Dhruva Sarja: ಕಾನೂನಿಗಿಂತ ಯಾರೂ ದೊಡ್ಡೋರಲ್ಲ; ದರ್ಶನ್ ಪ್ರಕರಣದ ಬಗ್ಗೆ ಧೃವ ಸರ್ಜಾ ಫಸ್ಟ್ ರಿಯಾಕ್ಷನ್

Written by Soma Shekar

Published on:

---Join Our Channel---

Dhruva Sarja: ರೇಣುಕಾಸ್ವಾಮಿ ಕೊ ಲೆ (Renukaswamy Murder Case) ಪ್ರಕರಣವಾಗಿ ಸ್ಯಾಂಡಲ್ವುಡ್ ನಟ ದರ್ಶನ್ (Darshan) ಅವರು ನ್ಯಾಯಾಂಗ ಬಂಧನದಲ್ಲಿ ಜೈಲು ಪಾಲಾಗಿದ್ದಾರೆ. ದರ್ಶನ್ ಅವರ ನ್ಯಾಯಾಂಗ ಬಂಧನವಾದಾಗಿನಿಂದಲೂ ಮಾದ್ಯಮಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಈ ವಿಚಾರವಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲೇ ಚರ್ಚೆಗಳು ನಡೆಯುತ್ತಲೇ ಇದೆ. ಪರ ವಿರೋಧ ಅಭಿಪ್ರಾಯ ಹರಿದು ಬರುತ್ತಿದೆ.

ಇನ್ನು ಈ ಪ್ರಕರಣದ ವಿಚಾರವಾಗಿ ಈಗಾಗಲೇ ಹಲವು ನಟ, ನಟಿಯರು ಸೋಶಿಯಲ್ ಮೀಡಿಯಾಗಳಲ್ಲಿ ಮತ್ತು ಮಾದ್ಯಮಗಳ ಮುಂದೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಹಿರಿಯ ನಟ ಶಿವರಾಜ್ ಕುಮಾರ್, ಕಿಚ್ಚ ಸುದೀಪ್‌, ನಟಿ ರಮ್ಯಾ, ಧನ್ವೀರ್‌ ಗೌಡ, ನಿರ್ದೇಶಕ ತರುಣ್ ಸುಧೀರ್ ಹೀಗೆ ಸಾಕಷ್ಟು ಮಂದಿ ತನ್ನ ಅನಿಸಿಕೆಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಈಗ ಈ ವಿಚಾರವಾಗಿ ಮೊದಲ ಬಾರಿಗೆ ಸ್ಯಾಂಡಲ್ವುಡ್ ನಟ, ಆ್ಯಕ್ಷನ್ ಪ್ರಿನ್ಸ್ ಖ್ಯಾತಿಯ ನಟ ಧ್ರುವ ಸರ್ಜಾ (Dhruva Sarja) ಅವರು ಪ್ರತಿಕ್ರಿಯೆ ನೀಡಿದ್ದು, ಅವರು ಮಾತನಾಡುತ್ತಾ ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂದು ಹೇಳಿದ್ದಾರೆ. ಧೃವ ಸರ್ಜಾ ಅವರು ಕೇಸ್ ಕೋರ್ಟ್‌ನಲ್ಲಿದೆ. ಕಾನೂನು ಮುಂದೆ ಯಾರೂ ದೊಡ್ಡವರಲ್ಲ ಎಂದಿದ್ದಾರೆ.

ಇದೇ ವೇಳೆ ಅವರು ಈ ಕೇಸ್ ಮುಂದೆ ಏನಾಗಲಿದೆ ಎನ್ನುವುದಕ್ಕೆ ಮಾದ್ಯಮವೊಂದರ ಮುಂದೆ ಮಾತನಾಡಿದ್ದಾರೆ. ನಟ ಧೃವ ಸರ್ಜಾ ಅವರು ನಾಯಕನಾಗಿರುವ ‘ಮಾರ್ಟಿನ್’ ಮತ್ತು ‘ಕೆಡಿ’ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ಇದರಲ್ಲಿ ಮಾರ್ಟಿನ್ ಸಿನಿಮಾ ಬರಲಿರುವ ಅಕ್ಟೋಬರ್ 11ರಂದು ತೆರೆಗೆ ಬರಲಿದ್ದು ಅಭಿಮಾನಿಗಳು ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ.

Actress Anjali: ಅದರ ಬಗ್ಗೆ ಈಗ ನಾನು ತುಟಿ ಬಿಚ್ಚುವ ಹಾಗಿಲ್ಲ, ನಟಿ ಅಂಜಲಿ ಮಾತಿಗೆ ಅಭಿಮಾನಿಗಳು ಶಾಕ್

Leave a Comment