Bigg Boss ಮನೆಗೆ ಪೋಲಿಸ್ ದಿಢೀರ್ ಎಂಟ್ರಿ, ಕನ್ನಡ ಬಿಗ್ ಬಾಸ್ ಮನೇಲಿ ಅಂತದ್ದೇನಾಗಿದೆ

Written by Soma Shekar

Published on:

---Join Our Channel---

Bigg Boss: ಬಿಗ್ ಬಾಸ್ (Bigg Boss) ಆಯೋಜಕರಿಗೆ ಕುಂಬಳಗೋಡು ಠಾಣೆ ಪೊಲೀಸರು ನೋಟಿಸ್ ಅನ್ನು ನೀಡಿದ್ದಾರೆ ಎನ್ನುವ ವಿಚಾರವೊಂದು ಈಗ ಮಾದ್ಯಮಗಳಲ್ಲಿ ಸುದ್ದಿಯಾಗಿದ್ದು, ಇದು ಎಲ್ಲರಿಗೂ ಶಾಕ್ ನೀಡಿದೆ. ಅಲ್ಲದೇ ಬಿಗ್ ಬಾಸ್ ನ ಆಯೋಜಕರನ್ನು ವಿಚಾರಣೆಗೆ ಬರುವಂತೆ ಈ ನೋಟಿಸ್ ನೀಡಲಾಗಿದೆ ಎಂದು ಸಹಾ ಹೇಳಲಾಗುತ್ತಿದೆ. 

ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಮೊನ್ನೆ ವರೆಗೂ ಇದ್ದ ಸ್ವರ್ಗ ನರಕ ಕಾನ್ಸೆಪ್ಟ್ , ಅದರಲ್ಲಿ ನರಕದಲ್ಲಿ ಇದ್ದ ಮಹಿಳೆಯರ ಸ್ಥಿತಿ ಗತಿ, ನೀಡುವ ಆಹಾರ, ಶೌಚಾಲಯ ಬಳಕೆ ಸೇರಿದಂತೆ ಒಂದಷ್ಟು ವಿಚಾರಗಳಿಗೆ ಆಕ್ರೋಶ ವ್ಯಕ್ತವಾಗಿತ್ತು.ಈ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗದಿಂದ ದೂರು ದಾಖಲಿಸಿದೆ.

ಮಹಿಳಾ ಆಯೋಗದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಸೆಟ್ ಗೆ ತೆರಳಿ ಇನ್ ಸ್ಪೆಕ್ಟರ್ ಮಂಜುನಾಥ್ ಹೂಗಾರ ಅವರು ನೋಟಿಸ್ ನೀಡಿದ್ದಾರೆ. ಅಲ್ಲದೇ ಸ್ವರ್ಗ ನರಕ ವಿಚಾರವಾಗಿ ನಡೆದ ಸಂಭಾಷಣೆಯ ರಾ ಫುಟೇಜ್ ಸಹಾ ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಒಂದು ವೇಳೆ ಈ ವಿಚಾರವಾಗಿ ಅಸಡ್ಡೆ ತೋರಿಸಿದಲ್ಲಿ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎನ್ನಲಾಗಿದೆ. ಇನ್ನು ಮೊನ್ನೆಯ ಎಪಿಸೋಡ್ ನಲ್ಲಿ ನರಕದ ಭಾಗವನ್ನು ಧ್ವಂಸ ಮಾಡಲಾಗಿದೆ. ಅಲ್ಲದೇ ಎರಡು ಭಾಗವಾಗಿದ್ದ ಮನೆ ಈಗ ಒಂದೇ ಆಗಿದೆ.

Salman Khan ಬಿಗ್ ಬಾಸ್ ಶೂಟಿಂಗ್ ನಿಲ್ಲಿಸಿ ಆಸ್ಪತ್ರೆಗೆ ಓಡಿದ ಬಾಲಿವುಡ್ ನಟ ಸಲ್ಮಾನ್ ಖಾನ್; ಅಂತದ್ದೇನಾಯ್ತು

Leave a Comment