Darshan: ನಟ ದರ್ಶನ್ ಪ್ರಕರಣ, ಶಾಕಿಂಗ್ ಹೇಳಿಕೆ ನೀಡಿದ ಹಿರಿಯ ನಟ ಅನಂತ್ ನಾಗ್; ದರ್ಶನ್ ಬಗ್ಗೆ ನಟ ಹೇಳಿದ್ದೇನು?

Written by Soma Shekar

Published on:

---Join Our Channel---

Darshan: ರೇಣುಕಾಸ್ವಾಮಿ ಕೊ ಲೆ (Renukaswamy Murder Case) ಪ್ರಕರಣದ ವಿಚಾರವಾಗಿ ಸ್ಯಾಂಡಲ್ವುಡ್ ನ ಸ್ಟಾರ್ ನಟ ದರ್ಶನ್ (Darshan) ಅವರು ನ್ಯಾಯಾಂಗ ಬಂಧನದಲ್ಲಿದ್ದು, ಈ ವಿಚಾರವಾಗಿ ಮೊದಲ ಬಾರಿಗೆ ಕನ್ನಡ ಸಿನಿಮಾ ರಂಗದ ಹಿರಿಯ ನಟ ಅನಂತ್ ನಾಗ್ (Anant Nag) ಅವರು ಮಾತನಾಡಿದ್ದಾರೆ. ದರ್ಶನ್ ಘಟನೆ ಸಮಾಜಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನುವ ಮಾತನ್ನು ಅವರು ಹೇಳಿದ್ದಾರೆ.

ನಟ ಅನಂತನಾಗ್ ಅವರು ಮಾತನಾಡುತ್ತಾ, ಈ ರೀತಿಯ ಘಟನೆಗಳು ಎಲ್ಲಾ ಕಡೆ ನಡೆಯುತ್ತಿವೆ ಎಂದು ಹೇಳಿದ್ದು, ಇದು ಸಮಾಜದ ಮೇಲೆ ಪರಿಣಾಮ ಬೀರುತ್ತೆ ಅನ್ನೋದನ್ನ ನಾನು ಒಪ್ಪೋದಿಲ್ಲ. ಇದಕ್ಕಿಂದ ಸಾವಿರ ಪಟ್ಟು ದೇಶ ದೇಶಗಳ‌ ನಡುವೆ ಮತ್ತು ರಾಜ್ಯ ರಾಜ್ಯಗಳ ನಡುವೆ ನಡೆಯುತ್ತಿದೆ ಎಂದಿದ್ದಾರೆ.

ದರ್ಶನ್ ಸುದ್ದಿಯಿಂದ ಹೆಚ್ಚು ಪಬ್ಲಿಸಿಟಿ ಸಿಗಬಹುದಷ್ಟೇ ಹೊರತು ಅದು ಸಮಾಜದ ಮೇಲೆ ಅದು ಪರಿಣಾಮ ಬೀರುವುದಿಲ್ಲವೆಂದು ಅನಂತ್ ನಾಗ್ ಅವರು ತಮ್ಮ ಅನಿಸಿಕೆ, ಅಭಿಪ್ರಾಯವನ್ನು ಶೇರ್ ಮಾಡಿಕೊಂಡಿದ್ದಾರೆ. ದರ್ಶನ್ ಅವರು ನ್ಯಾಯಾಂಗ ಬಂಧನಕ್ಕೊಳಗಾದ ನಂತರ ಬಹಳಷ್ಟು ಸೆಲೆಬ್ರಿಟಿಗಳು ತಮ್ಮ ಅಭಿಪ್ರಾಯ ಶೇರ್ ಮಾಡಿಕೊಂಡಿದ್ದಾರೆ.

ಈಗಾಗಲೇ ಕೆಲವು ಸೆಲೆಬ್ರಿಟಿಗಳ ಜೈಲಿಗೆ ಭೇಟಿ ನೀಡಿ ದರ್ಶನ್ ಅವರ ಯೋಗಕ್ಷೇಮ ವಿಚಾರಸಿದ್ದಾರೆ. ಈ ಪ್ರಕರಣದ ವಿಚಾರವಾಗಿ ಪ್ರತಿದಿನವೂ ಮಾದ್ಯಮಗಳಲ್ಲಿ ಅಪ್ಡೇಟ್ ಗಳು ಸುದ್ದಿಯಾಗುತ್ತಲೇ ಇದೆ. ನಟನ ನ್ಯಾಯಾಂಗ ಬಂಧನ ಮುಗಿದು ಅವರು ಹೊರ ಬರುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ.

Annayya Serial: ಪುಟ್ಟಕ್ಕನ ಮಕ್ಕಳು ಮುಗೀತಾ?? ನಂ. 1 ಸೀರಿಯಲ್ ಸಮಯಕ್ಕೆ ಇನ್ಮುಂದೆ ಅಣ್ಣಯ್ಯ ಬರ್ತಿದ್ದಾನೆ

Leave a Comment