Entertainment

Darshan Fans: ಮಹಿಳೆಗೆ ಅಗೌರವ, ಕೆಟ್ಟ ಪದ ಬಳಕೆ, ಸಿಡಿದೆದ್ದ ಕಿಚ್ಚನ ಫ್ಯಾನ್ಸ್; ಕಿಡಿಗೇಡಿಯ ಪತ್ತೆಗೆ ಪ್ರಯತ್ನ

Darshan fans: ಸಾಮಾಜಿಕ ಜಾಲತಾಣಗಳಲ್ಲಿ ನಟ ದರ್ಶನ್ ಅವರ ಅಭಿಮಾನಿಗಳ (Darshan Fans) ವಿರುದ್ಧ ಬಹಳ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದ್ದು, ಈ ವಿಚಾರವಾಗಿ ಸಾಕಷ್ಟು ಅಭಿಪ್ರಾಯಗಳು ಹರಿದು ಬರುತ್ತಿವೆ. ಒಂದು ಹೆಣ್ಣಿನ ಬಗ್ಗೆ ಮಾಡಿದ ನಿಂದನೆಯ ಮಾತುಗಳನ್ನ ನೋಡಿದ ನೆಟ್ಟಿಗರು ದರ್ಶನ್ ಅವರ ಅಭಿಮಾನಿಗಳ ಬಗ್ಗೆ ತೀವ್ರವಾಗಿ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರ ಬಗ್ಗೆ ಬಳಸಿರುವ ಕೆಟ್ಟ ಪದಗಳನ್ನು ನೋಡಿ ಅನೇಕರು ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.

ಐಪಿಎಲ್ ಪಂದ್ಯಾವಳಿಗಳು ನಡೆಯುತ್ತಿರುವ ಪ್ರಸ್ತುತ ವೇಳೆಯಲ್ಲಿ ಆರ್ ಸಿ ಬಿ ಹೀನಾಯ ಸೋಲು ಗಳನ್ನು ಎದುರಿಸುತ್ತಿದ್ದು, ಇದಕ್ಕೆ ಕಾರಣ ಅಶ್ವಿನಿ ಪುನೀತ್ ರಾಜ್‍ಕುಮಾರ್ (Ashwini Puneet Rajkumar) ಎನ್ನುವುದಾಗಿ ಆರೋಪವನ್ನು ಮಾಡುತ್ತಾ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡವನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾನೆ..

ಪೋಸ್ಟ್ ನಲ್ಲಿ, ಶುಭ ಕಾರ್ಯಕ್ಕೆ ಮುತ್ತೈದೆಯರನ್ನು ಕರೀಬೇಕು. ಗಂಡ ಸತ್ತ ಮುಂ** ಯರನ್ನು ಕರೀಬಾರದು. ಆರ್‌ಸಿಬಿ ಅನ್‌ ಬಾಕ್ಸ್‌ ಈವೆಂಟ್ ಗೆ ಈ ಮುಂ**ಯನ್ನು ಕರೆದಿದ್ದಕ್ಕೆ ಎಲ್ಲ ಮ್ಯಾಚ್‌ ಸೋಲ್ತಾ ಇದ್ದಾರೆ ಅಂತ ನೀಚ ಪದಗಳನ್ನು ಬಳಸಿ ಗಜಪಡೆ ಅ‌ನ್ನೋ‌ ಹೆಸರಿನ ಒಂದು ಟ್ವಿಟ್ಟರ್‌ ಖಾತೆಯಿಂದ ಪೋಸ್ಟ್‌ ಮಾಡಲಾಗಿತ್ತು. ಈ ಪೋಸ್ಟ್‌ ಸ್ವಲ್ಪ ಸಮಯದಲ್ಲೇ ವೈರಲ್‌ ಆಗಿದ್ದು ಮಾತ್ರವೇ ಅಲ್ಲದೇ ದೊಡ್ಡ ಮಟ್ಟದಲ್ಲಿ ಟೀಕೆಗೆ ಕಾರಣವಾಗಿದೆ.‌

ಇನ್ನು ಈ ಪೋಸ್ಟ್ ವೈರಲ್ ಆಗಿ ಟೀಕೆಗಳು ಬಂದ ತಕ್ಷಣ ಗಜಪಡೆ ಅಂತ ಇದ್ದ ಅಕೌಂಟ್ ಹೆಸರು ಸುದೀಪ್ (Sudeep) ಅಭಿಮಾನಿ ಅಂತ ಬದಲಾಗಿದೆ. ಇದನ್ನು ಗಮನಿಸಿದ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಪೋಸ್ಟ್ ನಲ್ಲಿ ಆದ ಬದಲಾವಣೆಯನ್ನು ಎಲ್ಲಾ ಕಡೆ ಶೇರ್ ಮಾಡಿದ್ದು, ಹೀಗೆ ದರ್ಶನ್ ಅಭಿಮಾನಿ ಅಂತ ಹೇಳ್ಕೊಂಡು ಕೆಟ್ಟ ಪದ ಬಳಕೆ ಮಾಡಿದ್ದಕ್ಕೆ ಸರಿಯಾಗಿ ಉಗಿದಿದ್ದಾರೆ.‌

ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾದ ನಂತರ ಪೋಸ್ಟ್ ಹಾಕಿದ್ದವನು ತನ್ನ ಖಾತೆಯನ್ನು ಡಿಲೀಟ್ ಮಾಡಿದ್ದಾನೆ ಎನ್ನಲಾಗಿದ್ದು. ಈ ವಿಚಾರ ದರ್ಶನ್ ಅವರ ಗಮನಕ್ಕೂ ಬಂದಿದ್ದು, ಇದರ. ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಉತ್ತರವನ್ನು ನೀಡಬಾರದು ಎಂದು ಆಪ್ತರಿಗೆ ಸಲಹೆಯನ್ನು ನೀಡಿದ್ದಾರೆನ್ನಲಾಗಿದೆ. ಇದೇ ವೇಳೆ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಈ ವಿಚಾರವಾಗಿ ಪೋಲಿಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದಾರೆ.‌

Soma Shekar

Recent Posts

Lakshmi Nivasa: ಜಾನುಗಾಗಿ ಜಯಂತ್ ಮನೆಗೆ ಬಂದ ಅಪ್ಪ ಅಮ್ಮ; ಮತ್ತೆ ಯಾವ ಹೊಸ ಪ್ಲಾನ್ ಮಾಡ್ತಾನೇ ಜಯಂತ್

Lakshmi Nivasa Serial: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಲಕ್ಷ್ಮೀ ನಿವಾಸದಲ್ಲಿ (Lakshmi Nivasa Serial) ಇತ್ತೀಚಿನ ದಿನಗಳಲ್ಲಿ ಜಯಂತ್…

39 mins ago

Tirupati: ತಿರುಮಲಕ್ಕೆ ಹರಿದು ಬರ್ತಿದೆ ಭಕ್ತ ಸಾಗರ: ತಿರುಪತಿಗೆ ಹೋಗೋ ಪ್ಲಾನ್ ಇದ್ರೆ ಮೊದಲು ಈ ಸುದ್ದಿ ನೋಡಿ

Tirupati: ಬೇಸಿಗೆ ರಜೆ ಇನ್ನೇನು ಮುಗಿಯುವ ಹೊತ್ತಲ್ಲೇ ತಿರುಪತಿ (Tirupati) ತಿರುಮಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ. ತೆಲುಗು…

2 hours ago

Rave Party: ಬೆಂಗಳೂರಿನಲ್ಲಿ ರೇವ್ ಪಾರ್ಟಿ, ಸಿಕ್ಕಿ ಬಿದ್ದ ಟಾಲಿವುಡ್ ನ ಸಿನಿ, ಸೀರಿಯಲ್ ನಟಿಯರು

Rave Party: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ (Electronic City) ಜಿ ಆರ್ ಫಾರ್ಮ್ ಹೌಸ್ ನಲ್ಲಿ ನಡೆಯುತ್ತಿದ್ದಂತಹ ರೇವ್ ಪಾರ್ಟಿಯ…

3 hours ago

Namratha Gowda: ಕೆಂಪು ಗುಲಾಬಿಯ ಹಾಗೆ ಕಂಡ ನಮ್ರತಾ; ಹೊಸ ಲುಕ್ ಗೆ ಜನರು ಫಿದಾ

Namratha Gowda: ಕಿರುತೆರೆಯ ನಟಿ, ನಾಗಿಣಿ ಸೀರಿಯಲ್ ಖ್ಯಾತಿಯ ನಮ್ರತಾ ಗೌಡ (Nanratha Gowda) ಅವರು ಬಿಗ್ ಬಾಸ್ ಕನ್ನಡ…

4 hours ago

Cannes 2024: ಗೋಲ್ಡನ್ ಆಸ್ಕರ್ ನಂತೆ ಕಂಡ ಶೋಭಿತಾ, ಅಂದದ ಪ್ರವಾಹ ಇದು ಎಂದ ಫ್ಯಾನ್ಸ್

Cannes 2024 : ಕಾನ್ ಸಿನಿಮೋತ್ಸವಕ್ಕೆ (Cannes 2024) ಅದರದ್ದೇ ಆದ ಒಂದು ವಿಶೇಷತೆ ಇದೆ. ಈ ಸಿನಿಮಾ ಉತ್ಸವದ…

20 hours ago

Pavithra Jayaram: ಚಂದು ಪವಿತ್ರಾ ಬಗ್ಗೆ ಹೊರ ಬಂದ ಸುದ್ದಿಗಳು, ಚಂದು ಸಾವಿನ ಬೆನ್ನಲ್ಲೇ ಪವಿತ್ರಾ ಅವರ ಪುತ್ರನ ಸ್ಪಷ್ಟನೆ

Pavithra Jayaram: ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಹೆಸರನ್ನು ಮಾಡಿದ್ದ ನಟಿ ಪವಿತ್ರಾ ಜಯರಾಂ (Pavithra Jayaram) ಅವರು ಕೆಲವೇ…

21 hours ago

This website uses cookies.