Thalapathy 69: ಕಥೆ ಕೇಳಿದ್ದು ಕಮಲ ಹಾಸನ್, ಹೀರೋ ಆಗಿದ್ದು ದಳಪತಿ ವಿಜಯ್; ಕಮಲ್ ರಿಜೆಕ್ಟ್ ಮಾಡಿದ್ದೇಕೆ?

Written by Soma Shekar

Published on:

---Join Our Channel---

Thalapathy 69: ತಮಿಳು ನಟ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ದಳಪತಿ 69 (Thalapathy 69) ಕಡೆಗೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಇದೇ ವೇಳೆ ಈ ಸಿನಿಮಾಕ್ಕಾಗಿ ನಟ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟನೆಂಬ ಹೆಗ್ಗಳಿಕೆಗೆ ಸಹಾ ಪಾತ್ರರಾಗಿದ್ದಾರೆ. ಇವೆಲ್ಲವುಗಳ ನಡುವೆ ಈಗ ಹೊಸದೊಂದು ವಿಷಯ ಹೊರ ಬಂದಿದೆ.

ಹೌದು, ಈಗ ನಟ ನಟಿಸಲು ಗ್ರೀನ್ ಸಿಗ್ನಲ್ ನೀಡಿರುವ ಸಿನಿಮಾದ ಕಥೆ ವಿಜಯ್ (Thalapathy Vijay) ಅವರಿಗಿಂತ ಮೊದಲು ಬೇರೆ ಬೇರೆ ಸ್ಟಾರ್ ನಟರ ಬಳಿಗೂ ಹೋಗಿತ್ತು ಎನ್ನಲಾಗಿದೆ. ಅಲ್ಲದೇ ಸ್ಟಾರ್ ನಟರು ವೈಯಕ್ತಿಕ ಕಾರಣಗಳಿಂದ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿಲ್ಲ ಎನ್ನುವ ಶಾಕಿಂಗ್ ಸತ್ಯ ಹೊರಗೆ ಬಂದಿದೆ.

ದಳಪತಿ 69 ಗೆ ವಿಜಯ್ ಆಯ್ಕೆಗೆ ಮೊದಲು ಈ ಕಥೆಯನ್ನು ನಟ ಕಮಲ ಹಾಸನ್ (Kamal Haasan) ಸೇರಿದಂತೆ ಒಂದಷ್ಟು ಜ‌ನ ಸ್ಟಾರ್ ನಟರಿಗೂ ಹೇಳಲಾಗಿತ್ತು. ಆದರೆ ಅವರು ಒಪ್ಪಿಕೊಳ್ಳದ ಕಾರಣ ಕೊನೆಗೆ ಕಥೆ ವಿಜಯ್ ಅವರ ಬಳಿ ಬಂದಿದ್ದು, ನಟ ತಮ್ಮ ಕೊನೆಯ ಸಿನಿಮಾಕ್ಕೆ ಇದು ಸೂಕ್ತವಾದ ಕಾರಣ ಎನ್ನುವ ಕಾರಣಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.

ವಿನೋದ್ ನಿರ್ದೇಶನದಲ್ಲಿ ಮೂಡಿ ಬರಲಿರುವ ದಳಪತಿ 69 ಅನೌನ್ಸ್‌ಮೆಂಟ್ ಪೋಸ್ಟರ್ ಎಲ್ಲರ ಗಮನವನ್ನು ಸೆಳೆದಿದೆ. ಪ್ರಜಾಪ್ರಭುತ್ವದ ಜ್ಯೋತಿ ಹಿಡಿಯುವವನು ಶೀಘ್ರದಲ್ಲೇ ಬರುತ್ತಿದ್ದಾರೆ ಎನ್ನುವ ಪೋಸ್ಟರ್ ಎಲ್ಲರ ಗಮನವನ್ನು ಸೆಳೆದಿದೆ. ಈ ಸಿನಿಮಾದ ನಂತರ ನಟ ರಾಜಕಾರಣದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದ್ದಾರೆ.

Tirumala Tirupati: ಲಡ್ಡು ವಿವಾದದ ಬೆನ್ನಲ್ಲೇ ಮತ್ತೊಂದು ಸ್ಪೋಟಕ ಸತ್ಯ ಬಾಯ್ಬಿಟ್ಟ ತಿರುಮಲ ದೇಗುಲದ ಅರ್ಚಕರು

Leave a Comment