Telugu Cinema: ಬಾಲಯ್ಯನ ಬ್ಲಾಕ್ ಬಸ್ಟರ್ ಸಿನಿಮಾ ಆಫರ್ ಅನ್ನೇ ರಿಜೆಕ್ಟ್ ಮಾಡಿದ್ರು ಟಾಲಿವುಡ್ ಸ್ಟಾರ್ ನಟಿಯರು

Written by Soma Shekar

Published on:

---Join Our Channel---

Telugu Cinema: ತೆಲುಗು ಸಿನಿಮಾ (Telugu Cinema) ರಂಗದಲ್ಲಿ ಸ್ಟಾರ್ ನಟರ ಸಾಲಿನಲ್ಲಿ ಹಿರಿಯ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ಸಹಾ ಇದ್ದಾರೆ. ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ ಮತ್ತು ವೆಂಕಟೇಶ್ ಈ ನಾಲ್ವರು ಕೂಡಾ ಎರಡು ದಶಕಗಳಿಗೂ ಅಧಿಕ ಸಮಯ ತೆಲುಗು ಸಿನಿಮಾ ರಂಗವನ್ನು ಆಳಿದ ನಾಯಕ ನಟರು. ಇಂತಹ ನಟರಿಗೆ ನಾಯಕಿಯರಾಗುವುದು ನಟಿಯರ ವೃತ್ತಿ ಜೀವನವನ್ನೇ ಬದಲಿಸುತ್ತದೆ ಅನ್ನೋದು ಖಚಿತ.

ಆದರೆ ನಂದಮೂರಿ ಬಾಲಕೃಷ್ಣ ಅವರು ಭರ್ಜರಿ ಕಮ್ ಬ್ಯಾಕ್ ಮಾಡಿದ ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಇಬ್ಬರು ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ದರು ಎಂದರೆ ಅದು ಅಚ್ಚರಿಯೆನಿಸಿದರೂ ಸಹಾ ಸತ್ಯ. ಹೌದು, ನಂದಮೂರಿ ಬಾಲಕೃಷ್ಣ ಅವರ ಸೂಪರ್ ಹಿಟ್ ಸಿನಿಮಾ‌ ಅಖಂಡ (Akhanda) ಆಫರ್ ಅನ್ನು ರಿಜೆಕ್ಟ್ ಮಾಡಿದ್ದರು ಇಬ್ಬರು ನಟಿಯರು.

ಅಖಂಡ ಸಿನಿಮಾಕ್ಕಾಗಿ ನಟಿ ರಕುಲ್ ಪ್ರೀತ್ (Rakul Preet) ಅವರಿಗೆ ನಾಯಕಿಯ ಆಫರ್ ನೀಡಲಾಗಿತ್ತು. ಆದರೆ ನಟಿ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಿದ್ದ ಕಾರಣ ಆಫರ್ ಅನ್ನು ರಿಜೆಕ್ಟ್ ಮಾಡಿದ್ದರು. ನಂತರ ನಟಿ ಕಾಜಲ್ ಅಗರ್ವಾಲ್ (Kajal Aggarwal) ಗೆ ನಾಯಕಿಯ ಆಫರ್ ದಕ್ಕಿತು. ಆದರೆ ಈ ನಟಿ ವೈಯಕ್ತಿಕ ಕಾರಣಗಳಿಂದ ಸಿನಿಮಾಗೆ ನೋ ಹೇಳಿದರು.

ನಂತರ ಈ ಸಿನಿಮಾದಲ್ಲಿ ಪ್ರಗ್ಯಾ ಜೈಸ್ವಾಲ್ ನಾಯಕಿಯಾಗಿ ಕಾಣಿಸಿಕೊಂಡರು. ಸಿನಿಮಾ ಬ್ಲಾಕ್ ಬಸ್ಟರ್ ಆದರೂ ಈ ಸಿನಿಮಾದ ನಂತರ ಪ್ರಗ್ಯಾಗೆ ಹೇಳಿಕೊಳ್ಳವಂತಹ ಅವಕಾಶಗಳು ಸಿಗಲಿಲ್ಲ. ನಟಿ ಟಾಲಿವುಡ್ ನಿಂದ ದೂರವೇ ಆದರು. ರಕುಲ್ ಅಥವಾ ಕಾಜಲ್ ಈ ಸಿನಿಮಾ ಮಾಡಿದ್ದರೆ ಖಂಡಿತ ಅವರ ಕೆರಿಯರ್ ಗೆ ಇನ್ನಷ್ಟು ಬಲವನ್ನು ನೀಡುತ್ತಿತ್ತು.

Kangana Ranaut: ಶಾರೂಖ್ ಗೆ ನಾಯಕಿ ಆಗೋ ಚಾನ್ಸ್ ಬೇಡ ಅಂತ ಸಿನಿಮಾ ರಿಜೆಕ್ಟ್ ಮಾಡಿದ ಕಂಗನಾ, ಶಾಕ್ ಆದ ಫ್ಯಾನ್ಸ್

Leave a Comment