Shravani Subramanya: ಸುಬ್ಬು ಫ್ಯಾಮಿಲಿಗೆ ಅವಮಾನ, ಕಾಂತಮ್ಮ ಸುಂದರನ ದುರಾಸೆಗೆ ಮಾನ ಹೋಗೋ ಪರಿಸ್ಥಿತಿ

Written by Soma Shekar

Published on:

---Join Our Channel---

Shravani Subramanya: ಸುಬ್ಬು (Shravani Subramanya) ಜನ್ಮದಿನಕ್ಕೆ ಅವನಿಗೆ ಸರ್ಪ್ರೈಸ್ ನೀಡಬೇಕು ಅನ್ನೋದು ವೀರೇಂದ್ರ ಮತ್ತು ಶ್ರಾವಣಿಯ ಪ್ಲಾನ್ ಆಗಿದೆ. ಅದಕ್ಕೆ ಅವರು ಎಲ್ಲಾ ತಯಾರಿಗಳನ್ನ ಮಾಡಿಕೊಂಡಿದ್ದಾರೆ. ಇದೇ ವೇಳೆ ವೀರು ಮಾಡ್ತಿರೋ ಸಿದ್ಧತೆಗಳೆಲ್ಲಾ ತನ್ನ ಮಗನ ಗೆಲುವನ್ನ ಸೆಲೆಬ್ರೇಟ್ ಮಾಡೋಕೆ ಅಂತ ಅನ್ಕೊಂಡಿದ್ದ ವಿಜಯಾಂಬಿಕಾಗೆ ಅದೆಲ್ಲಾ ಸುಬ್ಬು ಬರ್ತಡೇಗೆ ಮಾಡ್ತಿರೋದು ಅಂತ ಗೊತ್ತಾಗಿ ಅಸೂಯೆ ಕಿಚ್ಚು ಉರೀತಾ ಇದೆ. ಅದಕ್ಕೆ ಸುಬ್ಬು ಮನೆಯವ್ರಿಗೆ ಅವಮಾನ ಮಾಡೋಕೆ ಪ್ರತಿ ಅವಕಾಶವನ್ನ ಬಳಸಿಕೊಳ್ತಿದ್ದಾಳೆ.

ಇದೇ ವೇಳೇ ವೀರು ಆಹ್ವಾನದ ಮೇರೆ ಸುಬ್ಬು ಅವರ ಮನೆಯವರೆಲ್ಲಾ ವೀರೇಂದ್ರ (Veerendra) ಅವರ ಮನೆಗೆ ಬಂದಿದ್ದಾರೆ. ಈ ವೇಳೆ ಕಾಂತಮ್ಮ ಮತ್ತು ಸುಂದರ ಇಬ್ಬರೂ ಮಿನಿಸ್ಟರ್ ಮನೆಯನ್ನ ನೋಡೋ ನೆಪದಲ್ಲಿ ಅಲ್ಲಿರೋ ವಸ್ತುಗಳನ್ನ ಕದಿಯೋದಕ್ಕೆ ಆರಂಭ ಮಾಡ್ತಾರೆ. ಕಾಂತಮ್ಮ ತನಗೆ ಕಂಡ ಬೆಲೆ ಬಾಳುವ ವಸ್ತುಗಳನ್ನು ಕದಿಯೋದಕ್ಕೆ ಮುಂದಾಗ್ತಾಳೆ.

ಇನ್ನು ವಿಜಯಾಂಬಿಕ ಎಸೆದ ಜ್ಯುವೆಲ್ಲರಿ ಬಾಕ್ಸ್ ನಲ್ಲಿದ್ದ ಚಿನ್ನದ ಸರ ಸುಂದರನ ಕೈಗೆ ಸಿಕ್ಕಿದೆ. ಕಾಂತಮ್ಮ ಸಹಾ ಅದನ್ನ ನೋಡಿದ್ದಾಳೆ. ಅದು ವೀರೇಂದ್ರ ಸುಬ್ಬುಗೆ (Subbu) ಜನ್ಮದಿನಕ್ಕೆ ಅಂತ ಕೊಡೋಕೆ ತಂದಿರೋ ಗಿಫ್ಟ್ ಆಗಿದೆ.‌ ಈಗ ಶ್ರಾವಣಿ ಕೂಡಾ ಅಪ್ಪ ಹೇಳಿದ ಗಿಫ್ಟ್ ತರೋಕೆ ಹೋದವಳು ವಾಪಸ್ ಬಂದು ಮನೆಯಲ್ಲಿ ಅದು ಎಲ್ಲೂ ಸಿಕ್ತಲ್ಲ ಅಂತ ಹೇಳಿದ್ದಾಳೆ.

ವಿಜಯಾಂಬಿಕ ಅದನ್ನ ಕೂಡಾ ಸುಬ್ಬು ಫ್ಯಾಮಿಲಿ ಮೇಲೆ ಹಾಕೋಕೆ ಪ್ರಯತ್ನ ಮಾಡಿದ್ದಾಳೆ. ಮತ್ತೊಂದು ಕಡೆ ಸುಬ್ಬು ಹಿಂದೆ ರೌಡಿಗಳು ಬಿದ್ದಿದ್ದು ಅವ್ರಿಂದ ತಪ್ಪಿಸಿಕೊಳ್ಳೋಕೆ ಸುಬ್ಬು ಪ್ರಯತ್ನ ಮಾಡ್ತಾ ಇದ್ದಾನೆ. ಮನೇಲಿ ಎಲ್ಲರೂ ಸುಬ್ಬುವಿಗಾಗಿ ಕಾಯ್ತಾ ಇದ್ದಾರೆ. ಸುಬ್ಭು ಕ್ಷೇಮವಾಗಿ ಬರ್ತಾನಾ? ಕಾಂತಮ್ಮ ಸುಂದರ ಸುಬ್ಬು ಮನೆಯವ್ರ ಮಾನ ತೆಗೆದು ಬಿಡ್ತಾರಾ? ಕಾದು ನೋಡಬೇಕಾಗಿದೆ.

Varamahalakshmi Festival : ವರಮಹಾಲಕ್ಷ್ಮಿ ಹಬ್ಬದ ದಿನ ಈ ವಸ್ತುಗಳನ್ನು ಮನೆಗೆ ತನ್ನಿ, ಸುಖ ಸಮೃದ್ಧಿ ಪಡೆಯಿರಿ

Leave a Comment