Actress Kasthuri: ಮೊದಲೇ ಗೊತ್ತಿರಲಿಲ್ವಾ, ನೀಚ ಕಾರಣ ಕೊಟ್ಟು ಸಿನಿಮಾಕ್ಕೆ ಬೇಡ ಅಂದ್ರು; ಕಸ್ತೂರಿ ಆವೇಶ

Written by Soma Shekar

Published on:

---Join Our Channel---

Actress Kasthuri: ಮಲೆಯಾಳಂ ಸಿನಿಮಾ ರಂಗದ ಕರಾಳ ಮುಖವನ್ನು ಹೇಮ ಸಮಿತಿ ವರದಿ ಬಹಿರಂಗ ಮಾಡಿದ ಮೇಲೆ ಹಲವು ನಟಿಯರು ತಮ್ಮ ಮೇಲೆ ನಡೆದಿದ್ದ ದೌರ್ಜನ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ತೊಂಬತ್ತರ ದಶಕದ ಬಹುಬೇಡಿಕೆಯ ನಟಿಯಾಗಿದ್ದ ಕಸ್ತೂರಿ (Actress Kasthuri) ಅವರು ಸಹಾ ಮಾತನಾಡಿದ್ದು, ತನಗಾದ ಕಹಿ ಅನುಭವವನ್ನು ವಿವರಿಸಿ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನಟಿ, ಅದು ನನ್ನ ಎರಡನೇ ಸಿನಿಮಾ, ಆ ಸಿನಿಮಾದ ನಿರ್ದಶಕ ನನ್ನೊಂದಿಗೆ ಅನುಚಿತವಾಗಿ  ಮಾತನಾಡಿದ್ದು ಮಾತ್ರವಲ್ಲದೇ ಅಡ್ಜೆಸ್ಟ್ಮೆಂಟ್  ಮಾಡಿಕೊಳ್ಳುವಂತೆ ಕೇಳಿದರು. ಆದರೆ ನಾನು ಅದಕ್ಕೆ ಒಪ್ಪಿಕೊಳ್ಳದ ಕಾರಣ ಸಿನಿಮಾದ ಮೊದಲ ಹಂತದ ಚಿತ್ರೀಕರಣವೇ ಮುಗಿದು ಹೋಗಿದ್ದರೂ ಸಹಾ ನನ್ನನ್ನ ಆ ಸಿನಿಮಾದಿಂದ ಕೈ ಬಿಟ್ಟರೆನ್ನುವ ಆರೋಪ ಮಾಡಿದ್ದಾರೆ. 

ಸಿನಿಮಾ ಒಪ್ಪಿಕೊಂಡಾಗ,ಆಡಿಷನ್ ತೆಗೆದುಕೊಂಡಾಗಲೇ ನಟಿಯ ದೇಹದ ಪಾತ್ರಕ್ಕೆ ಸೂಟ್ ಆಗುತ್ತೋ ಇಲ್ವೋ ಎನ್ನುವ ಬಗ್ಗೆ ಗಮನ ನೀಡಿರುತ್ತಾರೆ. ಆದರೆ ಮೊದಲ ಹಂತದ ಶೂಟಿಂಗ್ ಮುಗಿಸಿದ ನಂತರ ನಾನು ತೆಳ್ಳಗಿದ್ದೇನೆ ಅಂತ ಸಿನಿಮಾದಿಂದ ತೆಗೆದರು. ಅವರಿಗೆ ಮೊದಲೇ ನಾನು ತೆಳ್ಳಗಿರುವುದು ಕಾಣಿಸಿರಲಿಲ್ಲವೇ? ಎಂದಿದ್ದಾರೆ ಕಸ್ತೂರಿ.

ನನಗೆ ನಟನೆ, ಡ್ಯಾನ್ಸ್ ಬರಲ್ಲ ಅನ್ನೋ ಕಾರಣ ಕೊಟ್ಟಿದ್ರೆ ಬೇಸರ ಆಗ್ತಿರಲಿಲ್ಲ. ಆದ್ರೆ ನೀಚ ಕಾರಣ ಕೊಟ್ಟಿದ್ದು ಬೇಸರವಾಯಿತು. ನಮ್ಮದು ಶ್ರೀಮಂತ ಕುಟುಂಬ, ತಾಯಿ ವಕೀಲರು ಅದಕ್ಕೆ ಸಮಸ್ಯೆ ಆಗಲಿಲ್ಲ. ಆದರೆ ಬಡ ಕುಟುಂಬಗಳಿಂದ ಜೀವನ ಸಾಗಿಸಲು ಬರುವ ಮಹಿಳೆಯರು, ಹೆಣ್ಣು ಮಕ್ಕಳು ಏನು ಮಾಡಬೇಕು ಯೋಚಿಸಿ ಎಂದಿದ್ದಾರೆ ನಟಿ.‌

Thalapathy Vijay: ದಳಪತಿ ವಿಜಯ್ ಕೊನೆ ಸಿನಿಮಾಕ್ಕೆ ಬಂಡವಾಳ ಹೂಡ್ತಿದೆ ಕನ್ನಡದ ಈ ನಿರ್ಮಾಣ ಸಂಸ್ಥೆ

Leave a Comment