Manchu Vishnu ತಿರುಪತಿ ಲಡ್ಡು ವಿಚಾರ ಮಾತಾಡಿದ ಪ್ರಕಾಶ್ ರಾಜ್ ಗೆ ನಿಮ್ಮ ಲಿಮಿಟ್ ನಲ್ಲಿರಿ ಎಂದ ಸ್ಟಾರ್ ನಟ

Written by Soma Shekar

Published on:

---Join Our Channel---

Manchu Vishnu: ವೈ ಎಸ್ ಜಗನ್ ಮೋಹನ್ ರೆಡ್ಡಿ ಅಧಿಕಾರಾವಧಿಯಲ್ಲಿ ತಿರುಪತಿ ಲಡ್ಡು (Tirupati Laddu) ತಯಾರಿಕೆಯಲ್ಲಿ ನಡೆದಿದೆ ಎನ್ನಲಾದ ಅಪಚಾರದ ವಿಚಾರ ಈಗ ಇಡೀ ದೇಶದಲ್ಲೇ ದೊಡ್ಡ ಸುದ್ದಿಯಾಗಿದೆ. ಈ ಕುರಿತಾಗಿ ನಟ, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮಾಡಿದ ಪೋಸ್ಟ್ ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ ಮಾಡಿದ್ದು, ಇದಕ್ಕೆ ನಟ ಮಂಚು ವಿಷ್ಣು ಈಗ ತಿರುಗೇಟು ನೀಡಿದ್ದಾರೆ.

ಪವನ್ ಕಲ್ಯಾಣ್ (Pawan Kalyan) ಅವರ ಪೋಸ್ಟ್ ಬಗ್ಗೆ ಪ್ರತಿಕ್ರಿಯೆ ನೀಡಿಸ ಪ್ರಕಾಶ್ ರಾಜ್, ಆಂಧ್ರದಲ್ಲಿ ನಿಮ್ಮದೇ ಸರ್ಕಾರ ಇದೆ. ಇದನ್ನು ಮಾಡಿದವರು ಯಾರು ಅನ್ನೋದನ್ನ ಮೊದಲು ಪತ್ತೆ ಹಚ್ಚಿ, ದೇಶದಲ್ಲಿ ಈಗಾಗ್ಲೇ ಹಲವು ಕೋಮು ಗಲಭೆ ಸಮಸ್ಯೆ ಗಳು ಇದ್ದು, ಇದಕ್ಕೆ ಹೊಸ ರೂಪ ಕೊಟ್ಟು ಹೊಸ ಸಮಸ್ಯೆಗಳನ್ನು ಹುಟ್ಟು ಹಾಕಿಬೇಡಿ ಅಂತ ಟೀಕೆ ಮಾಡಿದ್ದರು.

ಪವನ್ ಕಲ್ಯಾಣ್ ಪೋಸ್ಟ್ ಅನ್ನು ಟೀಕಿಸಿದ ನಟ ಪ್ರಕಾಶ್ ರಾಜ್ ಗೆ (Prakash Raj) ನಟ ಮಂಚು ವಿಷ್ಣು (Manchu Vishnu) ಕೌಂಟರ್ ನೀಡಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಪ್ರಕಾಶರಾಜ್, ದಯವಿಟ್ಟು ಸ್ವಲ್ಪ ತಾಳ್ಮೆಯಿಂದ ಇರಿ. ತಿರುಮಲ ಲಡ್ಡು ಕೇವಲ ಪ್ರಸಾದವಲ್ಲ. ನನ್ನಂತಹ ಕೋಟ್ಯಂತರ ಹಿಂದೂಗಳ ನಂಬಿಕೆಯ ಪ್ರತೀಕವಾಗಿದೆ.

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ನಮ್ಮ ಪವಿತ್ರ ಸಂಪ್ರದಾಯಗಳ ಸಂರಕ್ಷಣೆಗಾಗಿ ಇಂತದೊಂದು ವಿಷಯದ ಬಗ್ಗೆ ಸಮಗ್ರವಾದ ತನಿಖೆಗೆ ಕರೆಯನ್ನು ನೀಡಿದ್ದಾರೆ. ಇಂತಹ ವಿಚಾರದಲ್ಲಿ ಕೋಮು ಬಣ್ಣ ಎಲ್ಲಿಂದ ಬರುತ್ತೆ?ನಿಮ್ಮ ಮಿತಿಯಲ್ಲಿರಿ ಎಂದಿದ್ದಾರೆ.

Dileep Raj ಗೋವಾದಲ್ಲಿ ನೀನಾದೆ ನಾ ಜೋಡಿ, ಫೋಟೋ ನೋಡಿ ಬೇಗ ಖುಷಿ ಸುದ್ದಿ ಕೊಡಿ ಅಂತಿದ್ದಾರೆ ಫ್ಯಾನ್ಸ್

Leave a Comment