Amruthadhaare: ಕೈ ಮುಗಿತೀವಿ ಮುಗಿಸಿಬಿಡಿ, ಆಗ ಅಮೃತಧಾರೆಯನ್ನ ಮೆಚ್ಚಿದ ಪ್ರೇಕ್ಷಕರಿಂದಲೇ ಈಗ ಅಸಮಾಧಾನ

Written by Soma Shekar

Published on:

---Join Our Channel---

Amruthadhaare : ಕಿರುತೆರೆಯಲ್ಲಿ ಪ್ರಸಾರ ಆಗುತ್ತಿರುವ ಅಮೃತಧಾರೆ (Amruthadhaare) ಸೀರಿಯಲ್ ಪ್ರೇಕ್ಷಕರ ವಿಶೇಷ ಮೆಚ್ಚುಗೆಯನ್ನು ಪಡೆದುಕೊಂಡಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಭೂಮಿಕಾ ಮತ್ತು ಗೌತಮ್ ನಡುವಿನ ಪ್ರೀತಿಯ ಕಥೆ ಪ್ರೇಕ್ಷಕರ ವಿಶೇಷ ಮೆಚ್ಚುಗೆಗಳನ್ನು ಪಡೆದುಕೊಂಡಿದೆ. ಅಲ್ಲದೇ ಬೇರೆ ಸೀರಿಯಲ್ ಗಳ ತರ ನಾಯಕಿ ಪಾತ್ರವನ್ನು ದುರ್ಬಲ ಅನ್ನೋ ಬದಲಾಗಿ ಒಬ್ಬ ದಿಟ್ಟ ಹೆಣ್ಣು ಎನ್ನುವಂತೆಯೇ ತೋರಿಸಲಾಗಿತ್ತು.

ಭೂಮಿಕಾಳ (Bhumika) ದಿಟ್ಟ ನಡೆ, ನೇರ ಮಾತು, ಅತ್ತೆಯ ಪ್ಲಾನ್ ಗಳಿಗೆ ನೀಡುವ ತಿರುಗೇಟು ಜನರಿಗೆ ಬಹಳ ಇಷ್ಟವಾಗಿತ್ತು. ಆದರೆ ಈಗ ಅಮೃತಧಾರೆಯ ಇತ್ತೀಚಿನ ಎಪಿಸೋಡ್ ಗಳನ್ನು ನೋಡಿದ ಮೇಲೆ ಪ್ರೇಕ್ಷಕರು ಅಸಮಾಧಾನಗೊಂಡಿದ್ದಾರೆ. ಬೇರೆ ಸೀರಿಯಲ್ ಗಳ ತರಾನೇ ಈಗ ಅಮೃತಧಾರೆಯಲ್ಲೂ ಭೂಮಿಕಾ ಪಾತ್ರವನ್ನ ದುರ್ಬಲ ಅನ್ನೋ ರೀತಿ ತೋರಿಸಲಾಗ್ತಿದೆ ಅನ್ನೋದೇ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.

ಹೌದು, ಅಪೇಕ್ಷಾ ಮತ್ತು ಪಾರ್ಥನ ಮದುವೆ ವಿಚಾರದಲ್ಲಿ ಪರಿಸ್ಥಿತಿ ಹಾಗೂ ಅಪೇಕ್ಷಾಳನ್ನು ಸಹಾ ಭೂಮಿಕಾ ವಿರುದ್ಧ ಎತ್ತಿ ಕಟ್ಟಲು ಶಕುಂತಕಾ ದೇವಿ ಮಾಡಿದ ಪ್ಲಾನ್ ಸಕ್ಸಸ್ ಆಗಿದೆ. ಒಂದೇ ಮನೆಗೆ ಸೊಸೆಯರಾಗಿರುವ ಅಕ್ಕ ತಂಗಿ ನಡುವೆ ಇನ್ಮುಂದೆ ಸಮರ ಶುರುವಾಗಲಿದೆ. ಈ ಬಾರಿ ಅತ್ತೆಯ ಮುಂದೆ ಭೂಮಿಕಾ ಸೋತಿದ್ದಾಳೆ.

ಇದನ್ನ ನೋಡಿದ ಅಭಿಮಾನಿಗಳು ಭೂಮಿಕಾನ ಈ ರೀತಿ ಎಮೊಷನಲ್ ಆಗಿ ನೋಡೋಕೆ‌ ಆಗಲ್ಲ. ಅವರು ಮೊದಲಿನ ಹಾಗೇ ಸ್ಟ್ರಾಂಗ್ ಆಗಿ ಇದ್ದರೆ ನೋಡೋಕೆ ಆಸಕ್ತಿ ಇರುತ್ತೆ. ಇಲ್ಲದೇ ಹೋದ್ರೆ ಸೀರಿಯಲ್ ನಮಗೆ ಬೋರ್ ಹೊಡಿಸೋದು ಪಕ್ಕಾ. ಇದು ಕೂಡಾ ಎಲ್ಲಾ ಸೀರಿಯಲ್ ಗಳ ತರಾನೇ ಆಗ್ತಾ ಇದೆ. ನಿರ್ದೇಶಕರೇ ಸೀರಿಯಲ್ ಎಲ್ಲಿಂದ ಎಲ್ಲಿಗೆ ಹೋಗ್ತಿದೆ. ಕೈಮುಗಿತೀವಿ ದಯವಿಟ್ಟು ಸೀರಿಯಲ್ ಮುಗಿಸಿ ಬಿಡಿ ಅಂತಿದ್ದಾರೆ ಪ್ರೇಕ್ಷಕರು.‌

Srirastu Shubhamastu: ಎದುರಲ್ಲಿ ಕೋಪ, ಮನಸ್ಸಲ್ಲಿ ಪ್ರೀತಿ, ಕಣ್ಣಲ್ಲೇ ಮಾತಾಡೋ ಸಮರ್ಥ್ ಗೆ ಫ್ಯಾನ್ಸ್ ಫಿದಾ

Leave a Comment