ಸಮಂತಾ ಪರ ದನಿ ಎತ್ತಿದ Naga Chaitanya, ಕೆಟ್ಟ ಕಾಮೆಂಟ್ ಮಾಡಿದವ್ರಿಗೆ ಗ್ರಹಚಾರ ಬಿಡಿಸಿದ ನಟ

Written by Soma Shekar

Published on:

---Join Our Channel---

Naga Chaitanya: ಸಮಂತಾ (Samantha) ಜೊತೆಗಿನ ನಾಗಚೈತನ್ಯ (Naga Chaitanya) ವಿಚ್ಛೇದನದ ವಿಚಾರವಾಗಿ ಆಂಧ್ರಪ್ರದೇಶದಲ್ಲಿ ಸಚಿವೆ ಕೊಂಡ ಸುರೇಖಾ (Konda Surekha) ಮಾಡಿದ ಒಂದು ಆರೋಪ ದೊಡ್ಡ ಸಂಚಲನ ಸೃಷ್ಟಿಸಿದೆ. ‌ಸಿನಿಮಾ ಸ್ಟಾರ್ ಗಳು ಸಚಿವೆಯ ವಿರುದ್ಧ ದನಿ ಎತ್ತಿದ್ದಾರೆ. ಈಗ ಅಕ್ಕಿನೇನಿ ನಾಗ ಚೈತನ್ಯ ಸಹಾ ಒಂದು ಟ್ವೀಟ್ ಮಾಡಿದ್ದು ತಮ್ಮ ತಂದೆ ನಾಗಾರ್ಜುನ ಅವರ ಟ್ವೀಟ್ ಅನ್ನು ರೀ ಟ್ವೀಟ್ ಮಾಡಿದ್ದಾರೆ.‌

ನಾಗಚೈತನ್ಯ ತಮ್ಮ ಪೋಸ್ಟ್ ನಲ್ಲಿ, ಒಬ್ಬ ವ್ಯಕ್ತಿ ಡಿವೋರ್ಸ್ ತೆಗೆದುಕೊಳ್ಳುವುದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಸಂಗತಿ. ಅದಕ್ಕಾಗಿ ಬಹಳಷ್ಟು ಯೋಚಿಸಿ, ಪರಸ್ಪರ ನಿರ್ಧಾರವನ್ನು ಮಾಡಿ ನಾನು ಹಾಗೂ ನನ್ನ ಮಾಜಿ ಸಂಗಾತಿ ಬೇರ್ಪಡಲು ನಿರ್ಧಾರವನ್ನು ಮಾಡಿದೆವು.

ಅದು ನಾವು ಸಮಾಧಾನದಿಂದ ಮಾಡಿದ ನಿರ್ಧಾರ. ನಾವು ನಮ್ಮ ಜೀವನದ ಅನ್ಯ ಗುರಿಗಳನ್ನು ತಲುಪೋದಕ್ಕೆ, ಅವು ಭಿನ್ನವಾಗಿದ್ದ ಕಾರಣ ನಾವು ಒಪ್ಪಿಗೆಯಿಂದಲೇ ಬೇರ್ಪಟ್ಟೆವು. ನಮ್ಮಿಬ್ಬರ ಗೌರವ ಹಾಗೂ ಘಟನೆಯನ್ನು ಪರಸ್ಪರ ನೋಡಿಕೊಂಡು ನಾವು ಬೇರ್ಪಟ್ಟೆವು.

ಹೀಗಿದ್ದರೂ ಬಹಳಷ್ಟು ಆಧಾರ ರಹಿತ ಸುದ್ದಿಗಳು ಓಡಾಡಿದವು. ಆದರೆ ನಾನು ನನ್ನ ಮಾಜಿ ಸಂಗಾತಿ ಹಾಗೂ ನನ್ನ ಕುಟುಂಬದ ಬಗ್ಗೆ ಇರುವಂತಹ ಅತೀವವಾದ ಗೌರವದಿಂದ ಇಷ್ಟು ದಿನ ಸುಮ್ಮನಿದ್ದೆ. ಸಚಿವೆ ಕೊಂಡ ಸುರೇಖಾ ಅವರು ಸುಳ್ಳು ಹೇಳಿಕೆಯನ್ನು ನೀಡಿದ್ದು, ಇದು ಖಂಡಿತವಾಗಿಯೂ ಆಧಾರರಹಿತ ಮತ್ತು ಸ್ವೀಕೃತವಲ್ಲದ್ದಾಗಿದೆ.

ಮಾಧ್ಯಮಗಳಲ್ಲಿ ಸುದ್ದಿಯನ್ನು ಮಾಡುವುದಕ್ಕಾಗಿ ಸಿನಿಮಾ ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ನಿರ್ಧಾರಗಳ ಮೇಲೆ ಕಾಮೆಂಟ್ ಮಾಡುವುದು ನಾಚಿಕೆಗೇಡಿನ ಸಂಗತಿ ಎನ್ನುವುದಾಗಿ ನಟ ನಾಗಚೈತನ್ಯ ಟ್ವೀಟ್ ಮಾಡಿದ್ದು ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕುಸ್ತಿ ಅಖಾಡ ಆದ Bigg Boss Kannada 11, ಮೊದಲ ವಾರದಲ್ಲೇ ಇಬ್ಬರು ಆಸ್ಪತ್ರೆಗೆ; ಏನಿದೆಲ್ಲಾ ಅಂತ ಶಾಕ್ ಆದ ಜನ

Leave a Comment