Entertainment

ಮನೆ ಬಿಟ್ಟ ಸಹನಾನ ಹುಡುಕೋಕೆ ಬಂದ ಕಾಳಿ, ಸಹನಾ ಮತ್ತು ಕಾಳಿನ ಜೋಡಿ ಮಾಡಿ ಎಂದ ನೆಟ್ಟಿಗರು

Puttakkana Makkalu: ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನಲ್ಲಿ ಗಂಡನಿಂದ ವಿಚ್ಚೇದನ ಪಡೆಯೋದಕ್ಕೆ ತೀರ್ಮಾನ ಮಾಡಿರೋ ಸಹನಾಗೆ ತಾನು ತನ್ನ ಅಮ್ಮನಿಗೆ ಭಾರ ಆಗ್ತೀನಿ, ಜನರಾಡೋ ಮಾತಿಗೆ ಗುರಿಯಾಗ್ತೀನಿ ಅನ್ನೋ ಭಾವನೆ ಮೂಡಿ ಅಮ್ಮನಿಗೆ ಭಾರವಾಗಿ ಅವಳ ಮನೆಯಲ್ಲಿ ಬದುಕೋದು ಬೇಡ ಅಂತ ರಾತ್ರಿ ಎಲ್ಲರೂ ಮಲಗಿರೋ ಟೈಮ್ ನಲ್ಲಿ ಮನೆ ಬಿಟ್ಟು ಹೋಗೋಕೆ ಮನೆಯಿಂದ ಹೊರಗೆ ಬಂದಿದ್ದಾಳೆ. ಪುಟ್ಟಕ್ಕ ಹೇಗಾದ್ರು ಮಾಡಿ ಮಗಳು ಮತ್ತು ಅಳಿಯನ್ನ ಒಂದು ಮಾಡಬೇಕು, ಅವ್ರ ಜೀವನವನ್ನ ಸರಿ ದಾರಿಗೆ ತರಬೇಕು ಅನ್ನೋ ಆಲೋಚನೆಯಲ್ಲಿ ಇದ್ದಾಳೆ.

ಮನೆಯಿಂದ ಹೊರಗೆ ಬಂದ ಸಹನಾ (Sahana) ತಡರಾತ್ರಿಯಲ್ಲಿ ಬಸ್ ಸ್ಟ್ಯಾಂಡ್ ನಲ್ಲಿ  ನಿಂತಿರೋವಾಗ ಕಂಠಿ ಅಲ್ಲಿಂದ ಪಾಸ್ ಆಗೋದು ನೋಡಿ ಸಹನಾ ಅವಿತುಕೊಂಡಿದ್ದಾಳೆ. ಸಹನಾ ಕಣ್ಣೀರನ್ನ ಹಾಕ್ತಾ ನನ್ನನ್ನ ಕ್ಷಮಿಸಿಬಿಡಿ ಅಂತ ಹೇಳ್ತಾಳೆ. ಕಂಠಿ ಹೋದ ನಂತರ ಅಲ್ಲಿಗೆ ಕುಡಿದ ಮತ್ತಿನಲ್ಲಿದ್ದ ಕಾಳಿ ಬರ್ತಾನೆ. ಅವನಿಗೆ ಸಹನಾ ಬಸ್ ಸ್ಟ್ಯಾಂಡ್ ನಲ್ಲಿ ನಿಂತಿರೋದು ನೋಡಿ ಶಾಕ್ ಆಗುತ್ತೆ. ಅವನು ಸಹನಾ ಹತ್ರ ಬರೋ ಟೈಮ್ ಗೆ ಅವಳು ಬಸ್ ಹತ್ತಿ ಹೊರಟು ಹೋಗ್ತಾಳೆ.

ಇನ್ನೊಂದು ಕಡೆ ಮನೇಲಿ ಮಗಳಿಲ್ಲ ಅಂತ ಪುಟ್ಟಕ್ಕ ಕಂಗಾಲಾಗಿದ್ದಾಳೆ. ಎಲ್ಲರೂ ಸಹನಾನ ಹುಡುಕೋದಕ್ಕೆ ಹೋಗಿದ್ದಾರೆ. ಬಂಗಾರಮ್ಮ ಪುಟ್ಟಕ್ಕನಿಗೆ ಮಗಳು ಸಿಕ್ತಾಳೆ ಅಂತ ಸಮಾಧಾನ ಹೇಳಿದ್ದಾರೆ. ಎಲ್ರೂ ಟೆನ್ಷನ್ ನಲ್ಲಿ ಇರೋವಾಗ್ಲೇ ಕಾಳಿ (Kali) ಅಲ್ಲಿಗೆ ಬಂದು ಸಹನಾ ಎಲ್ಲೋಗಿದ್ದಾಳೆ ಅಂತ ಗೊತ್ತು ಅನ್ನೋ ಮಾತನ್ನ ಹೇಳಿದ್ದಾನೆ. ಸಹನಾ ಕೋರ್ಟ್ ಕೇಸ್ ನಿಂದ ಹೊರಗೆ ಬರೋಕೆ ಕಾಳಿ ಸಹಾಯವನ್ನು ಮಾಡಿದ್ದಾನೆ.

ಅದಕ್ಕೂ ಮೊದಲು ಪಂಚಾಯ್ತಿಯಲ್ಲಿ ಕೂಡಾ ಕೌಸಲ್ಯ ಮತ್ತು ತನ್ನ ಅಕ್ಕನ ಮಾತನ್ನ ಕೇಳದೇ ನಿಜ ಮಾತ್ರ ಹೇಳಿ ಆಗಲೂ ಸಹನಾ ಪರವಾಗಿ ಕಾಳಿ ನಿಂತಿದ್ದ. ಈಗ ಅವಳನ್ನ ಹುಡುಕೋಕು ಕಾಳಿ ಸಹಾಯ ಮಾಡ್ತಿದ್ದಾನೆ. ಇದನ್ನೆಲ್ಲಾ ನೋಡಿದ ಪ್ರೇಕ್ಷಕರು ಕಾಳಿಗೆ ಸ್ನೇಹ ಮೇಲೆ ಇರೋರು ನಿಜವಾದ ಪ್ರೀತಿ. ಮೇಷ್ಟ್ರನ್ನ ಸಹನಾನ ಒಂದು ಮಾಡಬೇಕು ಅನ್ನೋ ಕಾಳಿ ಆಲೋಚನೆ ತುಂಬಾ ಒಳ್ಳೇದು. ಸಹನಾಗೆ ಕಾಳಿನ ಜೋಡಿ ಮಾಡಿ, ಚೆನ್ನಾಗಿ ನೋಡ್ಕೊಳ್ತಾನೆ ಅಂತ ಕಾಮೆಂಟ್ ಗಳನ್ನು ಮಾಡ್ತಾ ಇದ್ದಾರೆ.

Soma Shekar

Recent Posts

Kangana Ranaut: ಎಮೆರ್ಜೆನ್ಸಿ ಸಿನಿಮಾಕ್ಕಾಗಿ ಕಾಯ್ತಿದ್ದ ಫ್ಯಾನ್ಸ್ ಗೆ ದೊಡ್ಡ ಶಾಕ್ ಕೊಟ್ಟ ಕಂಗನಾ ರಣಾವತ್

Kangana Ranaut: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಸದ್ಯಕ್ಕೆ ರಾಜಕೀಯದ ವಿಚಾರವಾಗಿ ಭರ್ಜರಿ ಸುದ್ದಿಯಲ್ಲಿದ್ದಾರೆ. ಮೊನ್ನೆಯಷ್ಟೇ ನಟಿ…

2 hours ago

SeethaRama: ಭಾರ್ಗವಿಯ ಕುತಂತ್ರಕ್ಕೆ ಬಲಿಯಾದ ಅಶೋಕ; ಪ್ರಜ್ಞೆ ತಪ್ಪಿದ ಅಶೋಕನ ರಕ್ಷಣೆಗೆ ಯಾರು ಬರ್ತಾರೆ?

SeethaRama : ಸೀತಾಳ ಮನೆಗೆ ದೇಸಾಯಿ ಕುಟುಂಬದವರೆಲ್ಲರೂ ಆಗಮಿಸಿದ್ದಾರೆ. ಶಾಸ್ತ್ರೋಕ್ತವಾಗಿ ಹೆಣ್ಣನ್ನು ಕೇಳುವ ಶಾಸ್ತ್ರವನ್ನು ಬಹಳ ಖುಷಿಯಿಂದ ಮಾಡುತ್ತಿದ್ದಾರೆ ಸೂರ್ಯ…

4 hours ago

Ninagagi Serial: ಹೊಸ ಸೀರಿಯಲ್ ಘೋಷಣೆ, ದಿವ್ಯ ಉರುಡುಗ ಎಂಟ್ರಿ, ಬೃಂದಾವನ ಸೀರಿಯಲ್ ಎಕ್ಸಿಟ್? ಪ್ರೇಕ್ಷಕರಿಗೆ ಟೆನ್ಷನ್

Ninagagi Serial: ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಹೆಸರನ್ನು ಮಾಡಿರುವ ನಟಿಯರಲ್ಲಿ ದಿವ್ಯ ಉರುಡುಗ (Divya Uruduga) ಅವರು ಬಿಗ್…

22 hours ago

Chandini: ‘ಎ’ ನನ್ನ ಜೀವನ ಬದಲಿಸಿದ ಸಿನಿಮಾ: ರೀ ರಿಲೀಸ್ ವೇಳೆ ಎ ಸಿನಿಮಾ ನಟಿ ಚಾಂದಿನಿ ಮನಸ್ಸಿನ ಮಾತು

Chandini: ಕನ್ನಡ ಸಿನಿಮಾ ರಂಗದಲ್ಲಿ ಕೆಲವೊಂದು ಸಿನಿಮಾಗಳು ಎವರ್ ಗ್ರೀನ್ ಸಿನಿಮಾಗಳಾಗಿ ಜನರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದಿದೆ. ಕೆಲವೊಂದು ಸಿನಿಮಾಗಳು…

24 hours ago

Tollywood Heroins: ಮೊದಲ ಸಿನಿಮಾದಿಂದಲೇ ಸ್ಟಾರ್ ಗಳಾದ ಈ ಇಬ್ಬರ ಅಬ್ಬರ ತಗ್ಗಿದ್ದೇಕೆ? ಚಾನ್ಸ್ ಸಿಕ್ತಿಲ್ಲ ಯಾಕೆ?

Tollywood Heroins: ಸಿನಿಮಾ ರಂಗದಲ್ಲಿ ಕೆಲವು ನಟ ನಟಿಯರಿಗೆ ಮೊದಲ ಸಿನಿಮಾದ ಮೂಲಕವೇ ದೊಡ್ಡ ಕ್ರೇಜ್ ಸೃಷ್ಟಿಯಾಗುತ್ತದೆ ಮತ್ತು ಒಂದೇ…

1 day ago

Amruthadhaare: ಗೌತಮ್ ಭೂಮಿಕಾ ಹೊರಟ ಕೂಡಲೇ ತನ್ನ ಅಸಲಿ ಮುಖ ತೋರಿಸಿದ ಜೈದೇವ್; ಮಲ್ಲಿ ಕಥೆ ಮುಗೀತಾ?

Amruthadhaare : ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿ ಗೌತಮ್ ಮತ್ತು ಭೂಮಿಕಾ ಖುಷಿಯಾಗಿ ಚಿಕ್ಕಮಗಳೂರಿನ ಕಡೆಗೆ ಹೊರಟಿದ್ದಾರೆ. ಅಲ್ಲಿನ ಪ್ರಕೃತಿ…

1 day ago

This website uses cookies.