Venu Swamy : ಇವರ ಬಾಳು 3 ವರ್ಷ ಅಷ್ಟೇ, ನಾಗಚೈತನ್ಯ ಶೋಭಿತಾ ಎಂಗೇಜ್ಮೆಂಟ್ ಬೆನ್ನಲ್ಲೇ ವೇಣುಸ್ವಾಮಿ ಶಾಕಿಂಗ್ ಭವಿಷ್ಯ

Written by Soma Shekar

Published on:

---Join Our Channel---

Venu Swamy: ಟಾಲಿವುಡ್ ಯುವ ಸ್ಟಾರ್ ನಟ ನಾಗ ಚೈತನ್ಯ (Nagachaitanya) ಹಾಗೂ ಶೋಭಿತಾ ಧೂಳಿಪಾಲ (Shobhita Dhulipala) ಅವರ ನಿಶ್ಚಿತಾರ್ಥ ಬಹಳ ಸಂಭ್ರಮದಿಂದ ನೆರವೇರಿದೆ. ನಾಗಾರ್ಜುನ (Nagarjuna) ಅವರ ಮನೆಯಲ್ಲಿ ಖುಷಿಯ ವಾತಾವರಣ ಕಂಡಿದೆ.‌ ನಾಗಚೈತನ್ಯ ಎರಡನೇ ಮದುವೆಗೆ ಸಿದ್ಧವಾಗಿರುವಾಗಲೇ ಈ ಹಿಂದೆ ಸಮಂತಾ ನಾಗಚೈತನ್ಯ ವಿಚ್ಚೇದನ ಪಡೀತಾರೆ ಅಂತ ಹೇಳಿ, ಅದು ನಿಜವಾಗಿದ್ದರಿಂದ ಸಖತ್ ಜನಪ್ರಿಯತೆ ಪಡೆದಿದ್ದ ಜ್ಯೋತಿಷಿ ವೇಣು ಸ್ವಾಮಿ ಈಗ ಮತ್ತೆ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.

ವೇಣು ಸ್ವಾಮಿಯ ಭವಿಷ್ಯ ಈಗ ಚೈತನ್ಯ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನಾಗ ಚೈತನ್ಯ ಹಾಗೂ ಶೋಭಿತ ಅವರಿಗೆ ನಿಶ್ಚಿತಾರ್ಥ ನಡೆದ ಸಮಯ ಸರಿಯಾಗಿಲ್ಲ ಎಂದಿರುವ ವೇಣು ಸ್ವಾಮಿ ಅಷ್ಟಕ್ಕೇ ಸುಮ್ಮನಾಗದೇ ನಾಗ ಚೈನ್ಯ ಹಾಗೂ ಶೋಭಿತಾ 2027ರಲ್ಲಿ ಬೇರೆಯಾಗಲಿದ್ದಾರೆ ಎಂದು ಹೇಳಿ ಶಾಕ್ ನೀಡಿದ್ದು, ಅವರ ಮಾತೀಗ ಭಾರೀ ಆಕ್ರೋಶಕ್ಕೆ ಕಾರಣಾಗಿದೆ. 

ವೇಣು ಸ್ವಾಮಿ (Venu Swamy) ಮಾಡಿದಂತಹ ವಿಡಿಯೋ ವೈರಲ್ ಆಗಿದ್ದು, ಅದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲ ಮದುವೆ, ವಿಚ್ಚೇದನ ಎಲ್ಲವುಗಳ ನಂತರ ನಾಗ ಚೈತನ್ಯ ಹೊಸ ಬಾಳನ್ನು ಆರಂಭಿಸಲು ಹೊರಟಿದ್ದಾರೆ. ಅಂತಹ ಸಂದರ್ಭದಲ್ಲಿ ಈ ರೀತಿ ಅಪಶಕುನ ನುಡಿಯುವುದು ಸರಿಯಲ್ಲ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

ನಾಗಚೈತನ್ಯ ಮತ್ತು ಶೋಭಿತಾ ಚೆನ್ನಾಗಿಯೇ ಸಂಸಾರವನ್ನು ನಡೆಸುತ್ತಾರೆ. ಇದರ ಬಗ್ಗೆ ಅನುಮಾನವೇ ಬೇಡ, ನಮ್ಮ ಹೀರೋ ಕುರಿತಾಗಿ ಹೀಗೆಲ್ಲಾ ಮಾತನಾಡಬೇಡಿ ಎಂದಿದ್ದಾರೆ ಅಭಿಮಾನಿಗಳು. ಈ ರೀತಿ ಸುಳ್ಳು ಭವಿಷ್ಯ ನುಡಿದು ಸಮಾಜದಲ್ಲಿ ಆತಂಕ ಸೃಷ್ಟಿಸುವ ಇಂತಹ ಜ್ಯೋತಿಷಿ ವಿರುದ್ಧ ಕ್ರಮ ಜರುಗಿಸಬೇಕೆಂದು ಅನೇಕರು ಆಗ್ರಹಿಸಿದ್ದಾರೆ.

Crime News : ವಿದ್ಯಾರ್ಥಿ ಜೊತೆ ಶಿಕ್ಷಕಿ ಕಾಮದಾಟ, ಅ ತ್ಯಾ ಚಾರ; ಕೊನೆಗೆ ಯುವಕನಿಗೆ ಆಗಿದ್ದೇ‌ನು?


Leave a Comment