾ?

Leave a Comment