Rajanikanth: ಕಮಲ ಹಾಸನ್ ಇಲ್ದೇ ಇದ್ದಿದ್ರೆ ಆ ಸೀನ್ ಮಾಡೋಕೇ ಆಗ್ತಿರಲಿಲ್ಲ; ರಜನೀಕಾಂತ್ ಶಾಕಿಂಗ್ ಮಾತು

Written by Soma Shekar

Published on:

---Join Our Channel---

Rajanikanth : ಸೂಪರ್ ಸ್ಟಾರ್ ಖ್ಯಾತಿಯ ಹಿರಿಯ ನಟ ರಜನಿಕಾಂತ್ (Rajanikanth) ಅವರು ದೊಡ್ಡಮಟ್ಟದಲ್ಲಿ ಹೆಸರನ್ನು ಮತ್ತು ಅಭಿಮಾನಿಗಳನ್ನ ಪಡೆದುಕೊಂಡಿರುವ ನಟ. ತಮ್ಮ ನಟನೆ ಮತ್ತು ಸ್ಟೈಲ್ ನಿಂದಲೇ ವಿಶ್ವದಾದ್ಯಂತ ಅಭಿಮಾನಿಗಳನ್ನ ಪಡೆದುಕೊಂಡಿದ್ದಾರೆ. ಇಂದು ದಿಗ್ಗಜ ನಟ ಎನಿಸಿಕೊಂಡಿರುವ ಇವರು ಹಿಂದೊಮ್ಮೆ ನಟನೆಯಲ್ಲಿ ಎಡವಿದ್ದ ವಿಚಾರವನ್ನು ಹೇಳಿಕೊಂಡಿದ್ದಾರೆ.

ಪ್ರಖ್ಯಾತ ನಿರ್ದೇಶಕ ಮಣಿರತ್ನಂ (Maniratnam) ಅವರ ಪೊನ್ನಿಯನ್ ಸೆಲ್ವನ್ ಟ್ರೈಲರ್ ರಿಲೀಸ್ ಇವೆಂಟ್ ನಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ರಜನೀಕಾಂತ್ ಅವರು ಸಿನಿಮಾವೊಂದರ ದೃಶ್ಯದಲ್ಲಿ ತನಗೆ ನಟಿಸಲು ಬರದೇ ಇದ್ದಾಗ ಕಮಲ ಹಾಸನ್ (Kamala Haasan) ತನಗೆ ಸಹಾಯ ಮಾಡಿದರೆನ್ನುವ ಅಚ್ಚರಿಯ ವಿಚಾರವನ್ನು ಹಂಚಿಕೊಂಡಿದ್ದರು.

ಆ ವಿಡಿಯೋ ಈಗ ಮತ್ತೊಮ್ಮೆ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ. 1991ರಲ್ಲಿ ತೆರೆಗೆ ಬಂದಂತಹ ದಳಪತಿ (Thalapathy) ಸಿನಿಮಾ ಮಣಿರತ್ನಂ ಅವರ ನಿರ್ದೇಶನದಲ್ಲಿ ಮೂಡಿ ಬಂದಿತ್ತು. ಈ ಸಿನಿಮಾ ಚಿತ್ರೀಕರಣದ ವೇಳೆ ರಜನಿಕಾಂತ್ ಅವರ ನಟನೆ ನಿರ್ದೇಶಕರಿಗೆ ತೃಪ್ತಿಯನ್ನು ನೀಡಿರಲಿಲ್ಲವಂತೆ. ನಂತರ ಮಣಿರತ್ನಂ ಅವರನ್ನು ಸಮಾಧಾನ ಮಾಡೋದಕ್ಕೆ ರಜನಿಕಾಂತ್ ಅವರು ಕಮಲಹಾಸನ್ ಸಹಾಯವನ್ನು ಪಡೆದರಂತೆ.‌

ದಳಪತಿ ಸಿನಿಮಾದಲ್ಲಿ ರಾಜಕಾರಣಿಯೊಬ್ಬರಿಗೆ ಸವಾಲನ ಎಸೆಯುವ ದೃಶ್ಯದಲ್ಲಿ ರಜನೀಕಾಂತ್ ಹಲವು ಟೇಕ್ ತೆಗೆದುಕೊಂಡರೂ ಆ ದೃಶ್ಯ ಸರಿಯಾಗಿ ಬರಲಿಲ್ಲ ಎಂದು ಮಣಿರತ್ನಂ ಅಸಮಾಧಾನ ವ್ಯಕ್ತಪಡಿಸಿದಾಗ, ನನಗೆ ತುಂಬಾ ನಿರಾಶೆ ಆಯ್ತು. ನಂತರ ನಾನು ಸ್ನೇಹಿತ ಕಮಲ ಹಾಸನ್ ಅವರನ್ನು ಕರೆದು ಸಲಹೆಯನ್ನ ಪಡೆದುಕೊಂಡೆ. ಅದಾದ ನಂತರ ಆ ದೃಶ್ಯ ಬಹಳ ಸೊಗಸಾಗಿ ಮೂಡಿ ಬಂತು.

ಆಗ ಮಣಿರತ್ನಂ ಅವರು ಸಹಾ ಸಂತೋಷಗೊಂಡರು. ಅದಕ್ಕಾಗಿ ನಾನು ಕಮಲ್ ಅವರಿಗೆ ಋಣಿಯಾಗಿದ್ದೇನೆ ಎನ್ನುವ ಮಾತುಗಳನ್ನ ಹೇಳುವ ಮೂಲಕ ಹಿಂದಿನ ನೆನಪುಗಳನ್ನು ರಜನಿಕಾಂತ್ ಅವರು ಮತ್ತೊಮ್ಮೆ ಸ್ಮರಿಸಿದ್ದು ತಮ್ಮ ಹಾಗೂ ಕಮಲ ಹಾಸನ್ ಅವರ ಅಭಿಮಾನಿಗಳಿಗೆ ಆಶ್ಚರ್ಯದ ವಿಷಯವೊಂದನ್ನು ತಿಳಿಸಿದರು.‌

DKD show: ಏಕಾಏಕೀ ಡಿಕೆಡಿ ಬಿಟ್ಟು ಹೊರ ಬಂದ ಪುಟ್ಟಕ್ಕನ ಮಕ್ಕಳು ಸೀರಿಯಲ್ ಸಹನಾ; ಕಾರಣವಾದ್ರು ಏನು?

Leave a Comment