Actor Chethan: ಜೈಲಿನಲ್ಲಿದ್ದಾಗ ಅಲ್ಲಿನ ಊಟ ಇಷ್ಟ ಆಯ್ತು, ಸಮಸ್ಯೆ ಆಗಲಿಲ್ಲ; ನಟ ಚೇತನ್ ಅಹಿಂಸಾ ಮಾತು

Written by Soma Shekar

Published on:

---Join Our Channel---

Actor Chethan: ಸ್ಯಾಂಡಲ್ ವುಡ್ ನಟ ದರ್ಶನ್ (Darshan) ಅವರು ಕೊ ಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿ ಸಾಕಷ್ಟು ದಿನಗಳು ಕಳೆದಿದೆ. ಈ ನಡುವೆ ಜೈಲಿನಲ್ಲಿ ನೀಡುವ ಊಟ ಅವರಿಗೆ ಸಮಸ್ಯೆಯಾಗಿದ್ದು, ಮನೆ ಊಟ ಬೇಕು ಎಂದು ಕೋರ್ಟಿಗೆ ಮನವಿಯನ್ನ ಸಲ್ಲಿಸಿದ್ದಾರೆ. ಇವೆಲ್ಲವುಗಳ ನಡುವೆ ಆ ದಿನಗಳು ಖ್ಯಾತಿಯ ನಟ ಚೇತನ್ (Actor Chethan) ಜೈಲೂಟದ ಕುರಿತಾಗಿ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಈ ವಿಷಯ ಸುದ್ದಿಯಾಗಿದೆ.

ಚೇತನ್ ಅವರು ನಾನು ಜೈಲಿನಲ್ಲಿದ್ದಾಗ ಯಾವುದೇ ಸಮಸ್ಯೆ ಆಗಲಿಲ್ಲ. ಊಟದ ಸಮಸ್ಯೆ ಕೂಡಾ ಆಗಲಿಲ್ಲ. ಜೈಲಿನ ಊಟ ನನಗೆ ಇಷ್ಟ ಆಗಿತ್ತು ಎಂದು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಅವರು ಈ ರೀತಿ ಏಕೆ ಹೇಳಿದರು ಅನ್ನೋದನ್ನ ಅವರು ಹೇಳಿಕೊಂಡಿಲ್ಲ. ಹಾಗಂತ ಅವರು ಈ ವಿಷಯವನ್ನ ದರ್ಶನ್ ಬಗ್ಗೆ ಮಾಡಿ ಹೇಳಿದ್ದಾರೆ ಅಂತ ಹೇಳೋದಕ್ಕೂ ಸಾಧ್ಯವಾಗುವುದಿಲ್ಲ.

ರೇಣುಕಾ ಸ್ವಾಮಿ ಕೊ ಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರು ಇನ್ನು ನ್ಯಾಯಾಂಗ ಬಂಧನದಲ್ಲೇ ಇದ್ದಾರೆ. ಇದೇ ವೇಳೆ ಅವರಿಗೆ ಜೈಲೂಟ ಸಮಸ್ಯೆಯಾಗಿದ್ದು, ಮನೆಯ ಊಟ ನೀಡಿ ಎಂದು ಕೋರ್ಟ್ ಮೊರೆ ಹೋಗಿದ್ದಾರೆ. ಆದ್ದರಿಂದಲೇ ಚೇತನ್ ಅವರು ಜೈಲಿನ ಊಟದ ಬಗ್ಗೆ ಬರೆದು ಕೊಂಡಿರಬಹುದು ಎಂದ ಕೆಲವರು ಹೇಳುತ್ತಿದ್ದಾರೆ.

ಚೇತನ್ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದು ಅವರು ಹತ್ತು ಹಲವು ವಿಚಾರಗಳ ಕುರಿತಾಗಿ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಬಹಳ ಮುಕ್ತವಾಗಿ ಹಂಚಿಕೊಳ್ಳುವ ಮೂಲಕ ಪರ ಮತ್ತು ವಿರೋಧ ಮಾತುಗಳನ್ನು ಎದುರಿಸುತ್ತಲೇ ಇರುತ್ತಾರೆ. ಪ್ರಸ್ತುತ ಅವರು ಜೈಲೂಟದ ಬಗ್ಗೆ ನೀಡಿದ ಹೇಳಿಕೆ ಎಲ್ಲರ ಗಮನ ಸೆಳೆದಿದೆ. ‌

Sathya Serial: ಶೀಘ್ರದಲ್ಲೇ ಮುಗೀತಿದೆ ಸತ್ಯ ಸೀರಿಯಲ್; ಅಣ್ಣಯ್ಯನ ಆಗಮನಕ್ಕೆ ಸತ್ಯ ಅಂತ್ಯ?

Leave a Comment