Venu Swamy: ಇನ್ನು ಆರೇ ತಿಂಗಳಲ್ಲಿ ಡಿವೋರ್ಸ್: ಸ್ಟಾರ್ ನಟಿಯ ಬಗ್ಗೆ ವೇಣು ಸ್ವಾಮಿ ಶಾಕಿಂಗ್ ಭವಿಷ್ಯ, ಯಾರು ಆ ನಟಿ ?

Written by Soma Shekar

Published on:

---Join Our Channel---

Venu Swamy: ಜ್ಯೋತಿಷಿ ವೇಣು ಸ್ವಾಮಿ (Venu Swamy) ತೆಲುಗು ರಾಜ್ಯಗಳಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿರುವ ವ್ಯಕ್ತಿಯಾಗಿದ್ದಾರೆ. ಸೆಲೆಬ್ರಿಟಿಗಳ ಬಗ್ಗೆ ಭವಿಷ್ಯ ಹೇಳೋ ವೇಣು ಸ್ವಾಮಿ ಇತ್ತೀಚಿನ ದಿನಗಳಲ್ಲಿ ಟ್ರೋಲ್ ಆಗಿರೋದು ಸಹಾ ಸತ್ಯ. ಅಲ್ಲದೇ ಆಂಧ್ರದಲ್ಲಿ ವೇಣು ಸ್ವಾಮಿ ಚುನಾವಣೆ ಕುರಿತಾಗಿ ಹೇಳಿದ ಭವಿಷ್ಯವಾಣಿ ಪೂರ್ತಿಯಾಗಿ ಸುಳ್ಳಾದ ಕಾರಣ ಇನ್ಮುಂದೆ ತಾನು ರಾಜಕೀಯದ ಬಗ್ಗೆ ಭವಿಷ್ಯ ಹೇಳೋದಿಲ್ಲ ಎಂದು ವೇಣು ಸ್ವಾಮಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ರು.

ಈ ಹಿಂದೆ ವೇಣು ಸ್ವಾಮಿ ನಾಗಚೈತನ್ಯ ಮತ್ತು ಸಮಂತಾ (Samantha Nagachaitanya) ವಿಚ್ಚೇದನದ ಬಗ್ಗೆ ಹೇಳಿದ್ರು. ಅದು ನಿಜವಾದ ಬಳಿಕ ವೇಣುಸ್ವಾಮಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಆಗಾಗ ಸಿನಿಮಾ ಸೆಲೆಬ್ರಿಟಿಗಳ ಕುರಿತು ಭವಿಷ್ಯ ನುಡಿಯುವ ಇವರು ರಶ್ಮಿಕಾ ಮಂದಣ್ಣ (Rashmika) ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡಿಕೊಂಡಿದ್ದು ಸಹಾ ತನ್ನ ಮಾತಿನಿಂದಲೇ ಎಂದು ಸಹಾ ಹೇಳಿದ್ದರು.

ಈಗ ವೇಣು ಸ್ವಾಮಿ ಮತ್ತೊಮ್ಮೆ ತೆಲುಗಿನಲ್ಲಿ ಸ್ಟಾರ್ ನಟಿಯಾಗಿದ್ದು, ಈಗ ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೇ ಇರುವ ರಕುಲ್ ಪ್ರೀತ್ ಸಿಂಗ್ (Rakul Preet) ಅವರ ಕುರಿತಾಗಿ ಭವಿಷ್ಯ ನುಡಿಯುವ ಮೂಲಕ ಸುದ್ದಿಯಾಗಿದ್ದಾರೆ. ರಕುಲ್ ಕೆಲವೇ ದಿನಗಳ ಹಿಂದೆ ನಿರ್ಮಾಪಕ ಜಾಕಿ ಬಗ್ನಾನಿ ಜೊತೆಗೆ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿರುವ ವಿಚಾರ ತಿಳಿದೇ ಇದೆ.

ನಟಿಯು ಮದುವೆಯಾಗಿ ಕೆಲವೇ ದಿನಗಳು ಕಳೆಯುವ ಮೊದಲೇ ಅವರ ವಿಚ್ಚೇದನದ ಕುರಿತಾಗಿ ವೇಣು ಸ್ವಾಮಿ ಭವಿಷ್ಯವನ್ನು ನುಡಿದಿದ್ದಾರೆ. ರಕುಲ್ ಮದುವೆ ಆಗಬಾರದು ಅಂತ ನಾನು ಹೇಳಿದ್ದೆ. ಅಲ್ಲದೇ ನಾನು ಹೇಳಿದ ಹಾಗೇನೇ ಅವರ ಪತಿ ಸೋತಿದ್ದು, ಸುಮಾರು 500 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.‌ ಇನ್ನು ಆರು ತಿಂಗಳಲ್ಲಿ ಆಕೆ ವಿಚ್ಚೇದನ ಪಡೆಯುತ್ತಾರೆ.

ನಟಿಯು ವಿಚ್ಚೇದನ ಪಡೆಯೋದು ಖಚಿತ, ಈಗ ನನ್ನನ್ನ ಟ್ರೋಲ್ ಮಾಡುತ್ತಿರುವವರಿಗೆ ಆಗ ಮುಖಕ್ಕೆ ಹೊಡೆದಂತೆ ಆಗುತ್ತದೆ. ನಾನು ಟ್ರೋಲ್ ಗಳ ಬಗ್ಗೆ ಅಷ್ಟಾಗಿ ಗಮನ ಕೊಡೋದಿಲ್ಲ. ನಾನು ಹೇಳಿರುವ ಭವಿಷ್ಯದಲ್ಲಿ 90% ನಿಜವಾಗಿದೆ, ಕೇವಲ 10% ಮಾತ್ರವೇ ಸುಳ್ಳಾಗಿದೆ ಎಂದು ಸಹಾ ವೇಣು ಸ್ವಾಮಿ ಹೇಳಿದ್ದು, ಸದ್ಯಕ್ಕೆ ರಕುಲ್ ವಿಚ್ಚೇದನದ ಭವಿಷ್ಯ ಏನಾಗುತ್ತೆ ಕಾದು ನೋಡಬೇಕಾಗಿದೆ.

Sonu Sood: ವ್ಯಾಪಾರಿ ಉಗುಳಿನ ಘಟನೆಯನ್ನ ರಾಮ ಶಬರಿಗೆ ಹೋಲಿಸಿದ ಸೋನು ಸೂದ್; ನೀವೇ ತಿನ್ನಿ ಎಂದ ನೆಟ್ಟಿಗರು

Leave a Comment