Entertainment

Mahanati Show: ಶ್ರಮಿಕ ವರ್ಗಕ್ಕೆ ಅಪಮಾನ; ಮಹಾನಟಿ ಶೋನ ಗಗನ, ರಮೇಶ್, ಪ್ರೇಮ, ಅನುಶ್ರೀ ವಿರುದ್ಧ ದೂರು

Mahanati Show: ಜೀ ಕನ್ನಡ (Zee Kannada) ವಾಹಿನಿಯು ತನ್ನ ಹೊಸ ಹೊಸ ರಿಯಾಲಿಟಿ ಶೋಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರವುದು ಮಾತ್ರವೇ ಅಲ್ಲದೇ ಹಲವು ಪ್ರತಿಭೆಗಳನ್ನು ನಾಡಿಗೆ ಪರಿಚಯ ಮಾಡಿಕೊಟ್ಟ ಹೆಗ್ಗಳಿಕೆಯನ್ನು ಕೂಡಾ ತನ್ನದಾಗಿಸಿಕೊಂಡಿದೆ. ಈಗ ಹೊಚ್ಚ ಹೊಸ ಕಾನ್ಸೆಪ್ಟ್ ನೊಂದಿಗೆ ಮಹಾನಟಿ (Mahanati Show) ಎನ್ನುವ ರಿಯಾಲಿಟಿ ಶೋ ಮೂಲಕ ಪ್ರತಿಭಾವಂತ ನಟಿಯರನ್ನು ಪರಿಚಯಿಸುವ ಅದ್ಭುತವಾದ ಒಂದು ಪ್ರಯತ್ನ ನಡೆಯುತ್ತಿದೆ. ಮಹಾನಟಿ ರಿಯಾಲಿಟಿ ಶೋ ಆರಂಭವಾದ ಕೆಲವೇ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಸುದ್ದಿಯಾಗಿದೆ. ಮಹಾನಟಿ ಶೋ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿರುವ ಗಗನಾ ಶೋ ನಲ್ಲಿ ಒಂದು ಪ್ರಮುಖ ಆಕರ್ಷಣೆಯಾಗಿದ್ದು, ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ.

ವಿಷಯ ಯಾವುದೇ ನೀಡಿದರೂ ಅದಕ್ಕೆ ತಕ್ಕಂತೆ ತಾನೇ ಸಂಭಾಷಣೆ ಸಿದ್ಧಪಡಿಸಿಕೊಂಡು ಅಭಿನಯಿಸುವ ಗಗನಾ (Gagana) ಈಗ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಆಗಿದ್ದಾರೆ. ಅಲ್ಲದೇ ಇದೀಗ ಅವರನ್ನು ಸೇರಿದಂತೆ ನಿರೂಪಕಿ ಅನುಶ್ರೀ, ತೀರ್ಪುಗಾರರಾದ ರಮೇಶ್ ಅರವಿಂದ್ (Ramesh Arvind), ನಟಿ ಪ್ರೇಮ (Prema) ಮತ್ತಿತರರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಲಾಗಿದೆ. ಇಷ್ಟಕ್ಕೂ ದೂರು ದಾಖಲಾಗಿದ್ದು ಏಕೆ? ಅಂತದ್ದೇನು ನಡೆಯಿತು? ಅನ್ನೋದನ್ನ ತಿಳಿಯೋಣ ಬನ್ನಿ.

ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್ ಅವರು ಸನ್ನಿವೇಶವೊಂದನ್ನು ನೀಡಿ ಅಭಿನಯಿಸಲು ಹೇಳಿದ್ದರು. ಆ ಸಮಯದಲ್ಲಿ ಮೆಕ್ಯಾನಿಕ್ ಕುರಿತಾಗಿ ಇದ್ದ ಸನ್ನಿವೇಶದಲ್ಲಿ ಗಗನಾ ಅವರು ಅಭಿನಯಿಸುವ ವೇಳೆಯಲ್ಲಿ, ಡೈಲಾಗ್ ಹೇಳುವ ಹುಮ್ಮಸ್ಸಿನಲ್ಲಿ ಗಗನಾ ಮೆಕ್ಯಾನಿಕ್ ನ ಮದುವೆಯಾದರೆ ಗ್ರೀಸ್ ತಿಂದು ಬದುಕಬೇಕಾಗುತ್ತೆ ಅಂತ ಹೇಳಿದ್ದರು. ಈ ವಿಚಾರವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ಚರ್ಚೆ ನಡೆದಿದ್ದು , ಅನೇಕರು ಅಸಮಾಧಾನವನ್ನು ಸಹಾ ಹೊರ ಹಾಕಿದ್ದಾರೆ.

‌ಚಿಕ್ಕನಾಯಕನಹಳ್ಳಿಯ ದ್ವಿಚಕ್ರ ವಾಹನ ಮಾಲೀಕರು ಮತ್ತು ತಂತ್ರಜ್ಞರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಬಗ್ಗೆ ದೂರನ್ನು ದಾಖಲು ಮಾಡಿದ್ದಾರೆ ಎನ್ನುವ ಸುದ್ದಿಗಳಾಗಿದೆ. ಗಗನಾ ಅವರು ಹೇಳಿದ ಡೈಲಾಗ್ ವೃತ್ತಿಪರ ಮೆಕ್ಯಾನಿಕ್ ಸಮುದಾಯಕ್ಕೆ ನೋವನ್ನು ಉಂಟು ಮಾಡಿದೆ ಎಂದು ದೂರನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.‌ ಗಗನಾ ಅವರ ವೀಡಿಯೋ ಗಳಿಗೆ ಮಾಡಿರುವ ಕಾಮೆಂಟ್ ಗಳಲ್ಲಿ ಸಹಾ ಶಾಕಿಂಗ್ ಆಗಿವೆ.

ಇದೇ ವೇಳೆ ಶೋನಲ್ಲಿ ಗಗನಾ ಅವರ ಬಗ್ಗೆ ವಿಶೇಷ ಮೆಚ್ಚುಗೆ ತೀರ್ಪುಗಾರರಿಂದ ವ್ಯಕ್ತವಾಗಿದೆ. ಶೋ ನ ತೀರ್ಪುಗಾರರಲ್ಲಿ ಒಬ್ಬರಾಗಿರುವ ನಿರ್ದೇಶಕ ತರುಣ್ ಸುಧೀರ್ (Tarun Sudhir) ಅವರು ಈಗಾಗಲೇ ಗಗನಾ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಮಾತ್ರವೇ ಅಲ್ಲದೇ ಅಡ್ವಾನ್ಸ್ ಹಣವನ್ನು ಸಹಾ ನೀಡಿದ್ದಾರೆ. ಎರಡನೇ ಬಾರಿ ಅವರು ಒಂದು ಲೋಟವನ್ನು ಸಹಾ ಬಹುಮಾನವಾಗಿ ನೀಡಿದ್ದರು.

Soma Shekar

Recent Posts

Ninagagi Serial: ಹೊಸ ಸೀರಿಯಲ್ ಘೋಷಣೆ, ದಿವ್ಯ ಉರುಡುಗ ಎಂಟ್ರಿ, ಬೃಂದಾವನ ಸೀರಿಯಲ್ ಎಕ್ಸಿಟ್? ಪ್ರೇಕ್ಷಕರಿಗೆ ಟೆನ್ಷನ್

Ninagagi Serial: ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಹೆಸರನ್ನು ಮಾಡಿರುವ ನಟಿಯರಲ್ಲಿ ದಿವ್ಯ ಉರುಡುಗ (Divya Uruduga) ಅವರು ಬಿಗ್…

18 hours ago

Chandini: ‘ಎ’ ನನ್ನ ಜೀವನ ಬದಲಿಸಿದ ಸಿನಿಮಾ: ರೀ ರಿಲೀಸ್ ವೇಳೆ ಎ ಸಿನಿಮಾ ನಟಿ ಚಾಂದಿನಿ ಮನಸ್ಸಿನ ಮಾತು

Chandini: ಕನ್ನಡ ಸಿನಿಮಾ ರಂಗದಲ್ಲಿ ಕೆಲವೊಂದು ಸಿನಿಮಾಗಳು ಎವರ್ ಗ್ರೀನ್ ಸಿನಿಮಾಗಳಾಗಿ ಜನರ ಮನಸ್ಸಿನಲ್ಲಿ ಸ್ಥಾನವನ್ನು ಪಡೆದಿದೆ. ಕೆಲವೊಂದು ಸಿನಿಮಾಗಳು…

19 hours ago

Tollywood Heroins: ಮೊದಲ ಸಿನಿಮಾದಿಂದಲೇ ಸ್ಟಾರ್ ಗಳಾದ ಈ ಇಬ್ಬರ ಅಬ್ಬರ ತಗ್ಗಿದ್ದೇಕೆ? ಚಾನ್ಸ್ ಸಿಕ್ತಿಲ್ಲ ಯಾಕೆ?

Tollywood Heroins: ಸಿನಿಮಾ ರಂಗದಲ್ಲಿ ಕೆಲವು ನಟ ನಟಿಯರಿಗೆ ಮೊದಲ ಸಿನಿಮಾದ ಮೂಲಕವೇ ದೊಡ್ಡ ಕ್ರೇಜ್ ಸೃಷ್ಟಿಯಾಗುತ್ತದೆ ಮತ್ತು ಒಂದೇ…

22 hours ago

Amruthadhaare: ಗೌತಮ್ ಭೂಮಿಕಾ ಹೊರಟ ಕೂಡಲೇ ತನ್ನ ಅಸಲಿ ಮುಖ ತೋರಿಸಿದ ಜೈದೇವ್; ಮಲ್ಲಿ ಕಥೆ ಮುಗೀತಾ?

Amruthadhaare : ಅಮೃತಧಾರೆ (Amruthadhaare) ಸೀರಿಯಲ್ ನಲ್ಲಿ ಗೌತಮ್ ಮತ್ತು ಭೂಮಿಕಾ ಖುಷಿಯಾಗಿ ಚಿಕ್ಕಮಗಳೂರಿನ ಕಡೆಗೆ ಹೊರಟಿದ್ದಾರೆ. ಅಲ್ಲಿನ ಪ್ರಕೃತಿ…

23 hours ago

Bhumika Ramesh: ಲಕ್ಷ್ಮೀ ಬಾರಮ್ಮ ಸೀರಿಯಲ್ ಗೆ ಗುಡ್ ಬೈ ಹೇಳ್ತಾರಾ ಭೂಮಿಕಾ; ತೆಲುಗಲ್ಲಿ ಹೊಸ ಆಫರ್

Bhumika Ramesh: ಇತ್ತೀಚಿನ ದಿನಗಳಲ್ಲಿ ತೆಲುಗು ಕಿರುತೆರೆಯಲ್ಲಿ (Telugu Television) ಕನ್ನಡ ಕಲಾವಿದ್ದರದ್ದೇ ಪಾರುಪತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ತೆಲುಗು…

1 day ago

Lakshmi Nivasa: ಹುಚ್ಚು ಪ್ರೀತಿ, ಹೆಂಡ್ತಿ ಪರದಾಟಕ್ಕೆ ಖುಷಿ ಪಟ್ಟ ಜಯಂತ್; ಏನ್ ತಲೆನೋವು ಗುರು ಅಂದ್ರು ನೆಟ್ಟಿಗರು

Lakshmi Nivasa: ಸದ್ಯಕ್ಕಂತೂ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ನಲ್ಲಿ ಜಯಂತ್ (Jayanth) ಮತ್ತು ಜಾಹ್ನವಿ (Jahnavi) ಕಥೆಯೇ…

1 day ago

This website uses cookies.