Rishab Shetty: ನಾನು ಪ್ರಶಸ್ತಿಯನ್ನ ಪುನೀತ್ ರಾಜ್‍ಕುಮಾರ್, ದೈವ ಮತ್ತು ದೈವ ನರ್ತಕರಿಗೆ ಸಮರ್ಪಿಸುತ್ತೇನೆ; ರಿಷಬ್ ಶೆಟ್ಟಿ

Written by Soma Shekar

Published on:

---Join Our Channel---

Rishab Shetty : 70ನೇ ರಾಷ್ಟ್ರೀಯ ಚಲನಚಿತ್ರ (70th National Award) ಪ್ರಶಸ್ತಿಗಳ ಘೋಷಣೆಯಾಗಿದ್ದು, ಸ್ಯಾಂಡಲ್ವುಡ್ ಗೆ ಮತ್ತು ಕನ್ನಡ ಸಿನಿ ಪ್ರೇಮಿಗಳಿಗೆ ಇದು ಖುಷಿಯನ್ನು ನೀಡಿದೆ. ಹೌದು, ಡಿವೈನ್ ಸ್ಟಾರ್ ಖ್ಯಾತಿನ ನಟ ರಿಷಬ್ ಶೆಟ್ಟಿ ಅವರು (Rishab Shetty) ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಶಸ್ತಿ ಘೋಷಣೆಯ ನಂತರ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಸುದ್ಧಿ ಗೋಷ್ಟಿ ನಡೆಸಿ ಮಾತನಾಡಿದ್ದಾರೆ.‌

ರಿಷಬ್ ಶೆಟ್ಟಿ ಅವರು ತಮಗೆ ಸಂದಿರುವಂತಹ ಪ್ರಶಸ್ತಿಯನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ದೈವಕ್ಕೆ, ಹಾಗೂ ದೈವನರ್ತಕರಿಗೆ ಅರ್ಪಣೆ ಮಾಡುತ್ತೇನೆ ಎನ್ನುವ ಮಾತನ್ನ ಹೇಳಿದ್ದಾರೆ.‌ ನಾನು ಮೊದಲಿನಿಂದಲೂ ಕೂಡಾ ಹೇಳಿಕೊಂಡು ಬಂದಿದ್ದು ಅದರಂತೆಯೇ ಈಗ ಈ ಪ್ರಶಸ್ತಿಯನ್ನ ಪುನೀತ್ ರಾಜ್‌ಕುಮಾರ್, ಕನ್ನಡದ ಜನರಿಗೆ ಮತ್ತು ದೈವನರ್ತಕರಿಗೆ ಅರ್ಪಣೆ ಮಾಡುತ್ತೇನೆ ಎಂದು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.‌

ಇದೇ ವೇಳೆ ಅವರು ಹೊಂಬಾಳೆ ಸಂಸ್ಥೆಯ ‘ಕಾಂತಾರ’ ಚಿತ್ರ (Kantara Movie) ತಂಡಕ್ಕೆ ಧನ್ಯವಾದವನ್ನು ತಿಳಿಸುತ್ತೇನೆ. ಹೊಂಬಾಳೆ ನಿರ್ಮಾಣ ಸಂಸ್ಥೆಗೆ 4 ಪ್ರಶಸ್ತಿಗಳು ಬಂದಿದೆ ಎನ್ನುವ ವಿಚಾರವನ್ನ ಸಹಾ ರಿಷಬ್ ಶೆಟ್ಟಿ ಅವರು ಸಂತೋಷದಿಂದಲೇ ಹೇಳಿದ್ದಾರೆ.. ಪ್ರಶಸ್ತಿ ಘೋಷಣೆ ಮಾಡುವುದನ್ನು ನಾನು ಸಹಾ ನೋಡ್ತಾ ಇದ್ದೆ. ಪ್ರಶಸ್ತಿ ಘೋಷಣೆ ಆದಾಗ ಖುಷಿಯಾಯ್ತು.

ಕನ್ನಡ ಚಿತ್ರರಂಗವು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿದೆ, ಹಾಗಾಗಿಯೇ ಈಗ ಈ ಪ್ರಶಸ್ತಿ ಬಂದಿರೋದು. ನಾನು ಇಡೀ ಚಿತ್ರತಂಡ ಮತ್ತು ಎಲ್ಲಾ ಸದಸ್ಯರಿಗೆ ನಾನು ಥ್ಯಾಂಕ್ಸ್ ಅನ್ನು ಹೇಳಬೇಕು. ಡಿಓಪಿಯಾಗಿ ಕೆಲಸ ಮಾಡಿದವರು ಮತ್ತು ಪತ್ನಿ ಪ್ರಗತಿ ಶೆಟ್ಟಿ ಕಾಸ್ಟ್ಯೂಮ್‌ ಡಿಸೈನರ್ ಆಗಿದ್ದರು. ಈ ಯಶಸ್ಸಿಗೆ ಅಜಿನೀಶ್ ಲೋಕನಾಥ್ ಸಂಗೀತ ಸಹಾ ಮುಖ್ಯವಾಗಿತ್ತು. ಸಿನಿಮಾದ ಎಲ್ಲಾ ನಟ ನಟಿಯರಿಗೂ, ತಾಂತ್ರಿಕ ವರ್ಗಕ್ಕೂ ಮತ್ತು ಸಿನಿಮಾ ನಿರ್ಮಾಣ ಮಾಡಿದ ಹೊಂಬಾಳೆ ಸಂಸ್ಥೆಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ ರಿಷಬ್ ಶೆಟ್ಟಿ.

Actress Jayasudha: ಆ ಕ್ರಿಕೆಟ್ ಆಟಗಾರನ್ನ ಮದುವೆಯಾಗಲು ಇಷ್ಟ ಪಟ್ಟೆ, ಆದ್ರೆ ಸಲಿಂಗಕಾಮಿ ಅಂತ ತಿಳಿದು ಶಾಕ್ ಆದೆ

Leave a Comment