Amruthadhaare: ಪ್ಲಾನ್ ನಲ್ಲಿ ಶಕುಂತಲಾ ಸಕ್ಸಸ್, ಅಪ್ಪಿ ಬದುಕಲ್ಲಿ ಭೂಮಿಕಾ ವಿಲನ್, ಶಕುಂತಲಾ ದೇವತೆ

Written by Soma Shekar

Published on:

---Join Our Channel---

Amruthadhaare: ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿ ಹೊಸ ಟ್ವಿಸ್ಟ್ ಕಥೆಯಲ್ಲಿ ಇನ್ನಷ್ಟು ರೋಚಕತೆಯನ್ನ ಮೂಡಿಸೋ ಹಾಗಿದೆ‌. ಭೂಮಿಕಾ ಮುಂದೆ ಪದೇ ಪದೇ ಸೋಲ್ತಾ ಇದ್ದ ಶಕುಂತಲಾ ದೇವಿ ಮಾಡಿದ ಪ್ಲಾನ್ ಈಗ ಕೊನೆಗೂ ಫಲ ಕೊಡೋ ಹಂತಕ್ಕೆ ಬಂದು ತಲುಪಿದೆ. ಶಕುಂತಲಾ ಪ್ಲಾನ್ ನಿಂದಾಗಿ ಈಗ ಭೂಮಿಕಾ ತನ್ನ ತಂಗಿಯ ಮುಂದೆ ವಿಲನ್ ಆಗೋಗ್ತಾಳಾ ಅನ್ನೋ ಹೊಸ ಪ್ರಶ್ನೆ ವೀಕ್ಷಕರನ್ನ ಕಾಡಿದೆ.

ಅಪೇಕ್ಷಾ ಮತ್ತು ಪಾರ್ಥನ ಪ್ರೀತಿ ಬಗ್ಗೆ ತಿಳ್ಕೊಂಡು ಶಕುಂತಲಾ ದೇವಿ ಭೂಮಿಕಾ (Bhumika) ಮುಂದೆ ಎಮೋಷನಲ್ ಡ್ರಾಮಾ ಮಾಡಿ, ಪಾರ್ಥನಿಂದ ಅಪೇಕ್ಷಾನ ದೂರ ಇಟ್ಟು, ಮಗನಿಗೆ ತನ್ನಿಷ್ಟದ ಹುಡುಗಿಯನ್ನ ಮದುವೆ ಮಾಡೋಕೆ ಆಗೋತರ ಭೂಮಿಕಾ ಹತ್ರ ಮಾತನ್ನ ತಗೊಂಡಿದ್ಲು ಶಕುಂತಲಾ ದೇವಿ‌. ಆದ್ರೆ ಶಕುಂತಲಾ ದೇವಿ ಇಲ್ಲಿ ಬೇರೆ ಆಟವನ್ನೇ ಆಡಿದ್ದಾಳೆ.

ಪಾರ್ಥ (Partha) ಒಬ್ಬ ಹುಡುಗಿನಾ ನೋಡಿದ್ದಾಯ್ತು, ಆ ಹುಡುಗಿ ಪಾರ್ಥನ್ನ ಒಪ್ಪಿದಾಯ್ತು. ಮತ್ತೊಂದು ಕಡೆ ಅಪೇಕ್ಷಾ ಅಕ್ಕನ ಹತ್ರ ಪ್ರೀತಿ ವಿಷಯ ಹೇಳಿ ಬೈಸಿಕೊಂಡಿದ್ದೂ ಆಯ್ತು. ನಂತ್ರ ಪಾರ್ಥ ಅವರ ಅಮ್ಮನ ಬಳಿ ಬಂದು ತನ್ನ ಪ್ರೀತಿ ವಿಚಾರ ಹೇಳ್ಕೊಂಡು ಅಪೇಕ್ಷಾ ಜೊತೆ ಮದುವೆ ಮಾಡಿಸು ಅಂತ ಕಣ್ಣೀರು ಹಾಕಿದ್ದಾನೆ.

ಮಗ ಕೊನೆಗೂ ತನ್ನ ಕಂಟ್ರೋಲ್ ಗೆ ಬಂದ ಅನ್ನೋ ಖುಷೀಲಿ ಶಕುಂತಲಾ ದೇವಿ ತಾನೇ ಭೂಮಿಕಾ ಮನೆಗೆ ಹೋಗಿ ಅಪೇಕ್ಷಾ ಮದುವೆ ವಿಚಾರ ಮಾತಾಡ್ತೀನಿ ಅಂತ ಮಗನಿಗೆ ಮಾತು ಕೊಟ್ಟಿದ್ದಾಳೆ. ಇದ್ರಿಂದ ಪಾರ್ಥ ಮತ್ತು ಅಪ್ಪಿ ಪಾಲಿಗೆ ಇನ್ಮುಂದೆ ಶಕುಂತಲಾ ದೇವಿ ದೇವತೆ ಆದ್ರೂ ಅಚ್ಚರಿ ಇಲ್ಲ.

ಭೂಮಿಕಾಗೆ ಅಪೇಕ್ಷಾ ಓರಗಿತ್ತಿ ಆಗೋದು ಪಕ್ಕಾ ಆಗಿದೆ. ತನ್ನ ಪ್ರೀತಿಗೆ ಸಪೋರ್ಟ್ ಮಾಡೋದಿಲ್ಲ ಅಂತ ಹೇಳಿದ ಸ್ವಂತ ಅಕ್ಕನ್ನ ಅಪೇಕ್ಷಾ ತನ್ನ ಲೈಫ್ ನ ವಿಲನ್ ಅಂತ ನೋಡ್ತಾಳಾ? ಕಾದು ನೋಡಬೇಕಾಗಿದೆ. ಆದರೆ ಪ್ರೊಮೋ ನೋಡಿದ ಕೆಲವರು ಕಥೆ ಈ ತರ ಆದ್ರೆ ಸೀರಿಯಲ್ ಹಳ್ಳ ಹಿಡಿಯೋದು ಗ್ಯಾರಂಟಿ ಅಂತ ಕಾಮೆಂಟ್ ಮಾಡಿದ್ದಾರೆ.

Bigg Boss: ಬಿಗ್ ಬಾಸ್ ಮನೇಲಿರೋ ಪತಿಗೆ ಡಿವೋರ್ಸ್; ಇಬ್ಬರು ಹೆಂಡಿರ ಮುದ್ದಿನ ಗಂಡನ ಪರದಾಟ

Leave a Comment